ಮಿಡಿಗೇಶಿ
ಕಳೆದ ನಾಲ್ಕಾರು ತಿಂಗಳ ಹಿಂದೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿಯಲ್ಲಿ ಹಸುಕರುಗಳ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಡೆದಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದವು. ಸದರಿ ಕಳವು ಪತ್ತೆ ಪ್ರಕರಣಗಳನ್ನು ಮಿಡಿಗೇಶಿ ಪೋಲೀಸ್ ಸಿಬ್ಬಂದಿ ಪತ್ತೆ ಹಚ್ಚುವ ಮುನ್ನ ಮತ್ತೆ ಮೇ 18 ರಂದು ರಾತ್ರಿ ಇದೇ ಹೋಬಳಿಯ ಚಿನ್ನೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ತಿಪ್ಪಗೊಂಡನಹಳ್ಳಿಯ ಫೋಟೋಗ್ರಾಫರ್ ಶಿವಕುಮಾರ್ ಮನೆಯಲ್ಲಿ ಕಳ್ಳತನ ನಡೆದಿದೆ.
ಶಿವಕುಮಾರ್ ಹಾಗೂ ಮನೆಯವರು ಕಾರ್ಯನಿಮಿತ್ತ ಮನೆಗೆ ಬೀಗಹಾಕಿಕೊಂಡು ಮತ್ತೊಂದು ಬಾಗಿಲಿಗೆ ಬಾಗಿಲ ಒಳಭಾಗದ ಬೋಲ್ಟ್ ಹಾಕಿಕೊಂಡಿದ್ದು ಬಾಗಿಲು ತೆರೆಯಲಾಗದಂತೆ ಕೆಲವು ಕಟ್ಟಿಗೆಯ ಪರಿಕರಗಳನ್ನು ಅಡ್ಡಲಾಗಿ ಇಟ್ಟಿದ್ದಾರೆ. ದಿನ ಮೇ 8 ರಂದು ರಾತ್ರಿ ಚಾಲಾಕಿ ಕಳ್ಳರು ಬಾಗಿಲನ್ನು ದಬ್ಬಿ ಒಳ ನುಗ್ಗಿ ಬೀರುವಿನಲ್ಲಿದ್ದಂತಹ ಬಟ್ಟೆಗಳನ್ನೆಲ್ಲಾ ಚೆಲ್ಲಾಡಿ ಲಾಕರ್ನಲ್ಲಿಟ್ಟಿದ್ದ ಐದು ಸಾವಿರ ರೂ. ನಗದು ಹಾಗೂ ಮಕ್ಕಳ ಎರಡು ಬಂಗಾರದ ಉಂಗುರಗಳು, ಮಹಿಳೆಯರು ಕರಿಮಣಿಸರಕ್ಕೆ ಹಾಕಿಕೊಳ್ಳುವಂತಹ ನಾಲ್ಕು ಬಂಗಾರದ ಕಾಸುಗಳು, ಒಂದು ಜೊತೆ ಬಂಗಾರದ ಜುಮುಕಿಗಳನ್ನು ಕಳವು ಮಾಡಿದ್ದಾರೆ. ಶಿವಕುಮಾರ ಹಾಗೂ ಮನೆಯವರು ಮೇ 09 ರಂದು ಮನೆಗೆ ಬಂದು ಬೀಗ ತೆಗೆದು ನೋಡಿದಾಗ ಕಳ್ಳತನವಾಗಿರುವ ಬಗ್ಗೆ ಖಚಿತವಾಗಿದ್ದು, ಇದೇ ದಿನ ಶಿವಕುಮಾರ ಮಿಡಿಗೇಶಿ ಪೋಲೀಸ್ ಠಾಣೆಗೆ ಲಿಖಿತ ದೂರನ್ನು ನೀಡಿರುವುದಾಗಿ ಪತ್ರಿಕೆಗೆ ತಿಳಿಸಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/05/IMG_20190509_144709_BURST6.gif)