ಚಿತ್ರದುರ್ಗ;
ಸಮಾಜದಲ್ಲಿ ಶಿಕ್ಷಕರು ನಿಜವಾದ ಮಾತೃ ಸ್ಥಾನದಲ್ಲಿದ್ದಾರೆ. ಈ ಸಮಾಜದ ಬದಲಾವಣೆಯೂ ಶಿಕ್ಷಕರಿಂದ ಮಾತ್ರ ಸಾಧ್ಯವೆಂದು ಶ್ರೀ ಶಿವಲಿಂಗಾನಂದಸ್ವಾಮೀಜಿ ಹೇಳಿದರು
ಶ್ರೀ ಸದ್ಗುರು ಕಬೀರಾನಂದ ಸ್ವಾಮಿ ಬಿ. ಇಡಿ. ಕಾಲೇಜನಲ್ಲಿ ಏರ್ಪಡಿಸಿದ್ದ “ದ್ವಿತೀಯ ವರ್ಷದ ಬಿ.ಇಡಿ. ಪ್ರಶಿಕ್ಷಣಾರ್ಥಿಗಳಿಗೆ ಸಮಾರೋಪ ಸಮಾರಂಭ ಹಾಗೂ ಪ್ರತಿಜ್ಞಾವಿಧಿ” ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಗೆ ವಿಷಯ ಜ್ಞಾನದೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನೆ ಅನುಕರಣೆ ಮಾಡುವುದು ಸಹಜವಾದುದು, ಹಾಗಾಗಿ ಶಿಕ್ಷಕರು ಉತ್ತಮ ರೂಢಿಗಳನ್ನು ಮಕ್ಕಳಿಗೆ ರೂಢಿಸವುದು ಅಗತ್ಯವಾಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಶಿಕ್ಷಕನೆ ಪ್ರಮುಖ ಪಾತ್ರವಹಿಸುವವನಾಗಿದ್ದು, ಶಿಕ್ಷಕ ನಿಜವಾದ ದೇಶ ನಿರ್ಮಾತೃವಾಗಿದ್ದಾನೆ ಎಂದರು
ವಿದ್ಯಾರ್ಥಿಗಳನ್ನು ಉತ್ತಮ ಜ್ಞಾನವಂತರನ್ನಾಗಿ ಮಾಡುವುದರೊಂದಿಗೆ ಉತ್ತಮ ನಾಗರೀಕ ಗುಣಗಳನ್ನು ಬೆಳೆಸಬೇಕು. ಶಿಕ್ಷಕನ ಕೆಲಸ ಪ್ರತಿ ಮಗುವಿಗೂ ಜೀವನದ ಬೆಳಕನ್ನು ಬೆಳಗಿಸುವ ಕಾರ್ಯ. ತಾನು ಕಲಿತ ಜ್ಞಾನವನ್ನು ಮಕ್ಕಳಿಗೆ ಕಲಿಸುವ ಮೂಲಕ ಜ್ಞಾನಜ್ಯೋತಿಯನ್ನು ಬೆಳಗಿಸುವಂತಾಗಬೇಕು. ಪ್ರತಿ ವಿದ್ಯಾರ್ಥಿಯ ಕಲಿಕೆ ಸಮಸ್ಯೆಯನ್ನು ಪರಿಹರಿಸಿ ಜೀವನಕ್ಕೆ ಅಗತ್ಯವಾದ ಜ್ಞಾನ ಮತ್ತು ಕೌಶಲಗಳೊಂದಿಗೆ ಮೌಲ್ಯಗಳನ್ನು ಕಲಿಸಬೇಕು. ಶಿಕ್ಷಕ ತರಬೇತಿ ಪೂರ್ಣಗೊಳಿಸಿ ಹೊರಹೋಗುತ್ತಿರುವ ಪ್ರಶಿಕ್ಷಣಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಎಂದು ಸ್ವಾಮಿಜಿಯವರು ಹಾರೈಸಿದರು.
ಮುಖ್ಯ ಅತಿಥಿಕಾಗಿದ್ದ ಡಾ. ಅನಂತರಾಮ್, ಡೀನರು, ಶಿಕ್ಷಣ ಅಧ್ಯಯನ ವಿಭಾಗ ದಾವಣಗೆರೆ ವಿಶ್ವವಿದ್ಯಾಲಯ ಇವರು ಮಾತನಾಡಿ, ಶಿಕ್ಷಕನ ಕೆಲಸ ಕಲಿಕೆಯನ್ನು ವರ್ಗಾಹಿಸುವುದಲ್ಲ ಬದಲಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನ ಅನ್ವೇಷಣೆಯ ಕೌಶಲ ಬೆಳೆಸುವುದು. ಶಿಕ್ಷಕನ ಬೋಧನೆ ಯಾಂತ್ರಿಕ ಬೋಧನೆಯಾಗಬಾರದು. ಕಲಿಕೆ ಜೀವಂತ ಅನುಭವಗಳನ್ನು ನೀಡಬೇಕೆಂದರೆ ಶಿಕ್ಷಕಕು ಪ್ರತಿನಿತ್ಯದ ತರಗತಿಗೆ ಪೂರ್ಣಸಿದ್ದತೆಯೊಂದಿಗೆ ಪಾಠ ಬೋಧನೆಯಲ್ಲಿ ತೊಡಗಬೇಕು ಎಂದರು
ಶಿಕ್ಷಕ ಕೇವಲ ಪಠ್ಯಪೂರ್ಣಗೊಳಿಸಲು ಮಾತ್ರ ಒತ್ತು ಕೊಡಬಾರದು. ವಿದ್ಯಾರ್ಥಿ ಏನನ್ನು ಕಲಿತಿದ್ದಾನೆ, ಎಷ್ಟು ಕಲಿತಿದ್ದಾನೆ ಎಂಬ ಮನವರಿಕೆಯೊಂದಿಗೆ ಎಲ್ಲ ವಿದ್ಯಾರ್ಥಿಗಳ ಕಡೆ ಗಮನಹರಿಸಬೇಕು. ಶಿಕ್ಷಕರಿಗೆ ವೃತ್ತಿ ಬದ್ಧತೆ ಬಹಳ ಮುಖ್ಯವಾದುದು, ಎಲ್ಲಿ ವೃತ್ತಿಬದ್ದತೆ ಪೂರ್ಣಪ್ರಮಾಣದಲ್ಲಿರುತ್ತದೊ ಅಲ್ಲಿ ವಿದ್ಯಾರ್ಥಿಗಳ ಯಶಸ್ಸು ದೊರೆಯುತ್ತದೆ. ವಿದ್ಯಾಥಿಗಳನ್ನು ಹೆಚ್ಚು ಗೊಂದಲಗಳಿಗೆ ಸಿಲುಕಿಸದೆ, ಕಲಿಕೆಗೆ ಸದಾ ಪ್ರೇರಣೆಯ ಚಟುವಟಿಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳನ್ನು ಅಂಕ ಗಳಿಕೆಗೆ ಸಿದ್ಧ ಮಾಡುವುದನ್ನು ಬಿಟ್ಟು ದೇಶಕ್ಕೆ ಉತ್ತಮ ಪ್ರಜೆಯನ್ನಾಗಿ ಮಾಡುವ ಕಾರ್ಯ ಮಾಡಬೇಕಿದೆ ಎಂದರು
ಶಿಕ್ಷಕರು ಸಮಾಜದ ಸುತ್ತಮುತ್ತಲ ಪರಿಸರದ ವಾಸ್ತವತೆಯ ಜ್ಞಾನವನ್ನು ನೀಡಬೇಕು. ಶಿಕ್ಷಕರು ಜೀವನ ಕೌಶಲ್ಯವನ್ನು ಹಾಗೂ ಗೌರವದ ಮೌಲ್ಯಗಳನ್ನು ಕಲಿಸಬೇಕಾಗಿದೆ. ಇಂತಹ ಜ್ಞಾನ, ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಪ್ರಶಿಕ್ಷಣಾರ್ಥಿಗಳಿಗೆ ಕರೆನೀಡಿದರು.
ಮತ್ತೊರ್ವ ಮುಖ್ಯ ಅತಿಥಿಗಳಾದ ಪ್ರಾಂಶುಪಾಲ ನಿರಂಜನಮೂರ್ತಿ ಮಾತನಾಡಿ,ಶಿಕ್ಷಕರು ಸದಾ ಅಧ್ಯಯನದಲ್ಲಿ ತೊಡಿದಾಗ ಉತ್ತಮ ಬೋಧನೆಗೆ ಸಹಕಾರಿಯಾಗುವುದು. ಮಕ್ಕಳಿಗೆ ಕೇವಲ ಪರೀಕ್ಷಾ ದೃಷ್ಟಿಯಿಂದ ಬೋಧಿಸುವುದು ಬಿಡಬೇಕು, ಮಕ್ಕು ಜ್ಞಾನವನ್ನು ಚಿಂತಿಸುವ, ಆಲೋಚಿಸುವ ಹಾಗೂ ಜೀವನದ ಸನ್ನಿವೇಶಕ್ಕೆ ಅಳವಡಿಸಿಕೊಳ್ಳುವಂತಹ ಶಿಕ್ಷಣ ನೀಡಬೇಕು ಎಂದು ತಿಳಿಸಿದರು.
ಶಿಕ್ಷಕರು ಸ್ವಾರ್ಥರಹಿತ, ಸ್ವಜನ ಪಕ್ಷಪಾತ ಇಂತಹ ಗುಣಗಳಿಂದ ಮುಕ್ತರಾಗಿ ವಿದ್ಯಾರ್ಥಿಗಳಿಗೆ ಆದರ್ಶವಾದ ಅನುಕರನೀಯ ವ್ಯಕ್ತಿತ ಗುಣವಳನ್ನು ರೂಢಿಸಿಕೊಳ್ಳಬೇಕೆಂದು ‘ಎಸ್.ಎಸ್.ಕೆ.ಎಸ್. ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಅನಿರತರವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ‘ಡಾ. ಗಿರೀಶ್ ಟಿ’ ವಹಿಸಿ ತರಬೇತಿಯ ಅವಧಿಯಲ್ಲಿ ಕಲಿತ ಜ್ಞಾನ ಮತ್ತು ಬೋಧನಾ ಕೌಶಲಗಳನ್ನು ತರಗತಿಯಲ್ಲಿ ಅಳವಡಿಸಿಕೊಂಡು ಉತ್ತಮವಾಗಿ ಬೋಧಿಸುವಂತೆ ತಿಳಿಸಿದರು.ಉಪನ್ಯಾಸಕರಾದ ಶ್ರೀಮತಿ ರೂಪ ಪ್ರಾಸ್ತವಿಕವಾಗಿ ಮಾತನಾಡಿದರು ಉಪನ್ಯಾಸಕರಾದ ಶ್ರೀಮತಿ ನೇತ್ರಾವತಿ, ಶ್ರೀ ವಿಜಯ್ ಕುಮಾರ್, ಶ್ರೀಮತಿ ಉಷಾ, ಶ್ರೀಪ್ರಶಾಂತ್, ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
