#METOO ದೂರಿನಿಂದ ಸಿನಿಮಾ ಅವಕಾಶ ಕಮ್ಮಿಯಾಯಿತು.!

ಬೆಂಗಳೂರು

    ನನ್ನ ಮೇಲೂ ಲೈಂಗಿಕ ದೌರ್ಜನ್ಯ ಆಗಿದೆ (ಮೀಟೂ) ಎಂದು ಪೊಲೀಸರಿಗೆ ದೂರು ಕೊಟ್ಟಿದ್ದರಿಂದ ನನಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಯಿತು ನಿಜ, ಆದರೆ ಅದಕ್ಕಾಗಿ ನನಗೆ ಹೆಮ್ಮಯಿದೆ ಖಂಡಿತ ವಿಷಾದ ಇಲ್ಲ ಎಂದು ನಟಿ ಶೃತಿ ಹರಿಹರನ್ ಹೇಳಿದರು.

    ನಗರದ ಅಶೋಕ್ ಲಲಿತ್ ಹೋಟೆಲ್‌ನಲ್ಲಿ ಭಾನುವಾರ ಫೇಸ್‌ಬುಕ್ ವತಿಯಿಂದ ಹಿರಿಯ ಪತ್ರಕರ್ತೆ ಬರ್ಖಾ ದತ್ ನೇತೃತ್ವದಲ್ಲಿ ನಡೆದ ?ವಿ ದಿ ವುಮೆನ್? ಮಹಿಳಾ ಸಂವಾದದಲ್ಲಿ ಅವರು ಮಾತನಾಡಿ ?ಈಗಲೂ ನನ್ನ ಬಳಿ ಒಂದೇ ಒಂದು ಸಿನಿಮಾ ಇಲ್ಲ. ಆದರೆ ಅದರ ಬಗ್ಗೆ ಚಿಂತೆ ಇಲ್ಲ. ನನ್ನ ಮೂರು ತಿಂಗಳ ಪುತ್ರಿ, ಗಂಡನ ಜತೆ ಖುಷಿಯಿಂದಿದ್ದೇನೆ ಎಂದರು.

   ಈ ಬಾರಿ ಚಲನಚಿತ್ರ ರಾಷ್ಟ್ರೀಯ ಪ್ರಶಸ್ತಿ ಬಂದ ಕಾರಣ ಮತ್ತೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ? ಎಂದರು.
ವಿಚಾರಣೆ ವೇಳೆ ವಕೀಲರು, ನಿಮ್ಮನ್ನು ಅವರು ಮುಟ್ಟಿದ್ದರೆ ಹೇಳಿ, ಕೇವಲ ಮಾತನಾಡಿದ್ದರೆ ಹೇಳಬೇಡಿ ಎಂದು ಹೇಳಿದ್ದರು. ಇದು ಭಾರತೀಯ ಕಾನೂನು ವ್ಯವಸ್ಥೆ. ನಿಜಕ್ಕೂ ಮೀಟೂನಂಥ ಪ್ರಕರಣಗಳಲ್ಲಿ ಸಾಕ್ಷಿ ಇರುವುದಿಲ್ಲ. ಹೀಗಾಗಿ ಇಂತಹ ಪ್ರಕರಣಗಳನ್ನು ಧೈರ್ಯದಿಂದ ಎದುರಿಸಬೇಕು? ಎಂದರು.

ಚಪ್ಪಲಿ ಕೈಗೆ ಬರಲಿ

    ಮೀಟೂ ಅನುಭವ ಆದರೆ ಸುಮ್ಮನೆ ಇರಬೇಡಿ. ನಿಮ್ಮ ಸುಂದರ ಚಪ್ಪಲಿ ಕೈಗೆ ಬರಲಿ ಎಂದು ಶ್ರುತಿ ಹರಿಹರನ್ ಅವರ ತಾಯಿ ಹೇಳಿದರು.ದೂರು ನೀಡಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ಶ್ರುತಿ ಅವರನ್ನು ಕಾರ್ಯಕ್ರಮಕ್ಕೆ ಕರೆಯಲಾಗಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap