ಏ.14ರವರೆಗೆ ರಾಜ್ಯದಲ್ಲಿ ಮದ್ಯಮಾರಾಟ ಇಲ್ಲ : ಸಿ ಎಂ ಸ್ಪಷ್ಟನೆ

ಬೆಂಗಳೂರು

     ಏಪ್ರಿಲ್ 14ರವರೆಗೆ ರಾಜ್ಯದಲ್ಲಿ ಮದ್ಯಮಾರಾಟ ಮಾಡಲು ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿ, ಲಾಕ್‌ಡೌನ್ ಮುಗಿಯುವವರೆಗೂ ಮದ್ಯಪ್ರಿಯರು ಕಾಯಲೇಬೇಕು ಎಂದಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಮದ್ಯಕ್ಕಾಗಿ ದೆಹಲಿಗೆ ಯಾರು ಹೋಗಿದ್ದಾರೋ ಅವರೇ ಮುಂದೆ ಬಂದರೆ ಒಳ್ಳೆಯದು.ಆ ನವು ನಿಮ್ಮನ್ನು ಹುಡುಕುವುದು ತಪ್ಪಲಿದೆ.ಏಪ್ರಿಲ್ ೧೪ವರೆಗೆ ಮದ್ಯದಂಗಡಿ ಬಂದ್ ಇರಲಿದೆ.ಯಾರಿಗೆಲ್ಲ ಎಣ್ಣೆ ಕುಡಿಯಬೇಕೆಂಬುದಿದೆಯೋ ಅವರು ಅಲ್ಲಿಯವರೆಗೆ ಕಾಯಲೇಬೇಕು ಎಂದು ನಗೆಚಟಾಕಿ ಹಾರಿಸಿದರು‌.

     ಮುಖ್ಯಮಂತ್ರಿಗಳ ಮಾತಿಗೆ ದನಿಗೂಡಿಸಿದ ಸಚಿವ ಆರ್.ಅಶೋಕ್, ಲಾಕ್‌ಡೌನ್ ಮುಗಿಯುವವರೆಗೂ ಎಣ್ಣೆ ನಿಮ್ದಯ ಊಟ ಮಾತ್ರ ನಮ್ದು ಎಂದು ಪರಿಹಾಸ್ಯ ಮಾಡಿದರು . ಕೇರಳದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮದ್ಯಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ .ರಾಜ್ಯದಲ್ಲಿ ಮದ್ಯ ಸಿಗದೇ ಐವರು ಮೃತಪಟ್ಟಿದ್ದು, ಮದ್ಯದಂಗಡಿ ತೆರೆಯುವಂತೆ ಮದ್ಯಪ್ರಿಯರು ಆಗ್ರಹಿಸಿದ್ದರು .ಈ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿರುವುದಾಗಿ ಅಬಕಾರಿ ಸಚಿವ ನಾಗೇಶ್ ಹೇಳಿದ್ದರು.ಇಂದು ಯಡಿಯೂರಪ್ಪ ಲಾಕ್‌ಡೌನ್ ಮುಗಿಯುವವರೆಗೂ ಮದ್ಯದಂಗಡಿ ತೆರೆಯಲಾಗದು ಎಂದು ಸ್ಪಷ್ಟಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap