ಕೊರಟಗೆರೆ
ಪ್ರತ್ಯೇಕವಾಗಿ ಎರಡುಕಡೆ ಕೈ ಚಳಕ ತೋರಿಸಿದ ಕಳ್ಳರು, ಸಾವಿರಾರು ರೂ. ನಗದು ಮತ್ತು ಕಚೇರಿಗಳಲ್ಲಿನ ಕರ ವಸೂಲಿಯಾದ ಹಣ ದೋಚಿ ಪರಾರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ತಡರಾತ್ರಿ ಜರುಗಿದೆ.
ತಾಲ್ಲೂಕಿನ ಕಸಬಾ ಹೋಬಳಿಯ ವಡ್ಡಗೆರೆ ಗ್ರಾಮ ಪಂಚಾಯಿತಿ ಕಚೇರಿ ಮತ್ತು ಗ್ರಾ.ಪಂ ವ್ಯಾಪ್ತಿಯ ಚೀಲಗಾನಹಳ್ಳಿ ಗ್ರಾಮದ ಮನೆಯೊಂದರಲ್ಲಿ ಬೀರುವಿನ ಬೀಗ ಮುರಿದು ಮನೆಯಲ್ಲಿದ್ದ 25 ಸಾವಿರ ರೂ. ನಗದು ಹಾಗೂ 20 ಸಾವಿರ ರೂ. ಬೆಲೆ ಬಾಳುವ ಎಲ್ಇಡಿ ಟಿವಿಯನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ವಡ್ಡಗೆರೆ ಗ್ರಾಮದಲ್ಲಿ ತಡರಾತ್ರಿ 1.45 ರ ಸಮಯದಲ್ಲಿ ದ್ವಿಚಕ್ರವಾಹನದಲ್ಲಿ ಬಂದ 3 ಜನರನ್ನು ಕೆಲವು ಊರಿನ ಗ್ರಾಮಸ್ಥರು ನೋಡಿದೆವು. ಆದರೆ ಯಾರೊ ಸ್ಥಳೀಯರಿರಬಹುದು ಎಂದು ತಿಳಿದು ಸುಮ್ಮನಾದೆವು. ಮುಂಜಾನೆ ನೋಡಿದರೆ ಗ್ರಾ.ಪಂ ಬೀಗ ಒಡೆದು ಕಚೇರಿಯಲ್ಲಿದ್ದ ಕರ ವಸೂಲಿ ಹಣ ಮತ್ತು ಖಡತಗಳನ್ನು ಚೆಲ್ಲಾಪಿಲ್ಲಿ ಮಾಡಿ ಪಾರಾರಿಯಾಗಿದ್ದಾರೆ. ಕಡತಗಳು ಕಾಣೆಯಾಗಿವೆಯೋ ಇಲ್ಲವೋ ಎಂಬುದರ ಬಗ್ಗೆ ಪಿಡಿಒರವರಿಂದಲೆ ತಿಳಿಯಬೇಕಾಗಿದೆ ಎಂದು ಗ್ರಾಮಸ್ಥರ ವಲಯದಲ್ಲಿ ಮಾತುಗಳು ಕೇಳಿ ಬಂದವು.
ನಂತರ ಗ್ರಾ.ಪಂ ಕಚೇರಿಯಲ್ಲಿದ್ದ ಸಿ.ಸಿ ಟಿವಿಗಳಿಂದ ಸಾಕ್ಷಿ ದೊರಕಬಹುದು ಎಂದು ಚಾಣಾಕ್ಷ ಕಳ್ಳರು ಸಿಸಿ ಟಿವಿಯ ಮಾನಿಟರ್ ಮತ್ತು ಪೋಟೆಜ್ ಯಂತ್ರವನ್ನೆ ದೋಚಿ, ಪಕ್ಕದ ಗ್ರಾಮಕ್ಕೆ ತೆರಳಿ ಮನೆಯ ಬೀಗವನ್ನು ಮುರಿದು ಕಳ್ಳತನ ಮಾಡಿರಬಹುದು ಎಂದು ತಿಳಿದು ಬಂದಿದೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಸಿಪಿಐ ಮುನಿರಾಜು ಹಾಗೂ ಪಿಎಸ್ಐ ಮಂಜುನಾಥ್ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
