ಹೊಸದುರ್ಗ:
ತಂಬಾಕು ಸೇವನೆಯಿಂದ ಆರೋಗ್ಯಕ್ಕೆ ಹಾನಿಯಾಗಲಿದ್ದು, ತಂಬಾಕು ಸೇವೆನೆ ಸಂದರ್ಭದಲ್ಲಿ ಸುತ್ತಮುತ್ತಲಿನ ಅಮಾಯಕರಿಗೂ ತೊಂದರೆಯಾಗಲಿದೆ ಆದ್ದರಿಮದ ತಂಬಾಕು ಸೇವೆನಿಂದ ದೂರವಿರುವುದು ಒಳಿತು ಎಂದು ಇಲ್ಲಿನಜೆಎಂಎಫ್ಸಿ ಸಿವಿಲ್ ನ್ಯಾಯಾಧೀಶರಾದ ಪ್ರಶಾಂತ್ ನಾಗಲಾಪೂರ ತಿಳಿಸಿದರು.
ಪಟ್ಟಣದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯಲ್ಲಿ ಶನಿವಾರ ನಡೆದ ವಿಶ್ವ ತಂಬಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.
ಭಾರತದ ಸಂವಿಧಾನವು ತನ್ನ ಪ್ರತಿ ಪ್ರಜೆಗೂ ಗೌರವಯುತವಾಗಿ ಜೀವಿಸುವ ಮೂಲಭೂತ ಹಕ್ಕನ್ನು ನೀಡಿದೆ.ತಂಬಾಕು ಸೇವೆನೆ ರಾಷ್ಟ್ರದಲ್ಲಿ 2 ನೇ ಸ್ಥಾನ ಹೊಂದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿóಏಧಿಸುವ ಕಾನೂನು ನಮ್ಮ ದೇಶದಲ್ಲಿ 2003ರಿಂದ ಜಾರಿಯಲ್ಲಿದೆ. ಪ್ರತಿಯೊಬ್ಬರೂ ತಂಬಾಕು ಚಟವನ್ನು ಬಿಡಬೇಕಿದೆ. ತಂಬಾಕು ಮತ್ತು ಮಾದಕ ದ್ರವ್ಯ ಸೇವೆಗಳಂತಹ ಕೆಟ್ಟ ಸಹವಾಸದಿಂದ ಇಡೀ ಬದುಕನ್ನೇ ಕಷ್ಟದ ಪರಿಸ್ಥಿತಿಗೆ ದೂಡಿಕೊಳ್ಳುತ್ತಾರೆ. ಇದರಿಂದ ಸಮಾಜ ಅಭಿವೃದ್ದಿಗೂ ಹಿನ್ನಡೆಯಾಗಲಿದೆ. ತಂಬಾಕು ಸೇವೆನೆಯಿಂದ ಮನುಷ್ಯನಿಗೆ ನಪುಂಸಕತೆ ಉಂಟಾಗುತ್ತದೆ. ವಿಧ್ಯಾರ್ಥಿಗಳು ತಂಬಾಕು ಸೇವೆನೆಯ ಚಟಕ್ಕೆ ಬಿದ್ದು ನಿಮ್ಮ ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್ ಕಂಬಾಳಿಮಠ್ ಮಾತನಾಡಿ ಧೂಮಪಾನ ಹಾಗೂ ತಂಬಾಕು ಸೇವನೆಯಿಂದ ಹಲವಾರು ರೋಗಗಳು ಬರುತ್ತವೆ. ಹೃದಯ, ಉಸಿರಾಟ, ರಕ್ತಚಲನೆಯ ತೊಂದರೆಗಳು ಸೇರಿದಂತೆ ಕ್ಯಾನ್ಸರ್ ಂತಹ ಮಾರಕ ರೋಗಗಳು ಹರಡುತ್ತವೆ.ಮೊದಲು ಬಾಯಿಯಿಂದ ಶುರುವಾಗಿ ಅನ್ನನಾಳ, ಶ್ವಾಸಕೋಶ, ಲಿವರ್, ಪ್ಯಾಂಕ್ರಿಯಾಸ್ ಗಳ ಕ್ಯಾನ್ಸ್ರ್ಗಳು ಈ ದುಶ್ಚಟದಿಂದ ಬರುತ್ತವೆ ಎಂದರು.
ತಂಬಾಕು ನಿಯಂತ್ರಣದ ಬಗ್ಗೆ ಉಪನ್ಯಾಸ ನೀಡಿದ ಡಾ.ರೇಣುಪ್ರಸಾದ್ ಯಾವುದೇನಾಗರೀಕರು ಜೀವಿಸುವ ಪರಿಸರ ಹಾನಿಯಾಗದಂತೆ, ಮಲಿನಗೊಳ್ಳದಂತೆ ಕಾಯ್ದು ಕೊಳ್ಳಬೇಕು. ಅಷ್ಟೆ ಅಲ್ಲದೆ ಪರಿಸರದ ಸಮಗ್ರ ರಕ್ಷಣೆ ಸರ್ಕಾರ ಹಾಗೂ ಸಾರ್ವಜನಿಕರ ಕರ್ತವ್ಯ. ಯುವ ಜನರು ತಮ್ಮ ಜೀವನವನ್ನು ಆದರ್ಶಪ್ರಾಯವಾಗಿ ರೂಪಿಸಿಕೊಳ್ಳಬೇಕು. ಹಿರಿಯರ ಹಿತ ನುಡಿಗಳನ್ನು ಪಾಲಿಸಿ ಮತ್ತೊಬ್ಬರನ್ನು ಅನುಸರಿಸದೇ ತಮ್ಮದೇ ಸ್ವಂತಿಕೆ ಹಾಗೂ ಸೌಜನ್ಯಶೀಲತೆಗೆ ಅವಕಾಶ ಕೊಡಬೇಕು. ಯಾವುದೇ ಕೆಟ್ಟ ವ್ಯಸನಗಳಿಗೆ ದಾಸರಾಗಬಾರದು ಎಂದರು.
ಇದೇ ವೇಳೆ ಕ್ಷೇತ್ರಾ ಆರೋಗ್ಯ ಶಿಕ್ಷಣಾಧಿಕಾರಿ ವೀರೇಂದ್ರ ಪಾಟೀಲ್, ಹಿರಿಯ ಆರೋಗ್ಯ ಸಹಾಯಕ ಸಿದ್ದರಾಮಸ್ವಾಮಿ, ಇಂದಿರಾ ಗಾಂಧಿ ಪ್ಯಾರಾಮೆಡಿಕಲ್ ಕಾಲೇಜಿನ ಅಧ್ಯಕ್ಷ ಕೃಷ್ಣಮೂರ್ತಿ, ಸಹಾಯಕ ವೈಧ್ಯಾಧಿಕಾರಿಗಳು, ಆರೋಗ್ಯ ಸಹಾಯ ಅಧಿಕಾರಿಗಳು, ಹಾಗೂ ಇಂದಿರಾಗಾಂಧಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ವಿಧ್ಯಾರ್ಥಿನಿಯರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
