ಟೈಲರ್ಸ್ ಕಲ್ಯಾಣ ಮಂಡಳಿಗಾಗಿ ಸಂಘಟಿತ ಹೋರಾಟಕ್ಕೆ ಕರೆ

ದಾವಣಗೆರೆ:

       ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗಾಗಿ ಸಂಘಟಿತ ಹೋರಾಟ ನಡೆಸಬೇಕೆಂದು ಟೈಲರ್ಸ್ ಫೆಡರೇಷನ್‍ನ ರಾಜ್ಯ ಕಾರ್ಯದರ್ಶಿ ಆನಂದರಾಜ್ ಕರೆ ನೀಡಿದರು.ನಗರದ ಕಾಮ್ರೇಡ್ ಪಂಪಾಪತಿ ಭವನದಲ್ಲಿ ಇತ್ತೀಚೆಗೆ ನಡೆದ ಎಐಟಿಯುಸಿ ನೇತೃತ್ವದ ಟೈಲರ್ಸ್ ಮತ್ತು ಸಹಾಯಕರ ಫಡರೇಷನ್‍ನ ಜಿಲ್ಲಾ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗಾಗಿ ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಲು ಸಂಘಟಿತ ಹೋರಾಟ ನಡೆಸುವ ಅವಶ್ಯಕತೆ ಇದೆ ಎಂದರು.

         ಸಕಾರ ಜಾರಿಗೆ ತಂದಿರುವ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾಮಂಡಳಿಯಿಂದ ಟೈಲರ್‍ಗಳ ಕಟುಂಬಗಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೇಂದ್ರ ಸರ್ಕಾರದ ನೂತನ ಪಿಂಚಣಿ ಯೋಜನೆ ಕೂಡ ಸ್ಪಷ್ಟತೆ ಹೊಂದಿಲ್ಲ. ಹೀಗಾಗಿ ಟೈಲರ್‍ಗಳ ಪರಿಸ್ಥಿತಿ ಅತ್ಯಂತ ದಯನೀಯವಾಗಿದ್ದು, ಇವರ ಪರಿಸ್ಥಿತಿ ಸುಧಾರಣೆಗೆ ಸರ್ಕಾರ ಟೈಲರ್ಸ್ ಕಲ್ಯಾಣ ಮಂಡಳಿ ಜಾರಿಗೆ ತರಬೇಕೆಂದು ಆಗ್ರಹಿಸಿದರು.
ಅಧ್ಯಕ್ಷತೆ ವಹಿಸಿದ್ದ ಫೆಡರೇಷನ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿದರು.

          ಸಭೆಯಲ್ಲಿ ಸೈಯದ್ ಖಾಜಾಪೀರ್, ಯಶೋಧ ವೆಂಕಟೇಶ್, ಪ್ರೇಮಲತಾ, ಸಾಕ್ಷಿ, ನೇತ್ರಾವತಿ, ಕವಿತಾ, ಸರೋಜಾ ಮತ್ತಿತರರು ಉಪಸ್ಥಿತರಿದ್ದರು.ಸಿ.ರಮೇಶ್ ಸ್ವಾಗತಿಸಿದರು. ಐರಣಿ ಚಂದ್ರು ಜಾಗೃತ ಗೀತೆಗಳನ್ನು ಹಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap