ಸಾರ್ವಜನಿಕರು ಹಿಡಿದ ಕಳ್ಳ, ಮರುದಿನ ಮತ್ತೆ ಕರ್ತವ್ಯಕ್ಕೆ ಹಾಜರ್

ತಿಪಟೂರು :

       ನಗರದಲ್ಲಿ ಕಳ್ಳತನ ಪ್ರಕರಣಗಳು ದಿನೆ ದಿನೇ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕುಡಿತದ ದಾಸರಾಗಿರುವ ಕೆಲವರು ಕೈಗೆ ಸಿಕ್ಕಿದ್ದನ್ನು ಕದ್ದು, ಸಿಕ್ಕಷ್ಟು ದುಡ್ಡಿಗೆ ಮಾರುತ್ತಿದ್ದಾರೆ. 5 ರಿಂದ 10 ಸಾವಿರ ಬೆಲೆಯ ಮಕ್ಕಳ ಬೈಸಿಕಲ್ ನಿಂದ ಹಿಡಿದು ನೀರಿನ ತೊಟ್ಟಿಯ ಕಬ್ಬಿಣದ ಮುಚ್ಚುಳ. ಬಣ್ಣ ಬಳಿಯಲು ಬಳಸುವ ಬಕೆಟ್‍ಗಳು, ಕಬ್ಬಿಣದ ಸ್ಟ್ಯಾಂಡ್‍ಗಳು ಮಾಯವಾಗುತ್ತಿದ್ದು, ಕದ್ದಾತ ಇವುಗಳನ್ನು 50 ರಿಂದ 150 ರೂಗಳಿಗೆ ಮಾರುತ್ತಿರುವುದು ಕಂಡು ಬಂದಿದೆ.

     ಶುಕ್ರವಾರ ಬೆಳಿಗ್ಗೆ 6 ಸಮಯದಲ್ಲಿ ಬಣ್ಣ ಬಳಿಯಲು ಉಪಯೋಗಿಸುವ ಸ್ಟ್ಯಾಂಡ್ ಕದ್ದು, ಸಿಕ್ಕಿ ಬಿದ್ದ ಇವನನ್ನು ಸಾರ್ವಜನಿಕರು ನಗರ ಠಾಣೆಗೆ ಒಪ್ಪಿಸಿದರೂ. ಮರುದಿನ ಬೆಳಿಗ್ಗೆಯೇ ಕದ್ದ ಬೆಲೆ ಬಾಳುವ ಸೈಕಲ್‍ನೊಂದಿಗೆ ಈತ ಗುಜರಿ ಅಂಗಡಿ ಮುಂದೆ ಕಳ್ಳತನದ ಕರ್ತವ್ಯಕ್ಕೆ ಹಾಜರಾಗಿದ್ದಾನೆ. ಈತನ ಕುಡಿತದ ಚಟಕ್ಕೆ ಮಕ್ಕಳ ಬೈಸಿಕಲ್‍ಗಳು ಸುಲಭದ ತುತ್ತಾಗುತ್ತಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link