ಹರಪ್ಪನಹಳ್ಳಿ:
ತಾಲೂಕು ಬಿಜೆಪಿ ಘಟಕದ ಅಧಿಕೃತ ಕಚೇರಿ ಈವರೆಗೂ ಇಲ್ಲ ಎಂದು ಭಾರತೀಯ ಜನತಾ ಪಕ್ಷದ ತಾಲೂಕು ಅಧ್ಯಕ್ಷ ಕೆ.ಲಕ್ಷ್ಮಣ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಆಗಾಗ ಆಯೋಜಿಸುವ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ಗೈರಾಗಿರುವ ವಿವಿಧ ಘಟಕದ 20 ಪದಾಧಿಕಾರಿಗಳ ವಿರುದ್ಧ ಜಿಲ್ಲಾಧ್ಯಕ್ಷರಿಗೆ ದೂರು ಸಲ್ಲಿಸಲಾಗಿದೆ. ಬಿಜೆಪಿ ತಾಲೂಕು ಘಟಕದ ಕಚೇರಿ ಆರಂಭಿಸಲು ಜಿಲ್ಲಾ ಘಟಕ ಮತ್ತು ರಾಜ್ಯ ಘಟಕಕ್ಕೆ ಮನವಿ ಮಾಡಿರುವುದಾಗಿ ಹೇಳಿದರು.
ತಾಲೂಕು ಬಿಜೆಪಿಯಲ್ಲಿ ಗುಂಪುಗಾರಿಕೆ, ಭಿನ್ನಮತವಿಲ್ಲ. ಶಾಸಕರೊಂದಿಗೂ ಯಾವುದೇ ಮನಸ್ತಾಪವಿಲ್ಲ. ಕರ್ತವ್ಯದ ಒತ್ತಡದ ನಡುವೆ ಶಾಸಕರು ಈ ಕಾರ್ಯಕ್ರಮಕ್ಕೆ ಬಾಗಿಯಾಗಿಲ್ಲ ಎಂದು ಸ್ಪಷ್ಟಪಪಡಿಸಿದರು. ಉಪಾಧ್ಯಕ್ಷ ಕಣಿವಿಹಳ್ಳಿ ಮಂಜುನಾಥ ಮಾತನಾಡಿ, ಯಾರೊಂದಿಗೆ ಭಿನ್ನಾಭಿಪ್ರಾಯವಿಲ್ಲ, ಹೈಕಮಾಂಡ್ ಆದೇಶದಂತೆ ಪಕ್ಷ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮದ ತಾಲೂಕು ಉಸ್ತುವಾರಿ ಬೆಣ್ಣಿಹಳ್ಳಿ ರೇವಣ್ಣ ಮಾತನಾಡಿ, ಅಧ್ಯಕ್ಷ ಲಕ್ಷ್ಮಣ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಕಾರ್ಯ ಚುರುಕುಗೊಂಡಿದೆ. ಹೈಕಮಾಂಡ್ ಆದೇಶ ಪಾಲಿಸುವುದಷ್ಟೆ ನಮ್ಮ ಕೆಲಸ ಎಂದು ಹೇಳಿದರು. ಬಿಜೆಪಿ ಮುಖಂಡ ವೈ.ಕೆ.ಬಿ.ದುರುಗಪ್ಪ ಇತರರಿದ್ದರು.
