ಹೊಸದುರ್ಗ
ತಾಲ್ಲೂಕಿನ ಬೆಟ್ಟದ ತಾವರೆಕೆರೆ, ಬೇಗೂರು ಸೇತುವೆ ಹಾಗೂ ಅಜ್ಜಂಪುರ ಸಮೀಪ ಇರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶಾಸಕ ಗೂಳಿಹಟ್ಟಿ ಡಿ.ಶೇಖರ್ ಭಾನುವಾರ ವೀಕ್ಷಿಸಿದ್ದಾರೆ.ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಹೀಗಾಗಲೇ ತಾತ್ಕಾಲಿಕವಾಗಿ ಭದ್ರಾ ನೀರು ಬಿಟ್ಟಿದ್ದು, ಹಿರಿಯೂರು ವಿವಿ ಸಾಗರಕ್ಕೆ ಸರಾಗವಾಗಿ ತಲುಪುತ್ತಿದೆ. ಕೆಲವೇ ದಿನಗಳಲ್ಲಿ ಈ ನಾಡಿನ ಬರದ ಬೇಗೆ ನೀಗಲು ಯಾವುದೇ ಅನುಮಾನವಿಲ್ಲ ಎಂದರು.
ನಾಲ್ಕೈದು ದಿನಗಳಿಂದ ಲಿಫ್ಟಿಂಗ್ ಎತ್ತುವ ಮಿಷನ್ ತಾಂತ್ರಿಕ ದೋಷದಿಂದ ಕೆಟ್ಟಿದ್ದು, ಭಾನುವಾರದಿಂದ ಮತ್ತೆ ನೀರು ಲಿಫ್ಟಿಂಗ್ ಆಗುತ್ತಿದೆ. ಭದ್ರೆ ನೀರು ಉಗಮವಾಗಿ ಹರಿದು ಹೊಸದುರ್ಗ ಮತ್ತು ಹಿರಿಯೂರು ಭಾಗದ ಎಲ್ಲಾ ರೈತರಲ್ಲಿ ಮಂದಹಾಸ ಮೂಡಿಸಲು ಅತೀ ಶೀಘ್ರದಲ್ಲೆ ಬರುತ್ತಿದ್ದಾಳೆ ಎಂದು ಹೇಳಿದರು.ಈ ವೇಳೆ ಬಿಜೆಪಿ ಮುಖಂಡರಾದ ಬೋರವೆಲ್ ರಂಗೇಶ್, ಮತ್ತೋಡು ಗ್ರಾಂಪಂ ಅಧ್ಯಕ್ಷ ರಾಮಣ್ಣ, ಸ್ವಾಮಿ ಮತ್ತೋಡು, ಗೂಳಿಹಟ್ಟಿ ಕೃಷ್ಣಮೂರ್ತಿ, ನರಸೀಪುರ ದೊಡ್ಡಯ್ಯ, ಕಲ್ಕೆರೆ ಶೇಖರ್ ಹಾಗೂ ಮತ್ತಿತರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ