ಚಿತ್ರದುರ್ಗ
ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಜನತೆಗೆ ಶುದ್ದವಾದ ಕುಡಿಯುವ ನೀರನ್ನು ಒದಗಿಸಿ, ಪ್ರಾರಂಭವಾಗದೇ ಇರುವ 14 ಆರ್.ಓ.ಘಟಕಗಳಿಗೆ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡುವ ಮೂಲಕ ಅವುಗಳನ್ನು ಉಪಯೋಗ ಮಾಡುವಂತೆ ಚಿತ್ರದುರ್ಗ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಡಿ.ಎಂ.ಲಿಂಗರಾಜು ಅಧಿಕಾರಿಗೆ ಸೂಚನೆ ನೀಡಿದರು.
ಚಿತ್ರದುರ್ಗ ತಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಪಂಚಾಯಿತಿಯ ಮಾಸಿಕ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರ್ಕಾರದಿಂದ ಅನುದಾನ ನೀಡಿ ಜನತೆಗೆ ಶುದ್ದವಾದ ನೀರನ್ನು ನೀಡಬೇಕೆಂದು ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಆದರೆ ನೀವುಗಳು ನೀರಿಲ್ಲ ಎಂದು ತಾಲ್ಲೂಕಿನಲ್ಲಿ 14 ಘಟಕಗಳನ್ನು ಪ್ರಾರಂಭ ಮಾಡದೇ ಹಾಗೇಯೇ ಸುಮ್ಮನೆ ಇರುವುದು ಸರಿಯಲ್ಲ ಇದರಿಂದ ಈ ಘಟಕಗಳಿಗೆ ಪಂಚಾಯಿತಿವತಿಯಿಂದ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ
ಅದರಿಂದ ಘಟಕವನ್ನು ಪ್ರಾರಂಭ ಮಾಡಿ ಜನತೆಗೆ ಶುದ್ದವಾದ ನೀರನ್ನು ನೀಡುವಂತೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿಗೆ ಸೂಚನೆ ನೀಡಿದರು.
ಇದಕ್ಕೂ ಮುನ್ನಾ ಇಲಾಖೆಯ ಅಧಿಕಾರಿ ತಾಲ್ಲೂಕಿನಲ್ಲಿ ಸುಮಾರು 57 ಆರ್.ಓ,ಘಟಕಗಳನ್ನು ನಿರ್ಮಾಣ ಮಾಡಲಾಗಿದೆ ಇದರಲ್ಲಿ 43 ಘಟಕಗಳು ಕೆಲಸ ಮಾಡುತ್ತಿದೆ ಉಳಿದ 14 ಘಟಕಗಳಿಗೆ ನೀರಿಲ್ಲದೆ ಪ್ರಾರಂಭ ಮಾಡಿಲ್ಲ ಎಂದು ತಿಳಿಸಿದಾಗ ಅಧ್ಯಕ್ಷರ ಇದರ ಬಗ್ಗೆ ಪಂಚಾಯಿತಿಯ ಪಿಡಿಓರವರನ್ನು ಭೇಟಿ ಮಾಡಿ ನೀರಿನ್ನು ಪಡೆಯಲು ಪ್ರಯತ್ನ ಮಾಡಬೇಕಿತ್ತು ಎಂದಾಗ ಅದನ್ನು ಮಾಡಿದೆ ಆಗಲಿಲ್ಲ ಎಂದು ಅಧಿಕಾರಿಯ ಉತ್ತರಕ್ಕೆ ನಾಳೆಯಿಂದಲೇ ಪಂಚಾಯಿತಿವತಿಯಿಂದ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದರು.
ಚಿತ್ರದುರ್ಗ ಬರಗಾಲದ ಜಿಲ್ಲೆಯಾಗಿದೆ ಮುಂದಿನ ದಿನಮಾನದಲ್ಲಿ ಬೇಸಿಗೆ ಆರಂಭವಾಗಲಿದೆ,ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡಬೇಕಿದೆ, ಜನತೆಗೆ ನೀರಿನ ತೊಂದರೆಯಾಗದಂತೆ ಎಚ್ಚರವಹಿಸಬೇಕಿದೆ ಇದಕ್ಕೆ ಬೇಕಾದ ಸಿದ್ದತೆಯನ್ನು ಮಾಡಬೇಕಿದೆ ಎಂದು ಸೂಚಿಸಿದ ಅಧ್ಯಕ್ಷರು, ಬೆಟ್ಟದ ನಾಗೇನಹಳ್ಳಿಯ ದಿಬ್ಬದ ಬಳಿ ಹಾಕಿರುವ ಬೋರ್ವೆಲ್ಗೆ ಶೀಘ್ರವಾಗಿ ಮೋಟಾರ್ ಪೈಪ್ ಲೈನ್ ಆಳವಡಿಕೆ ಮಾಡಿ ಜನತೆಗೆ ನೀರನ್ನು ನೀಡುವಂತೆ ಸೂಚಿಸಿದಾಗ ಅಲ್ಲಿಂದ ಪೈಪ್ಲೈನ್ ಮೂಲಕ ನೀರು ತರಲು ತಡವಾಗುತ್ತದೆ ಇದರ ಬದಲಾಗಿ ಅಲಿಂದಲೇ ಟ್ಯಾಂಕರ್ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತದೆ ಎಂದು ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸಭೆಯಲ್ಲಿ ಇಲಾಖೆಯ ವಿವಿಧ ಯೋಜನೆಯ ಬಗ್ಗೆ ಮಾಹಿತಿ ನೀಡಿ ರೈತರು ಕೃಷಿ ಹೊಂಡವನ್ನು ಮಾಡಿಕೊಳ್ಳಲು ಫೆ. 15ರವರೆಗೆ ಅವಕಾಶ ಇದೆ ಎಷ್ಟೇ ರೈತರು ಬಂದರು ಸಹಾ ಅವರು ಮಾಡಿಕೊಳ್ಳುವ ಕೃಷಿ ಹೊಂಡದ ಅಳತೆಗೆ ಅನುಗುಣವಾಗಿ ಸಾಮಾನ್ಯರಿಗೆ 80 ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ. 90 ರಷ್ಟು ಸಹಾಯಧನ ಸಿಗಲಿದೆ. ಇದ್ದಲ್ಲದೆ ಇದಕ್ಕೆ ಬೇಕಾದ ಹನಿ ನೀರಾವರಿ, ಮೋಟಾರ್ ಪಂಪ್, ಜನ ಮತ್ತು ಪ್ರಾಣಿಗಳಿಂದ ರಕ್ಷಣೆ ಮಾಡಲು ತಂತಿ ಬೇಲಿ, ನೀರು ಆವಿ ಆಗದಂತೆ ತಡೆಯಲು ಷೆಡ್ನಟ್ ಸಹಾ ದೊರೆಯಲಿದೆ ಎಂದು ತಿಳಿಸಿದರು.
ರೈತರ ಬೆಳೆಗೆ ಬರಬೇಕಾದ ವಿಮಾ ಹಣಕ್ಕೆ ಸಂಬಂಧಪಟ್ಟಂತೆ ಕಸಬಾ ಹೋಬಳಿಯಲ್ಲಿ ನಿರ್ಧಾರವಾಗಿದ್ದು ಶೀಘ್ರವಾಗಿ ಬರಲಿದೆ, ಕಳೆದ ವರ್ಷದ್ದು ಪೂರ್ಣ ಪ್ರಮಾಣವಾಗಿ ಬಂದಿದೆ ಎಂದು ತಿಳಿಸಿದಾಗ ಇಓ ರಾಜಾನಾಯ್ಕ ಶೀಘ್ರವಾಗಿ 19-20ನೇ ಸಾಲಿನ ಕ್ರಿಯಾ ಯೋಜನೆಯನ್ನು ತಯಾರು ಮಾಡಿ ಕಳುಹಿಸುವಂತೆ ಸೂಚಿಸಿದರು.ಸಭೆಯಲ್ಲಿ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ತಿಪ್ಪಮ್ಮ ಪಂಚಾಯಿತಿಯ ಹನುಮಂತಪ್ಪ ಸೇರಿದಂತೆ ವಿವಿಧ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
