ಸಾವಿನ ಮನೆಗೆ ಕನ್ನಾ ಹಾಕಿದ್ದ ಕಳ್ಲನ ಬಂಧನ ..!!

ಬೆಂಗಳೂರು

       ಸಾವು ಸಂಭವಿಸಿದ್ದ ಮನೆಯವರು ಮೃತಪಟ್ಟವರ ಅಂತ್ಯಕ್ರಿಯೆಗಾಗಿ ಸ್ಮಶಾನಕ್ಕೆ ಹೋಗಿ ವಾಪಾಸ್ಸಾಗುವಷ್ಟರಲ್ಲಿ ಅವರ ಮನೆಗೆ ನುಗ್ಗಿ ನಗದು ಚಿನ್ನಾಭರಣ ದೋಚುತ್ತಿದ್ದ ಖತರ್ನಾಕ್ ಕಳ್ಳನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.

        ಶ್ರೀರಾಮಪುರದ ಮುನಿರಾಜು ಬಂಧಿತ ಆರೋಪಿಯಾಗಿದ್ದಾನೆ,ಬಂಧಿತನಿಂದ ನಗದು ಸೇರಿ 27 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್‍ಪಿ ಡಾ.ರಾಮನಿವಾಸ್ ಸೆಪಟ್ ಅವರು ತಿಳಿಸಿದ್ದಾರೆ.

      ಹಲವು ಠಾಣೆಗಳಲ್ಲಿ ಇಂತಹುದೇ ಪ್ರಕರಣ ಸಂಬಂಧ ಈತನ ಮೇಲೆ ದೂರುಗಳು ದಾಖಲಾಗಿದ್ದವು ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮನಿವಾಸ್ ಸೆಪಟ್ ತಿಳಿಸಿದ್ದಾರೆ.

       ಸತ್ತವರಿಗೆ ಚಟ್ಟ ಕಟ್ಟುವ ಅಂಗಡಿಯವನ ಸಂಪರ್ಕ ಇಟ್ಟುಕೊಂಡಿದ್ದ ಮುನಿರಾಜು, ಅವರ ಮೂಲಕ ತನ್ನ ಕೈಚಳಕ ತೋರಿಸುತ್ತಿದ್ದ. ಸತ್ತವರ ಅಂತ್ಯಕ್ರಿಯೆ ನೆರವೇರಿಸಲು ಸ್ಮಶಾನಕ್ಕೆ ತೆರಳುವುದನ್ನೇ ಕಾಯುತ್ತಿದ್ದ ಆರೋಪಿ ತಕ್ಷಣ ಮನೆಗೆ ನುಗ್ಗಿ ನಗದು, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗುತ್ತಿದ್ದ.

        ಬೆಂಗಳೂರು ಗ್ರಾಮಾಂತರದ ನೆಲಮಂಗಲ, ಮಾದನಾಯಕನಹಳ್ಳಿ ಹಾಗೂ ಬೆಂಗಳೂರು ಹೊರವಲಯ ಅವಲಹಳ್ಳಿ ಸೇರಿ ಹಲವೆಡೆ ಇದೇ ರೀತಿಯ 9 ಪ್ರಕರಣಗಳು ದಾಖಲಾಗಿದ್ದವು. ಕಳ್ಳನ ಬೆನ್ನತ್ತಿದ್ದ ಅವಲಹಳ್ಳಿ ಪೊಲೀಸರು ಮುನಿರಾಜುನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದ ಆವಲಹಳ್ಳಿ ಪೊಲಿಸರಿಗೆ 10 ಸಾವಿರ ರೂ. ಬಹುಮಾನ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ