ಬೆಂಗಳೂರು
ಮೆಜೆಸ್ಟಿಕ್ನ ಮೆಟ್ರೋ ನಿಲ್ದಾಣದಲ್ಲಿ ಕಳೆದ ಸೋಮವಾರ ಸಂಜೆ ಅನುಮಾನಾಸ್ಪದವಾಗಿ ಓಡಾಡಿ ಆತಂಕ ಸೃಷ್ಠಿಸಿದ್ದ ಇಬ್ಬರೂ ಉಗ್ರರರಲ್ಲ ಎನ್ನುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ಮೆಜೆಸ್ಟಿಕ್ನ ಮೆಟ್ರೋ ನಿಲ್ದಾಣಕ್ಕೆ ಶಂಕಾಸ್ಪದವಾಗಿ ಬಂದುಹೋಗಿ ಆತಂಕ ಸೃಷ್ಠಿಸಿದ್ದ ಇಬ್ಬರು ಶಂಕಿತ ವ್ಯಕ್ತಿಗಳಲ್ಲಿ ಈಗಾಗಲೇ ರಿಯಾಜ್ ಅಹಮದ್ ತಾವಾಗಿಯೇ ಪೊಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು ನಾನು ಮೆಜೆಸ್ಟಿಕ್ನಲ್ಲಿ ವಾಚ್ ವ್ಯಾಪಾರ ಹಾಗೂ ರಿಪೇರಿ ಮಾಡುತ್ತಿದ್ದು, ನಾಯಂಡಹಳ್ಳಿಯಲ್ಲಿ ವಾಸವಾಗಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದ ಬೆನ್ನಲ್ಲೇ ಮತ್ತೊಬ್ಬ ಶಂಕಿತ ರಾಜಸ್ತಾನ ಮೂಲದ ಭಿಕ್ಷುಕನಾಗಿರುವುದು ಪತ್ತೆಯಾಗಿದೆ.
ಆರ್ಟಿ ನಗರದ ಬಳಿ ದಾರಿಹೋಕರಿಗೆ ಕಿರುಕುಳ ನೀಡಿ ದೌರ್ಜನ್ಯ ನಡೆಸುವವರು ಹಾಗೂ ಬೀದಿ ಕಾಮಣ್ಣರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿದ ಉತ್ತರ ವಿಭಾಗದ ಪೆÇಲೀಸರಿಗೆ ಶಂಕಿತ ವ್ಯಕ್ತಿಯನ್ನು ಹೋಲುವ ಗಡ್ಡಧಾರಿ ಪತ್ತೆಯಾಗಿ ದ್ದಾನೆ. ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ರಾಜಸ್ತಾನ ಮೂಲದ ಜೈಸಲ್ಮೇರ್ ಜಿಲ್ಲೆಯ ಸಾಜಿತ್ ಖಾನ್ (38) ಎಂದು ತಿಳಿಸಿದ್ದಾನೆ. ಮೆಜೆಸ್ಟಿಕ್ನ ಮೆಟ್ರೋ ನಿಲ್ದಾಣಕ್ಕೆ ಮೇ 6 ರಂದು ಸಂಜೆ ಹೋಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ನಗರ ಪೆÇಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ
ಮೆಟ್ರೋ ಸ್ಟೇಷನ್ಗೆ ಬಂದಿದ್ದ ವ್ಯಕ್ತಿ ಲೋಹ ಶೋಧಕ ನಿಯಂತ್ರಕದ ಬಳಿ ಹಾದು ಹೋದಾಗ ಸದ್ದಾಗಿತ್ತು. ಆದರೆ ಆತ ಅಲ್ಲಿಂದ ಹೊರ ನಡೆದಿದ್ದ. ಈ ವರ್ತನೆ ಅನುಮಾನಕ್ಕೆ ಕಾರಣವಾಗಿತ್ತು. ಬಳಿಕ ಶಂಕಿತ ವ್ಯಕ್ತಿಯ ಪತ್ತೆಗಾಗಿ ನಾಲ್ಕು ವಿಶೇಷ ತಂಡ ರಚನೆ ಮಾಡಿದ್ದೇವು. ರಿಯಾಜ್ ಅಹಮದ್ ಉಪ್ಪಾರ ಪೆÇಲೀಸ್ ಠಾಣೆಗೆ ಬಂದು ಹೇಳಿಕೆ ನೀಡಿದ್ದರು. ಮತ್ತೊಬ್ಬ ವ್ಯಕ್ತಿಯ ಬಗ್ಗೆ ಶೋಧ ಮಾಡಲಾಗಿತ್ತು. ಆ ವ್ಯಕ್ತಿ ಕೂಡ ಈಗ ಪತ್ತೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಜೀದ್ ಖಾನ್, ಮಸೀದಿಯ ಬಳಿ ದಾನ ಪಡೆಯುವ ವ್ಯಕ್ತಿ ಆಗಿದ್ದಾರೆ ರಂಜಾನ್ ಮಾಸಾಚರಣೆ ವೇಳೆ ನಗರದಲ್ಲಿ ಹೆಚ್ಚು ಭಿಕ್ಷೆ ಸಿಗಲಿದೆ ಎಂದು ಪತ್ನಿ ಮಕ್ಕಳು ಸಂಬಂಧಿಕರ ಜೊತೆ ಬಂದಿದ್ದನು. ಮೆಟ್ರೋ ನಿಲ್ದಾಣದ ಬಳಿ ಹೋದಾಗ ಅವರ ಜೇಬಿನಲ್ಲಿ ಇದ್ದ ಕಾಯಿನ್ಗಳು ಕೈಯಲ್ಲಿ ಕಟ್ಟಿದ್ದ ಕಾಯಿನ್ನಿಂದ ಶಬ್ಧ ಆಗಿತ್ತು. ಹೀಗಾಗಿ ಅವರನ್ನು ತಡೆ ಹಿಡಿಯಲಾಗಿತ್ತು. ಭದ್ರತಾ ಸಿಬ್ಬಂದಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುತ್ತಿರಲಿಲ್ಲ. ಇಬ್ಬರಿಗೂ ಸರಿಯಾದ ಭಾಷೆ ಬಾರದೇ ಇದ್ದ ಕಾರಣ ಈ ಗೊಂದಲ ನಿರ್ಮಾಣವಾಗಿದೆ ಎಂದರು.
ಸಾಜೀದ್ಖಾನ್ ಅವರು ಮೊದಲ ಬಾರಿ (ಸೋಮವಾರ) ಮೆಟ್ರೋ ಹತ್ತಲು ಬಂದಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಪ್ರಶ್ನೆ ಮಾಡಿದ್ದರಿಂದ ಗಾಬರಿಯಾಗಿ ಹೊರ ಹೋಗಿದ್ದರು ಎನ್ನುವುದು ತನಿಖೆಯ ಬಳಿಕ ತಿಳಿದು ಬಂದಿದೆ ಎಂದು ತಿಳಿಸಿದರು.
ಮೆಟ್ರೋ ಸಿಬ್ಬಂದಿ ಆತನನ್ನು ಹಾಗೂ ಆತನ ಬ್ಯಾಗನ್ನು ಪರಿಶೀಲಿಸಲು ಹೋದಾಗ ಸಿಬ್ಬಂದಿಗೆ ತನ್ನ ವಸ್ತುಗಳನ್ನು ಏಕೆ ತೋರಿಸಬೇಕು ಎನ್ನುವ ಕಾರಣಕ್ಕೆ ಹೊರಹೋದೆ ಎಂದು ತಿಳಿಸಿದ್ದಾನೆ. ಆತನ ಬಳಿ ದೊರೆತಿರುವ ಬ್ಯಾಗನ್ನು ಪರಿಶೀಲಿಸಲಾಗಿದ್ದು, ಯಾವುದೇ ಸ್ಫೋಟಕಗಳು ಆಯುಧಗಳಾಗಲಿ ಪತ್ತೆಯಾಗಿಲ್ಲ ಎಂದು ಆಯುಕ್ತ ಸುನಿಲ್ ಕುಮಾರ್ ತಿಳಿಸಿದ್ದಾರೆ.
ಆಗಿದ್ದೇನು?
ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಕಪ್ಪು ಬಣ್ಣದ ಸೂಟ್ ಧರಿಸಿದ್ದ ಬಂದಿದ್ದ ವ್ಯಕ್ತಿ (ಶಾಜಿದ್ ಖಾನ್) ಮೆಟಲ್ ಡಿಟೆಕ್ಟರ್ ಬಳಿಗೆ ಹೋಗಿದ್ದಾಗ ಸದ್ದಾಗಿತ್ತು. ಆದರೆ ಸೆಕ್ಯೂರಿಟಿ ಕೈಗೆ ಸಿಗದೇ ಹೊರ ನಡೆದಿದ್ದರು. ಶಾಜಿದ್ ಖಾನ್ ಹೊರ ಹೋದ ಕೆಲ ನಿಮಿಷದಲ್ಲಿ ರಿಯಾಜ್ ಅಹ್ಮದ್ ಮೆಟ್ರೋ ನಿಲ್ದಾಣವನ್ನು ಪ್ರವೇಶಿಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಎಲ್ಲರಿಗಿಂತ ಜಾಸ್ತಿ ಸಮಯ ಪರಿಶೀಲನೆ ನಡೆಸಿದ್ದರು. ಇದಕ್ಕೆ ಸಿಟ್ಟಾಗಿ ಅವರು ತಿರುಗಿ ತಿರುಗಿ ಮುಂದೆ ಹೋಗಿದ್ದರು.
ಕಾಕತಾಳೀಯ ಎಂಬಂತೆ ಇಬ್ಬರ ವರ್ತನೆ ಅನುಮಾನ ಮೂಡಿಸಿದ ಹಾಗೆ ಇದ್ದ ಹಿನ್ನೆಲೆಯಲ್ಲಿ ಇಬ್ಬರ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಪೊಲೀಸರು ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು.ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟವಾದ ಹಿನ್ನೆಲೆಯಲ್ಲಿ ದೇಶದಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುನ್ನೆಚ್ಚರಿಕಾ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ಹಿಂದೆ ಬೆಂಗಳೂರಿಗೆ ಉಗ್ರರು ಬಂದಿಳಿದಿದ್ದಾರೆ. ಐಟಿ ಕಂಪನಿಗಳ ಮೇಲೆ ದಾಳಿ ನಡೆಸಲು ತಯಾರಿ ಮಾಡುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು.
ಭಾನುವಾರದಂದು ಬೆಂಗಳೂರು ಸಿಟಿ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದು ಟ್ವಿಟ್ಟರ್ ಮೂಲಕ ಸ್ಪಷ್ಟಪಡಿಸಿದ್ದರು.ರಂಜಾನ್ ಮಾಸಾಚರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಿಕ್ಷೆ ದೊರೆಯುತ್ತದೆ ಎಂಬ ಕಾರಣಕ್ಕಾಗಿ ಸಾಜಿತ್ ಖಾನ್, ಕುಟುಂಬದವರು ಹಾಗೂ ಸಂಬಂಧಿಕರ ಜೊತೆ ನಗರಕ್ಕೆ ಬಂದಿದ್ದು, ಬೇರೆ ಕಡೆ ಮೆಟ್ರೋ ರೈಲಿನಲ್ಲಿ ಹೋಗಲು ನಿಲ್ದಾಣಕ್ಕೆ ಪ್ರವೇಶಿಸುವಾಗ ಆತನ ಕೈಯಲ್ಲಿದ್ದ ತಾಯತ ಹಾಗೂ ನಾಣ್ಯದಿಂದ ಲೋಹ ಪರಿಶೋಧಕ ಯಂತ್ರದಲ್ಲಿ ಬೀಪ್ ಸೌಂಡ್ ಬರಲಾರಂಭಿಸಿದೆ.
ಕಳೆದ ಸೋಮವಾರ ಸಂಜೆ ಮೆಜೆಸ್ಟಿಕ್ನ ಮೆಟ್ರೋ ನಿಲ್ದಾಣದಲ್ಲಿ ಶಂಕಾಸ್ಪದವಾಗಿ ಕಂಡು ಬಂದ ವ್ಯಕ್ತಿಗಳ ಬಗ್ಗೆ ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ಪೊಲೀಸ್ ಅಧಿಕಾರಿಗಳು ತನಿಖೆ ಕೈಗೊಂಡ ಬೆನ್ನಲ್ಲೇ ಬುಧವಾರ ರಿಯಾಜ್ ಅಹ್ಮದ್ (70) ಅವರು ಪಶ್ಚಿಮ ವಿಭಾಗದ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಅವರ ಕಚೇರಿಗೆ ಹಾಜರಾಗಿ ತನ್ನ ವಿವರವನ್ನು ನೀಡಿದ್ದರು.
ನಾನು ಮೆಜೆಸ್ಟಿಕ್ನಲ್ಲಿ ವಾಚ್ ವ್ಯಾಪಾರಿ ಹಾಗೂ ರಿಪೇರಿ ಮಾಡುತ್ತಿದ್ದು, ನಾಯಂಡಹಳ್ಳಿಯಲ್ಲಿ ವಾಸವಾಗಿದ್ದೇನೆ. ನಿತ್ಯವೂ ಮೆಟ್ರೋದಲ್ಲಿ ಓಡಾಡುತ್ತೇನೆ ಎಂದು ತಿಳಿಸಿದ್ದರುನಾನು ಯಾವುದೇ ಉಗ್ರ ಸಂಘಟನೆಗೆ ಸೇರಿಲ್ಲ. ಶಂಕಿತ ವ್ಯಕ್ತಿ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದರಿಂದ ಜನರು, ನನ್ನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ನನಗೆ ರಕ್ಷಣೆ ಕೊಡಿ. ಗಡ್ಡದಾರಿಗಳೆಲ್ಲಾ ಉಗ್ರರಾ? ಗಡ್ಡ ಬಿಡುವುದೇ ತಪ್ಪೇ ಎಂದು ಅವರು ಅಳಲು ತೋಡಿಕೊಂಡಿದ್ದರು.
ಇದಾದ ಎರಡು ದಿನಗಳಲ್ಲಿಯೇ ಆರ್ಟಿ ನಗರದ ಬಳಿ ಪತ್ತೆಯಾಗಿರುವ ಶಂಕಿತ ಮತ್ತೊಬ್ಬ ವ್ಯಕ್ತಿ ರಾಜಸ್ತಾನ ಮೂಲದ ಭಿಕ್ಷುಕ ಎನ್ನುವುದು ಕಂಡುಬಂದಿದೆ ರಂಜಾನ್ ಮಾಸಾಚರಣೆ ವೇಳೆ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭಿಕ್ಷೆ ದೊರೆಯುತ್ತದೆ ಎಂಬ ಕಾರಣಕ್ಕಾಗಿ ಸಾಜಿತ್ ಖಾನ್, ಕುಟುಂಬದವರು ಹಾಗೂ ಸಂಬಂಧಿಕರ ಜೊತೆ ನಗರಕ್ಕೆ ಬಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ.