ಎಂ ಎನ್ ಕೋಟೆ :
ಎಂ ಎನ್ ಕೋಟೆ ಗ್ರಾಮದ ಉಮೇಶ್ ಎಂಬುವರ ಗುಡಿಸಲು ಶನಿವಾರ ರಾತ್ರಿ ಸಿಲಿಂಡರ್ ಸ್ಪೋಟದಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ ಜಾಗಕ್ಕೆ ಗುಬ್ಬಿ ತಹಶೀಲ್ದಾರ್ ಮಮತ ಅವರು ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು.
ತಹಶೀಲ್ದಾರ್ ಮಮತ ಮಾತನಾಡಿ ನಮ್ಮ ಇಲಾಖೆಯಿಂದ ಬರುವ ಸೌಲಭ್ಯವನ್ನು ಕೂಡಲೇ ನಾವು ರೈತ ಉಮೇಶ್ ಎಂಬುವರಿಗೆ ಕೊಡಲಾಗುತ್ತದೆ. ತಾತ್ಕಲಿಕವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಕೊಡಲೇ ವ್ಯವಸ್ಥೆ ಮಾಡಿ ಎಂದು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರು.ನಮ್ಮ ಇಲಾಖೆಯಲ್ಲಿ ಎಷ್ವು ಆಗುತ್ತದೆ ಅಷ್ವು ನಾವು ಇಲಾಖೆಯ ಅನುದಾನದಲ್ಲಿ ಅದಷ್ವು ಬೇಗನೆ ಪರಿಹಾರ ವ್ಯವಸ್ಥೆ ಮಾಡಿಕೊಡಲಾಗುತ್ತದೆ.ಉಮೆಶ್ ಎಂಬುವರಿಗೆ ವಾಸವಿರಲು ಮನೆಯಿಲ್ಲ ತಾತ್ಕಲಿಕವಾಗಿ ಪಂಚಾಯಿತಿ ವತಿಯಿಂದ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಬೆಂಕಿಯಿಂದ ಸುಟ್ಟಿರುವ ಹಸುವಿಗೆ ದಿನ ನಿತ್ಯ ಚಿಕಿತ್ಸೆಯನ್ನು ಕೊಡಿ ಎಂದು ವೆಟೂನರಿ ಅಧಿಕಾರಿಗಳಿಗೆ ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಗ್ರಾಮ ಪಂಚಾಯಿತಿ ವತಿಯಿಂದ ನಾವು ತಾತ್ಕಲಿಕವಾಗಿ ನಾವು ಉಮೇಶ್ ಎಂಬುವವರಿಗೆ ಪರಿಹಾರ ವ್ಯವಸ್ಥೆ ಮಾಡಲಾಗುತ್ತದೆ ಜತೆಗೆ ಜಾನುವಾರು ಶೆಡ್ ನಿರ್ಮಾಣ ಮಾಡಿಕೊಡಲಾಗುತ್ತದೆ. ಗ್ರಾಮ ಪಂಚಾಯಿತಿ ವತಿಯಿಂದ ವಸತಿ ಯೋಜನೆಯಡಿಯಲ್ಲಿ ಆಯ್ಕೆ ಪಟ್ಟಿಯಲ್ಲಿ ಉಮೇಶ್ ಎಂಬುವರ ಹೆಸರು ಆಯ್ಕೆ ಮಾಡಿ ವಸತಿ ನಿಗಮಕ್ಕೆ ಕಳಿಸಲಾಗಿದ್ದು ನಿಗಮದಿಂದ ಕಾರ್ಯದೇಶ ಬಂದಿಲ್ಲ ಬಂದ ತಕ್ಷಣ ಮನೆಯನ್ನು ಕಟ್ಟಿಸಲು ಪ್ರಾರಂಭಮಾಡಲಾಗುತ್ತದೆ ಎಂದು ತಿಳಿಸಿದರು.
ಕಂದಾಯ ಅಧಿಕಾರಿ ನಾರಾಯಣ್ , ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ್ ,ಗ್ರಾಮ ಲೆಕ್ಕಧಿಖಾರಿ ಮಲ್ಲಿಕಾರ್ಜುನ್ , ಪಿಡಿಓ ನಾಗೇಂದ್ರ , ಗ್ರಾಮ ಪಂಚಾಯಿತಿ ಸದಸ್ಯರಾದ ಷಣ್ಮುಖರಾಧ್ಯ, ದೇವರಾಜು, ಮಾಜಿ ಉಪಾಧ್ಯಕ್ಷರಾದ ಎಂ ಎನ್ ಭೀಮಶೆಟ್ಟಿ, ಶಿವಕುಮಾರ್ , ಹಾಗೂ ಚೇಳೂರು ಪೋಲಿಸರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ