ದಿನಸಿ ಅಂಗಡಿ ಮೇಲೆ ತಹಸೀಲ್ದಾರ್ ದಾಳಿ

ತಿಪಟೂರು
      ಬುಧವಾರ ಬೆಳಗ್ಗೆ ನಗರದ ಕೆ.ಆರ್.ಬಡಾವಣೆಯಲ್ಲಿರುವ ಬನಶÀಂಕರಿ ಸ್ಟೋರ್ಸ್ ಮೇಲೆ ತಹಸೀಲ್ದಾರ್ ದಾಳಿ ನಡೆಸಿ, ಖರೀದಿ ಬಿಲ್ ಇಲ್ಲದೆ ವ್ಯಾಪಾರ ಮಾಡುವುದು ಗಮನಕ್ಕೆ ಬಂದಾಗ ಕಮರ್ಷಿಯಲ್ ಟ್ಯಾಕ್ಸ್ ರವರಿಗೆ ಅಗತ್ಯ ಕ್ರಮಕ್ಕೆ ಸೂಚಿಸಿದರು. ಕೆಲವು ಅಂಗಡಿಗಳ ಮೇಲೆ ದಿಢೀರ್ ದಾಳಿ ನಡೆಸಿದ ತಹಸೀಲ್ದಾರ್, ಆಹಾರ ನಿರೀಕ್ಷಕರಾದ ರೇಣುಕಾ ಪ್ರಸಾದ್, ಕಾನೂನು ಮಾಪನಶಾಸ್ತ್ರ ನಿರೀಕ್ಷಕರಾದ ಬೀನಾ ಅನಿರೀಕ್ಷಿತ ತಪಾಸಣೆ ನಡೆಸಿದರು. ಜೊತೆಗೆ ಅನಧಿಕೃತವಾಗಿ ಎಲೆಕ್ಟ್ರಿಕಲ್ ಶಾಪ್ ತೆಗೆದಿದ್ದನ್ನು ಗಮನಿಸಿ ಪೊಲೀಸ್ ಇಲಾಖೆಯವರಿಂದ ಮುಚ್ಚಿಸಲಾಯಿತು.
 
     ಇನ್ನೂ ನಗರದಲ್ಲಿ ಬಹಳಷ್ಟು ದಿನಸಿ ಅಂಗಡಿಗಳಲ್ಲಿ ಯಾವುದೇ ದರ ಪಟ್ಟಿಯನ್ನು ಹಾಕಿರುವುದಿಲ್ಲ. ಈಗಾಗಲೇ ದಿನಸಿ ದರಗಳು ಗಗನವನ್ನು ಮುಟ್ಟುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದವರಿಗೆ ದಿನಸಿ  ಗಗನ ಕುಸುಮವಾಗಲಿದೆ. ಈಗಲಾದರೂ ತಹಸೀಲ್ದಾರರು ಮತ್ತು ಆಹಾರ ನಿರೀಕ್ಷಕರು  ಮತ್ತಷ್ಟು ಕಾರ್ಯಪ್ರವೃತ್ತರಾಗಿ ಜನರಿಗೆ ನ್ಯಾಯ ದೊರಕಿಸಿಕೊಡಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.ಎಲ್ಲಾ ತಾಲ್ಲೂಕುಗಳಲ್ಲೂ ತಹಸೀಲ್ದಾರರು ದಿನಸಿ ದರಪಟ್ಟಿಯನ್ನು ಹಾಕಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು,  ನಮ್ಮ ತಾಲ್ಲೂಕಿನಲ್ಲಿ ಅಧಿಕಾರಿಗಳು ಮತ್ತು ಜನಪತ್ರಿನಿಧಿಗಳು ಏನು ಮಾಡುತ್ತಿದ್ದಾರೆಂದು  ಭಾರಿ ಚರ್ಚೆಯಾಗುತ್ತಿದೆ.
    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link