ಜಿ.ಪಂ. ಆವರಣದಲ್ಲಿ ಸ್ವಚ್ಛತಾ ಕಾರ್ಯ

ದಾವಣಗೆರೆ:

      ಜಿಲ್ಲಾ ಮತ್ತು ತಾಲೂಕು ಪೋಟೋಗ್ರಾಫರ್ಸ್ ವೇಲ್‍ಪೇರ್ ಅಸೋಸಿಯೇಷನ್ ವತಿಯಿಂದ ನಗರದ ಜಿ.ಪಂ ಕಚೇರಿಯ ಅವರಣದಲ್ಲಿ ಮಹಾತ್ಮ ಗಾಂಧಿಜೀ, ಲಾಲ್ ಬಹದ್ದೂರು ಶಾಸ್ತ್ರಿಜೀ ಅವರ ಜನ್ಮದಿನ ಹಿನ್ನಲೆಯಲ್ಲಿ ಅವರಣವನ್ನು ಸ್ವಚ್ಚ ಮಾಡುವ ಮೂಲಕ ಸ್ವಚ್ಛ ಭಾರತ ಅಭಿಯಾನಕ್ಕೆ ನಗರದ ಛಾಯಾಗ್ರಾಹಕರು ಚಾಲನೆ ನೀಡಿದರು.

      ಈ ಸಂದರ್ಭ ಮಾತನಾಡಿದ ಜಿ.ಪಂ ಅಧ್ಯಕ್ಷೆ ಕೆ.ಆರ್.ಜಯಶೀಲಾ ಆವರಣದಲ್ಲಿನ ಸ್ವಚ್ಛ ಮಾಡಿರುವುದಕ್ಕೆ ಛಾಯಾಗ್ರಾಹಕರಿಗೆ ಅಭಿನಂದನೆ ಸಲ್ಲಿಸಿದರು.

      ಸಿಇಒ ಅಶ್ವತಿ ಮಾತನಾಡಿ, ಜಿ.ಪಂ ಆವರಣದಲ್ಲಿ ಸ್ವಚ್ಛತೆ ಛಾಯಾಗ್ರಾಹಕರು ಕೈಗೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಅಧಿಕಾರಿಗಳು ಅವರಣ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವಂತೆ ತಾಕೀತು ಮಾಡಿದರು. ಈ ವೇಳೆ ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್, ಜಿಲ್ಲಾಧ್ಯಕ್ಷ ಶಿಕಾರಿ ಶಂಭು ,ಶ್ರೀನಾಥ ಅಗಡಿ, ಹೆಚ್‍ಕೆಸಿ ರಾಜು, ವಿಜಯಜಾಧವ್, ದುಗ್ಗೇಶ ಕಡೇಮನಿ, ಕೆ.ಪಿ.ನಾಗರಾಜ್, ಶಿವಶಂಕರ, ಮಂದಾರ ಬಸವರಾಜ್, ಕಿರಣಕುಮಾರ್ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link