ಬೀದರ್ ಶಿಕ್ಷಕಿ ಬಂಧನ ಪ್ರಕರಣ : ಸಿಎಎ ವಿರುದ್ಧ ಮಾತನಾಡಿದ್ದಕ್ಕೆ ದೇಶದ್ರೋಹದ ಆರೋಪ ಹೊರಿಸಲಾಗಿದೆ

ಬೆಂಗಳೂರು

   ಬೀದರ್‌ನಲ್ಲಿ ಜ. 21 ರಂದು ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಸಿಎಎ ವಿರೋಧಿಸಿ ನಡೆಸಿದ ಪ್ರತಿಭಟನೆಯ ಸೇಡಿಗಾಗಿ ಶಾಲಾ ಶಿಕ್ಷಕಿ,ಮಗುವಿನ ತಾಯಿಯನ್ನು ಕಾನೂನುಬಾಹಿರವಾಗಿ ಬಂಧಿಸಿ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.

  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿಎಎ ವಿರುದ್ಧ ಚಕಾರ ಎತ್ತದ ಪರಿಸ್ಥಿತಿ ಇದೆ. ಸಿಎಎ ವಿರುದ್ಧ ಮಾತನಾಡಿದ್ದಕ್ಕೆ ದೇಶದ್ರೋಹದ ಆರೋಪ ಹೊರಿಸಲಾಗಿದೆ. ಆದರೆ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಯಲ್ಲಿ ನಡೆದಿದ್ದೇನು? ಬಾಬರಿ ಮಸೀದಿ ಕೆಡವುತ್ತಿರುವುದನ್ನೇ ತೋರಿಸಿದ್ದಾರೆ. ಆದರೆ ಆ ಶಾಲೆಯ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಸಾಕಷ್ಟು ಆರೋಪದ ನಂತರ ಕೇಸ್ ದಾಖಲಿಸಲಾಗಿದೆ ಎಂದರು.

    ಆದರೆ ಶಾಹಿನ್ ಶಾಲೆಯ ಮೇಲೆ ದೇಶದ್ರೋಹ ಪ್ರಕರಣ ಹೂಡಿಸಿದ್ದಾರೆ. ಉತ್ತಮ ಶಿಕ್ಷಣ ನೀಡುತ್ತಿದ್ದ ಸಂಸ್ಥೆಯನ್ನು ಮುಚ್ಚಿದ್ದಾರೆ. ಬೀದರ್ ಪ್ರಕರಣದಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿರುವುದು ತಾರತಮ್ಯ. ಆಡಳಿತರೂಢ ಪಕ್ಷದ ನಾಯಕರಿಗೆ ಒಂದು ಕಾನೂನು, ಮತ್ತೊಬ್ಬರಿಗೆ ಮತ್ತೊಂದು ಕಾನೂನು ಇದೆ. ಸಮಾಜದಲ್ಲಿ ಅಶಾಂತಿ ತಾಂಡವವಾಡುತ್ತಿದೆ. ತನಿಖೆ‌ ನೆಪದಲ್ಲಿ ಕಿರುಕುಳ ನೀಡಲಾಗುತ್ತಿದೆ.

   ಶಾಹೀನ್ ಶಿಕ್ಷಣ‌ ಸಂಸ್ಥೆ ಪ್ರತಿವರ್ಷ‌ ,200-300ಮೆಡಿಕಲ್ ವಿದ್ಯಾರ್ಥಿಗಳು ಶಿಕ್ಷಣ‌ ಪಡೆಯುತ್ತಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಗಳನ್ನು ರೂಪಿಸುತ್ತಿರುವ ಷಾಹಿ ಶಿಕ್ಷಣ ಸಂಸ್ಥೆಯನ್ನು ಮುಚ್ಚಿಸುವ ಹುನ್ನಾರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap