ಸುಗ್ಗಿ ರಂಗಸಂಭ್ರಮ-2019

ಗುಬ್ಬಿ

       ನಾಡಕಲೆಯ ಸೊಗಡಿನ ಜೀವಂತಿಕೆಯು ಅಂತರ್‍ಪ್ರವಹಿಸುವಿಕೆ ಇದ್ದಾಗ ಮಾತ್ರ ರಂಗಭೂಮಿಯ ಉಳಿವು ಮತ್ತು ನಿರಂತರತೆ ಸಾಧ್ಯವೆಂದು ವಾಲ್ಮೀಕಿ ಬಳದ ಅಧ್ಯಕ್ಷ ಕೆ.ಎಸ್.ಸತೀಶ್ ಅಭಿಪ್ರಾಯಪಟ್ಟರು.

      ತಾಲ್ಲೂಕಿನ ಜೋಡಿಕೊಪ್ಪ ಗ್ರಾಮದಲ್ಲಿ ಮೆಳೇಕಲ್ಲಹಳ್ಳಿ ಕುಸುಮ ಕಲಾ ಸಂಘದ ವತಿಯಿಂದ ಏರ್ಪಡಿಸಿದ್ದ ಸುಗ್ಗಿ ರಂಗಸಂಭ್ರಮ-2019 ರ ಐದನೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಯೋಜಿಸಿದ್ದ ಆಧುನಿಕತೆಯಿಂದಾಗಿ ನಶಿಸುತ್ತಿರುವ ರಂಗ ಕಲೆಯ ಉನ್ನತೀಕರಣಕ್ಕೆ ಇಂದಿನ ಯುವಜನತೆಯು ವಿಶಾಲಮನೋಭಾವವನ್ನು ಬೆಳೆಸಿಕೊಂಡು ತಮ್ಮ ದುಡಿಮೆ ಜೊತೆಗೆ ಇಂಥಾ ವಿಚಾರಗಳತ್ತ ಮನಸ್ಸು ಹರಿಸಿ ತೊಡಗಿಸಿಕೊಂಡಾಗ ಮಾತ್ರ ನಮ್ಮ ಭವ್ಯಪರಂಪರೆಯು ಮುಂದಿನ ತಲೆಮಾರಿಗೆ ಕೊಂಡೊಯ್ಯಲು ಸಾಧ್ಯ. ಇಲ್ಲವಾದರೆ ಬರಿ ಪಠ್ಯವಾಗಿ ಉಳಿಯುವುದರಲ್ಲಿ ಸಂಶಯವಿಲ್ಲ ಎಂದರು.

        ಕಲಾವಿದ ವಿನೋದ್ ಮಾತನಾಡಿ ಕಾವ್ಯೇಶು ನಾಟಕಂ ರಮ್ಯಂ ಎಂಬಂತೆ ಯಾವುದೇ ಕೃತಿ ಸಾಹಿತ್ಯ, ಕಲೆ ಜನತೆಯ ಮುಂದೆ ಪ್ರದರ್ಶನಗೊಂಡಾಗ ಮಾತ್ರ ತನ್ನ ನೈಜತೆಯನ್ನು ತೆರೆದಿಡುತ್ತದೆ ಎಂದ ಅವರು, ಗ್ರಾಮೀಣ ಕಲೆ ಸಂಸ್ಕತಿಯನ್ನು ಉಳಿಸಿ ಬೆಳೆಸುವಲ್ಲಿ ರಂಗ ಕಲೆಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.

         ಹಿರಿಯ ಕಲಾವಿದ ಶಿವಣ್ಣ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ನಾಡಿನ ಜನತೆಯ ಸಹಕಾರ ಪ್ರೋತ್ಸಾಹ ಸೇವೆಗಳ ಅಗತ್ಯತೆ ಬಹಳ ಅವಶ್ಯವಾಗಿದ್ದು ಆ ಮೂಲಕ ಭಾರತೀಯ ಸಂಸ್ಕತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈ ಜೋಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ವೀರಣ್ಣ, ಮಲ್ಲೇಶಣ್ಣ, ರಂಗಕರ್ಮಿಗಳಾದ ರಮೇಶ್ ಮೆಳೇಕಲ್ಲಹಳ್ಳಿ, ವೆಂಕಟೇಶಯ್ಯ, ದರ್ಶನ್, ವಿನಯ್, ಆದಿಮೂರ್ತಿ ಮುಂತಾದವರು ಭಾಗವಹಿಸಿದ್ದರು.

        ನಂತರ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಅಮರೇಶ್ವರ ನಾಟಕ ಮಂಡಲಿ ತುಮಕೂರು ಇವರಿಂದ ಜ್ವಾಲೆನಾಟಕ ಹಾಗೂ ಕುಸುಮ ಕಲಾ ಸಂಘ ಮೆಳೇಕಲ್ಲಹಳ್ಳಿ ಇವರಿಂದ ಪ್ರಜಾನೀತಿ ನಾಟಕಗಳು ನರೆದಿದ್ದ ಜನರಲ್ಲಿ ನಗೆಯಬುಗ್ಗೆಯನ್ನು ಸೃಷ್ಟಿಸಿ ಮನಸ್ಸಿನ ದುಗುಡಗಳನ್ನು ಕಳೆಯುವಲ್ಲಿ ಸಹಕಾರಿಯಾದವು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link