ಜನರ ಹಕ್ಕುಗಳ ರಕ್ಷಣೆಗೆ ಆಯೋಗ ಮುಂದಾಗಬೇಕು : ಎಚ್ ಕೆ ಪಾಟೀಲ್

ಬೆಂಗಳೂರು

     ಕೊರೊನಾದಿಂದ ಜನ ತತ್ತರಿಸಿ ಹೋಗುತ್ತಿದ್ದರೂ ಸರಿಯಾದ ಚಿಕಿತ್ಸೆಯಾಗಲೀ ಔಷಧಿಯಾಗಲೀ, ಕೊನೆ ಪಕ್ಷ ಆಸ್ಪತ್ರೆಗಳಾಗಲೀ ಇಲ್ಲ. ಸೋಂಕಿನಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಶವಶಂಸ್ಕಾರ ಮಾಡಲಾಗುತ್ತಿದ್ದು, ಇದೆಲ್ಲ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಆರೋಪಿಸಿದ್ದಾರೆ.

     ಮಾನವ ಹಕ್ಕುಗಳ ರಕ್ಷಣೆಗಾಗಿ ಮಾನವ ಹಕ್ಕುಗಳ ಆಯೋಗ ಮುಂದಾಗಬೇಕು, ಹಕ್ಕುಗಳನ್ನು ಉಲ್ಲಂಘಿಸಿದವರ ವಿರುದ್ಧ ಶಿಕ್ಷೆ ವಿಧಿಸಬೇಕು. ಹಾನಿಗೊಳಗಾದವರಿಗೆ ಪರಿಹಾರ ಒದಗಿಸಿ ರಕ್ಷಣೆ ನೀಡಬೇಕಾದುದು ಮಾನವ ಹಕ್ಕುಗಳ ಆಯೋಗದ ಮುಖ್ಯ ಉದ್ದೇಶವಾಗಿದೆ . ಕೊರೊನಾ ಸೋಂಕಿತರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಆಯೋಗ ಮೂಕಪ್ರೇಕ್ಷಕನಂತೆ ಕೂರದೇ ತಕ್ಷಣ ಜಾಗೃತವಾಗಿ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು. ಪಾದರಸದಂತೆ ಚುರುಕಾಗಬೇಕು. ಆಯೋಗ ತಮ್ಮನ್ನು ಈ ಬಗ್ಗೆ ಚರ್ಚೆಗಾಗಲೀ ಮಾಹಿತಿಗಾಗಲೀ ಕರೆದಲ್ಲಿ ಬರುವುದಾಗಿ ಎಂದು ಹೇಳಿದ್ದಾರೆ.

     ಮಾನವ ಹಕ್ಕುಗಳ ಆಯೋಗ ಜಾಗೃತವಾಗಿ ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಬೇಕು. ಮಾನವ ಹಕ್ಕುಗಳ ಆಯೋಗಕ್ಕೆ ದಾಖಲೆಗಾಗಿ ಕೋವಿಡ್ ನಿಂದ ನೊಂದವರ ಬಗೆಗಿನ ಪತ್ರಿಕಾಹೇಳಿಕೆ, ವರದಿಗಳನ್ನು ಸಲ್ಲಿಸುತ್ತಿರುವುದಾಗಿ ಹೆಚ್.ಕೆ.ಪಾಟೀಲ್ ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap