ಟಾಟಾ ಏಸ್ ಚಾಲಕನ ಬರ್ಬರ ಹತ್ಯೆ..!!

ಬೆಂಗಳೂರು

    ಟಾಟಾ ಏಸ್ ವಾಹನ ಚಾಲಕನೊಬ್ಬನನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಮಾಡಿರುವ ದುರ್ಘಟನೆ ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬಡಾವಣೆಯಲ್ಲಿ ಬುಧವಾರ ರಾತ್ರಿ ನಡೆದಿದೆ.ಕಲಾಸಿಪಾಳ್ಯದ ಸಿಮೆಂಟ್ ಕಾಲೋನಿಯ ಆನಂದ್ (35) ಎಂದು ಕೊಲೆಯಾದವರನ್ನು ಗುರುತಿಸಲಾಗಿದೆ. ರಾತ್ರಿ 11ರ ವೇಳೆ ಹೊಸಬಡಾವಣೆಯ ನಾಲ್ಕನೇ ಬ್ಲಾಕ್‍ನ ಬಳಿ ಇದ್ದ ಆನಂದ್‍ನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

    ಗಂಭೀರವಾಗಿ ಗಾಯಗೊಂಡಿದ್ದ ಆನಂದ್‍ನನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರಾದರೂ,ತೀವ್ರ ರಕ್ತಸ್ರಾವದಿಂದ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಲಗೇಜ್ ಆಟೋ ಚಾಲಕನಾಗಿದ್ದ ಆನಂದ್‍ನನ್ನು ಹಳೆದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ಇದೆ.

     ಸುದ್ದಿ ತಿಳಿದ ತಕ್ಷಣ ಕೊಲೆಯಾದ ಸ್ಥಳಕ್ಕೆ ಕಲಾಸಿಪಾಳ್ಯದ ಪೊಲೀಸರು ಭೇಟಿನೀಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ರಮೇಶ್ ಬನ್ನೋತ್ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link