ಚಿ.ನಾ ಹಳ್ಳಿ : ಮನೆ ಬಾಗಿಲಿಗೆ ತರಕಾರಿ : ಮುಖ್ಯಾಧಿಕಾರಿ.

ಚಿಕ್ಕನಾಯಕನಹಳ್ಳಿ :

     ತರಕಾರಿ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚುತ್ತಿದೆ ಎನ್ನುವ ಕಾರಣದಿಂದ ಜನರು ಮನೆಯಿಂದ ಹೊರ ಬರದಂತೆ, ಪ್ರತಿ ವಾರ್ಡ್ ನಲ್ಲೂ ಅವರ ಮನೆ ಬಾಗಿಲಿಗೆ ತರಕಾರಿಗಳನ್ನು ತಳ್ಳುವ ಗಾಡಿಗಳ ಮೂಲಕ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭಾ ಮುಖ್ಯಾಧಿಕಾರಿ ಶ್ರೀನಿವಾಸ್ ತಿಳಿಸಿದರು.

      ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಕೋರೋನಾ ವೈರಸ್ ತಡೆಯುವ ಹಾಗೂ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಮುಖ್ಯಾಧಿಕಾರಿಗಳು ಪಟ್ಟಣದ 23 ವಾರ್ಡ್ ನ ನೂತನ ಸದಸ್ಯರೊಂದಿಗೆ ಚರ್ಚೆ ನಡೆಸಿದರು.

      ಪ್ರತಿ ದಿನದ ತರಕಾರಿ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಜನರು ಕೊಳ್ಳಲು, ಮಾರಾಟಕ್ಕೆ ಮುಗಿ ಬೀಳುತ್ತಿದ್ದಾರೆ ಇದನ್ನು ತಡೆಯಲು ಹಾಗೂ ಜನರಲ್ಲಿ ಕೊರೋನೋ ಕಾಯಿಲೆ ಬಗ್ಗೆ ಅರಿವು ಮೂಡಿಸಲು ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು, ಜನರ ಮನೆ ಬಾಗಿಲಿಗೆ ತರಕಾರಿ ವಸ್ತುಗಳನ್ನು ತಳ್ಳುವ ಗಾಡಿ ಮೂಲಕ ಎಲ್ಲಾ 23ವಾರ್ಡ್ ಗಳಲ್ಲೂ ವ್ಯವಸ್ಥೆ ಮಾಡಲಾಗುವುದು, ಈ ಬಗ್ಗೆ ಆಯಾ ವಾರ್ಡ್ ನ ಸದಸ್ಯರ ಸಹಕಾರವನ್ನು ಪಡೆಯಲಾಗುವುದು ಹಾಗೂ ಪ್ರತಿ ವಾರ್ಡ್ ನಲ್ಲಿ ಸಹಾಯವಾಣಿಗಳನ್ನು ಆರಂಭಿಸಿ ಜನರಿಗೆ ಅನುಕೂಲ ಮಾಡಲಾಗುವುದು ಎಂದರು.

      ಪರಿಸರ ಇಂಜಿನಿಯರ್ ಜ್ಯೋತಿಶ್ವರಿ ಮಾತನಾಡಿ, ಇರುವ 30ಜನ ಪೌರಕಾರ್ಮಿಕರಲ್ಲಿ 2 ಬ್ಯಾಚ್ ಮಾಡಿ ಕಾರ್ಮಿಕರನ್ನು ಪ್ರತಿ ವಾರ್ಡ್ ಗಳಿಗೆ ಫೆನಾಯಿಲ್ ಸಿಂಪಡಣೆ ಹಾಗೂ ಸ್ವಚ್ಛತೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸದಸ್ಯರು ಮಾತನಾಡಿ ಮುಖ್ಯಾಧಿಕಾರಿಗಳಿಗೆ ಹಲವು ಸಲಹೆಗಳನ್ನು ನೀಡಿದರು. ಪುರಸಭಾ ಸದಸ್ಯ ರಾಜಶೇಖರ್ ಮಾತನಾಡಿ,       ಪಟ್ಟಣದ ಪ್ರತಿ ವಾರ್ಡ್ ನಲ್ಲೂ ಕಸ ಹಾಗೂ ಅನೈರ್ಮಲ್ಯ ಹೆಚ್ಚಾಗಿದೆ, ವಾರ್ಡ್ ಗಳಲ್ಲಿ ಸ್ವಚ್ಛತೆಯನ್ನು ಕಾಪಾಡಿ ಕಸ ವಿಲೇವಾರಿಯನ್ನು ಚುರುಕಾಗಿ ಮಾಡಿ ಎಂದರು.

      ಪುರಸಭಾ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿ, ಬೆಳಗಿನ ಮಾರುಕಟ್ಟೆಗಳಲ್ಲಿ ತರಕಾರಿ ಹಾಗೂ ಇತರ ಅಗತ್ಯ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಿದ್ದಾರೆ ಇದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ, ಮಾರಾಟಗಾರರು ಬೆಲೆಗಳನ್ನು ತಮಗೆ ಇಷ್ಠ ಬಂದಂತೆ ಹೆಚ್ಚಿಸಿರುವವರ ಬಗ್ಗೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಿ ಎಂದರು.

      ಪುರಸಭಾ ಸದಸ್ಯೆ ರೇಣುಕಾ ಗುರುಮೂರ್ತಿ ಮಾತನಾಡಿ, ನಮ್ಮ ವಾರ್ಡ್ ಗಳಲ್ಲಿ ತರಕಾರಿ ಹಾಗೂ ಇತರ ಅಗತ್ಯ ಸಾಮಗ್ರಿಗಳ ಬಂದಾಗ ನಾವು ರಸ್ತೆಯಲ್ಲಿ ನಿಂತು ಗಡಿಬಿಡಿಯನ್ನು ತೆರವುಗೊಳಿಸಲು ಹೋದರೆ ಜನರು ನಮ್ಮ ಬಳಿಯೇ ಬಂದು ಗುಂಪುಕಟ್ಟಲು ಶುರು ಮಾಡುತ್ತಾರೆ ಹಾಗಾಗಿ ಜನರನ್ನು ಅಧಿಕಾರಿಗಳೇ ನಿಭಾಯಿಸಬೇಕಾಗಿದೆ, ನಾವೂ ಸಹ ಜನರಲ್ಲಿ ಅಂತರ ಕಾಯ್ದುಕೊಳ್ಳಲು ತಿಳಿ ಹೇಳುತ್ತೇವೆ ಎಂದರು.

      ಪುರಸಭಾ ಸದಸ್ಯೆ ದಾಕ್ಷಯಣಮ್ಮ ದೊರೆಮುದ್ದಯ್ಯ ಮಾತನಾಡಿ, ಪಟ್ಟಣದ ವಾರ್ಡ್ ಗಳಲ್ಲಿ ಸ್ವಚ್ಛತೆಗೆಯ ಜೊತೆಗೆ ನೀರಿನ ಸೌಲಭ್ಯವು ಅಗತ್ಯವಾಗಿದೆ, ಮುಖ್ಯಾಧಿಕಾರಿಗಳು ಸ್ವಚ್ಛತೆಯ ಕಡೆ ಗಮನ ಹರಿಸುವ ಜೊತೆಗೆ ಬೇಸಿಗೆ ಸಮಯದಲ್ಲಿ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.

ಪುರಸಭೆವತಿಯಿಂದ ನಾಗರಿಕರಿಗೆ ಮಾಸ್ಕ್ ನೀಡಿ ;

    ಕೋರೋನಾ ಸಮಸ್ಯೆಗೆ ಜನಗಳಿಗೆ ಅತಿ ಮುಖ್ಯವಾಗಿರುವುದು ಮಾಸ್ಕ್, ಪಟ್ಟಣದ ಜನತೆಯ ಮನೆ ಮನೆಗೆ ಕಸದ ಬುಟ್ಟಿ ವಿತರಿಸಿದಂತೆ ಮಾಸ್ಕ್ ನ್ನು ವಿತರಿಸಿ ಎಂದು ಪುರಸಭಾ ಸದಸ್ಯ ಮಲ್ಲೇಶ್ ಸಲಹೆ ನೀಡಿದರು.

    ಸಭೆಯಲ್ಲಿ ಪುರಸಭಾ ಸದಸ್ಯರುಗಳಾದ ಸಿ.ಬಸವರಾಜು, ಸಿ.ಡಿ.ಸುರೇಶ್, ಮಂಜುನಾಥ್, ಮಲ್ಲಿಕಾರ್ಜುನ್, ಸಿ.ಬಿ.ತಿಪ್ಪೇಸ್ವಾಮಿ,  ರೇಣುಕಾಗುರುಮೂರ್ತಿ, ಪೂರ್ಣಿಮ, ಪುಷ್ಪ, ಲಕ್ಷ್ಮೀಪಾಂಡುರಂಗಯ್ಯ, ಮಮತಾಧೃವಕುಮಾರ್, ದಾಕ್ಷಾಯಿಣಿ ದೊರೆಮುದ್ದಯ್ಯ, ರಾಜೇಶ್ವರಿ ದೊಡ್ಡಯ್ಯ, ಸುಧಾ ಸುರೇಶ್, ರಾಜಶೇಖರ್, ಜಯಮ್ಮ, ದ್ರಾಕ್ಷಾಯಣಮ್ಮ, ರೇಣುಕ್ ಪ್ರಸಾದ್, ಮಲ್ಲೇಶಯ್ಯ ಮತ್ತಿತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link