ರಾಮನಗರ
ರೈತನಿಂದ ಲಂಚದ ಬೇಡಿಕೆ ಇಟ್ಟಿದ್ದ ಮಾಗಡಿ ತಹಶೀಲ್ದಾರ್ ರಮೇಶ್ ಹಾಗೂ ಗುಮಾಸ್ತ ಪ್ರವೀಣ್ ಮಂಗಳವಾರ ಮಧ್ಯಾಹ್ನ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.
ದಬ್ಬಗುಳಿ ಗ್ರಾಮದ ರೈತ ಡಿ.ರಾಮಯ್ಯ ಅವರು ತಮ್ಮ ಸರ್ವೆ ನಂ. 35/1 ರ ಜಮೀನಿನ ಪಹಣಿ ಹೆಸರು ತಿದ್ದುಪಡಿಗಾಗಿ ಹಾಗೂ ಸರ್ವೆ ನಂ. 23 ರ ಜಮೀನಿನ ಪೋಡಿ ಮಾಡಿಸಲು ಸುಮಾರು ವರ್ಷಗಳ ಹಿಂದೆಯೇ ತಹಶೀಲ್ದಾರ್ ಕಚೇರಿಗೆ ದಾಖಲೆಗಳನ್ನು ನೀಡಿದ್ದು, ಇದಕ್ಕಾಗಿ ತಾಲೂಕು ಕಚೇರಿಗೆ ಅಲೆಯುತ್ತಿದ್ದರು. ರಾಮನಗರ ಉಪವಿಭಾಗಾಧಿಕಾರಿಗಳು ರಾಮಯ್ಯ ಅವರ ಕಡತವನ್ನು ಮುಂದಿನ ಕ್ರಮಕ್ಕಾಗಿ ಮಾಗಡಿ ತಹಸೀಲ್ದಾರ್ ಕಚೇರಿಗೆ ರವಾನಿಸಿದ್ದರು ಎಂದು ತಿಳಿದು ಬಂದಿದೆ
ರೈತ ರಾಮಯ್ಯ ಪಹಣಿಯಲ್ಲಿ ಹೆಸರು ತಿದ್ದುಪಡಿ ಹಾಗೂ ಪೋಡಿ ಮಾಡಿಸಿಕೊಳ್ಳಲು ಮಾಗಡಿ ತಾಲೂಕು ಕಚೇರಿಗೆ ಸುಮಾರು ವರ್ಷಗಳಿಂದ ಅಲೆಯುತ್ತಿದ್ದು, ಇವರ ಕಡತಗಳನ್ನು ನಿರ್ವಹಿಸುತ್ತಿದ್ದ ಪ್ರವೀಣ್ ಎಂಬ ಗುಮಾಸ್ತ ಇಂದು ಬಾ, ನಾಳೆ ಬಾ ಎಂದು ಅಲೆಸುತ್ತಿದ್ದು, ಕಡೆಗೆ 50 ಸಾವಿರ ರೂ. ಕೊಟ್ಟರೆ ಕೆಲಸ ಮಾಡಿಸಿಕೊಡುತ್ತೇನೆ, ನೀನು ಕೊಡುವ ಹಣವನ್ನು ತಹಸೀಲ್ದಾರ್ ಅವರಿಗೆ ನೀಡಬೇಕು ಎಂದು ಹೇಳಿದ್ದ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2018/12/ACB.gif)