ಕೆನರಾ ಬ್ಯಾಂಕ್‍ನಿಂದ ಸ್ವಚ್ಛತಾ ಅಭಿಯಾನ

ದಾವಣಗೆರೆ:

     ಕೇಂದ್ರ ಸರ್ಕಾರದ ಆಶಯದ ಮೇರೆಗೆ ‘ಸ್ವಚ್ಛತಾ ಸೇವೆ ಕಾರ್ಯಕ್ರಮದಡಿಯಲ್ಲಿ ಕೆನರಾಬ್ಯಾಂಕ್ ಕ್ಷೇತ್ರೀಯ ಕಛೇರಿಯ ನೇತೃತ್ವದಲ್ಲಿ ಇಲ್ಲಿನ ವಿದ್ಯಾನಗರ ಮುಖ್ಯ ರಸ್ತೆಯ ಸಾರ್ವಜನಿಕ ಉದ್ಯಾನವನದಲ್ಲಿ ಬ್ಯಾಂಕ್ ಉದ್ಯೋಗಿಗಳು ಹಾಗೂ ಅಧಿಕಾರಿಗಳು ಶ್ರಮದಾನ ಕೈಗೊಳ್ಳುವ ಮೂಲಕ ಸ್ವಚ್ಛತಾ ಅಭಿಯಾನ ನಡೆಸಿದರು.

      ನಗರದ ಕ್ಷೇತ್ರೀಯ ಕಛೇರಿ, ಲೀಡ್‍ಬ್ಯಾಂಕ್ ಎಲ್ಲ ಶಾಖೆಗಳು, ಕರೆನ್ಸಿಛೇಸ್ಟ್, ತೋಳಹುಣಸೆ ಸ್ವಯಂಉದ್ಯೋಗ ತರಬೇತಿ ಕೇಂದ್ರ ಹಾಗೂ ಆರ್‍ಎಹೆಚ್‍ನ ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.

       ಕೆನರಾಬ್ಯಾಂಕ್ ವಿಭಾಗೀಯ ಪ್ರಬಂಧಕ ಎಸ್.ಆರ್.ರಮೇಶ್, ಎನ್.ಟಿ.ಎರ್ರಿಸ್ವಾಮಿ, ಎ.ತಿಪ್ಪೇಸ್ವಾಮಿ, ಕೊರಗುನಾಯಕ್, ವ್ಯಾಸ ಪಾರ್ವತಿಕರ್, ಕೆನರಾಬ್ಯಾಂಕ್ ನೌಕರ ಸಂಘಟನೆಗಳ ಪದಾಧಿಕಾರಿಗಳಾದ ಕೆ.ರಾಘವೇಂದ್ರ ನಾಯರಿ, ಶಂಭುಲಿಂಗಪ್ಪ, ಭಾರತಿ, ಅನುರಾಧ ಮುತಾಲಿಕ್, ವಿಶ್ವನಾಥ ಬಿಲ್ಲವ, ಕ್ಷೇತ್ರೀಯ ಕಛೇರಿಯ ಹಿರಿಯ ಪ್ರಬಂಧಕ ಮುರುಳಿ, ಮಹೇಶ್ವರನ್, ಹರೀಶ್, ಕರೆನ್ಸಿ ವಿಭಾಗದ ಎಲ್.ಕೆ.ನಾಯಕ್, ತರಬೇತಿ ಕೇಂದ್ರದ ಕೃಷ್ಣಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link