ಇದು ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ: ಸಿದ್ದರಾಮಯ್ಯ

ಬೆಂಗಳೂರು:

      ಇದು ರಾಹುಲ್- ಮೋದಿ ನಡುವೆ, ಪಕ್ಷದ ನಡುವೆ ನಡೆಯುತ್ತಿರುವ ಚುನಾವಣೆ ಅಲ್ಲ. ಪ್ರಜಾಪ್ರಭುತ್ವ ಹಾಗೂ ಸರ್ವಾಧಿಕಾರದ ನಡುವಿನ ಚುನಾವಣೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

        ಬೆಂಗಳೂರು ಪ್ರೆಸ್ ಕ್ಲಬ್ ಹಾಗೂ ಬೆಂಗಳೂರು ವರದಿಗಾರರ ಕೂಟ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮ ದಲ್ಲಿ ಮಾತನಾಡಿ, ಮೋದಿ ನಾಯಕತ್ವದಲ್ಲಿ ಬಿಜೆಪಿ ಐದು ವರ್ಷ ಪೂರೈಸಿದೆ. ಇಲ್ಲಿ ಮುಖ್ಯವಾಗಿ ಮೋದಿ ಐದು ವರ್ಷದ ಸಾಧನೆ ಒರೆಗೆ ಹಚ್ಚುವ ಸ್ಥಿತಿ ಇದೆ. ಹೇಳಿದ್ದೇನು, ಮಾಡಿದ್ದೇನು ಎನ್ನುವುದನ್ನು ಜನರ ಮುಂದಿಡುವುದು ಸರ್ಕಾರದ ಕರ್ತವ್ಯ.

         ಸಂವಿಧಾನದ ಉಳಿವು ಮುಖ್ಯ. ಮೋದಿ ಸರ್ಕಾರದ ಸಾಧನೆ, ಅಭಿವೃದ್ಧಿ, ಜನರ ಬಗ್ಗೆ ಮಾತಾಡಿದ್ದು ವಿರಳ. ಭಾವನಾತ್ಮಕ ವಿಚಾರದ ಬಗ್ಗೆ, ಪ್ರತಿಪಕ್ಷಗಳ ಮಹಾಘಟಬಂಧನ್, ದೇಶದ ರಕ್ಷಣೆ ವಿಚಾರ ಮಾತಿಗೆ ಒತ್ತು ಕೊಡುತ್ತಿದ್ದಾರೆ. ಏನು ಹೇಳಿದ್ದೆವು, ಏನು ಮಾಡಿದ್ದೆವು ಎನ್ನುವುದನ್ನು ಹೇಳುತ್ತಿಲ್ಲ. ಐದು ವರ್ಷ ಭ್ರಮಾಲೋಕ ಸೃಷ್ಟಿಸಿ ಜನರ ಮರಳು ಮಾಡಿದ್ದರು. ಜನ ಕೂಡ ಬದಲಾವಣೆ ಬಯಸಿದ್ದರು. ಇದರ ಲಾಭ ಮೋದಿಗೆ ಸಿಕ್ಕಿತು. ಆಕರ್ಷಣೆಯ ಮಾತಿಗೆ ಜನ ಬೆಲೆ ಕೊಟ್ಟರು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸ ಇದೆ. ಜನರನ್ನು ಈಗ ನಂಬಿಸಲು ಸಾಧ್ಯವಿಲ್ಲ. ದೇಶದ ಜನ ರಾಜಕೀಯವಾಗಿ ಪ್ರಭುದ್ಧರಾಗಿದ್ದಾರೆ.

ಕೊಟ್ಟ ಭರವಸೆ ಏನಾಯಿತು?

         ಸರ್ಜಿಕಲ್ ಸ್ಟ್ರೈಕ್ ನ್ನು ದೊಡ್ಡ ಸಾಧನೆ ಅಂದು ಕೊಂಡಿದ್ದರು. ಇದೇ ಚುನಾವಣೆ ಗೆಲ್ಲಲು ಸಾಧ್ಯ ಅಂದುಕೊಂಡರೆ ಮೂರ್ಖತನವಾಗಲಿದೆ. ನೀವು ಕೊಟ್ಟ ಭರವಸೆ ಏನಾಯಿತು. 15 ಲಕ್ಷ ಎಲ್ಲಿ ಬಂತು, ನೋಟು ಅಮಾನ್ಯದ ನಂತರ ಎಷ್ಟು ಕಪ್ಪು ಹಣ ಬಂತು, ಯಾರ ವಿರುದ್ಧ ಕ್ರಮ ಕೈಗೊಂಡಿರಿ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮೊದಲೇ ಹೇಳಿದ್ದರು. ಜಿಡಿಪಿ ಶೇ. 2 ರಷ್ಟು ಕಡಿಮೆ ಆಗಲಿದೆ ಎಂದಿದ್ದರು. ಅದು ಆಗಿದೆ. ಅರ್ಥಶಾಸ್ತ್ರ ದ ಬಗ್ಗೆ ಎಲ್ಲಾ ಮಾತಾಡುತ್ತಾರೆ. ದೇಶ ಭಲಿಷ್ಠ ಪ್ರಧಾನಿ ಕೈಲಿದೆ, ಸುರಕ್ಷಿತರ ಕೈಲಿ ರಾಷ್ಟ್ರವಿದೆ ಎನ್ನುತ್ತಾರೆ. ಜನರಿಗೆ ನಾವು ನಮ್ಮ ತಪ್ಪು ಮುಚ್ಚಿಟ್ಟು, ಭಾವನಾತ್ಮಕ ವಿಚಾರದ ಮೂಲಕ ಮರೆಮಾಚಲು ಹೋದರೆ, ಒಂದಲ್ಲ ಒಂದು ದಿನ ಜನರ ಮುಂದೆ ಬಣ್ಣ ಬಯಲಾಗಲೇ ಬೇಕು. ಸಾಲಮನ್ನಾ ಮಾಡಿಲ್ಲ.

ಪ್ರಜಾಪ್ರಭುತ್ವ ಇವತ್ತು ಉಳಿಯಬೇಕಿದೆ

      ಸಿಬಿಐ , ಸಿಇಸಿ, ನ್ಯಾಯಾಲಯಗಳು ಕೂಡ ಬೀದಿಗೆ ಬರುವ ಸ್ಥಿತಿಗೆ ಬರುವಂತಾಗಿದೆ. ನ್ಯಾಯಾಲಯಗಳಲ್ಲಿ ಸತ್ಯ ಹೇಳುವುದು ಕಷ್ಟ ಆಗಿದೆ. ಮಾತು ಎತ್ತಿದ್ರೆ ಎಲ್ಲರೂ ಚೌಕಿದಾರ್ ಎನ್ನುತ್ತಾರೆ. ಇದು ಒಂದು ರೀತಿಯ ಚಟ ಆಗ್ಬಿಟ್ಟಿದೆ. ಯಡಿಯೂರಪ್ಪ ,ಈಶ್ವರಪ್ಪ, ಎಲ್ಲಾರು ಕೂಡ ಚೌಕಿದಾರ್ ಆಗ್ಬಿಟ್ಟಿದ್ದಾರೆ. ಸಾಮಾಜಿಕ ಬದ್ಧತೆ ಇವರಿಗೆ ಎಷ್ಟಿದೆ? ಎಲ್ಲಕ್ಕೂ ಉತ್ತರ ಕೊಡಿ. ಸಂವಿಧಾನ ಬದಲಿಸಿ ಎಲ್ಲರಿಗೂ ಸಮಾನತೆ ಇಲ್ಲದಂತೆ ಮಾಡಲು ಹೊರಟಿದ್ದಾರೆ. ಸಂವಿಧಾನ ರಕ್ಷಣೆ ವಿಚಾರದಲ್ಲಿ ಆತಂಕ ಶುರುವಾಗಿದೆ. ಸಂವಿಧಾನಾತ್ಮಕ ಸಂಸ್ಥೆ ದುರ್ಭಲಗೊಳಿಸುವ ಜತೆಗೆ ಸಾಮಾನ್ಯ ಜನರಿಗೆ ಭದ್ರತೆ ನೀಡುವ ಕಾರ್ಯ ಮಾಡಿಲ್ಲ ಎಂದರು.

ಈಗ ರೈತರು ನೆನಪಾಗಿದ್ದಾರೆ

       ಐದು ವರ್ಷ ಅಧಿಕಾರದಲ್ಲಿ ಇಲ್ಲದೇ ಪ್ರನಾಳಿಕೆಯಲ್ಲಿ ಹೇಳುವುದು ಬೇರೆ, ಸರ್ಕಾರ ನಡೆಸಿ ಐದು ವರ್ಷದ ನಂತರ ರೈತರು ನೆನಪಾಗಿದ್ದಾರೆ ಮೋದಿಗೆ. ರಾಹುಲ್ ಗಾಂಧಿ ಕನಿಷ್ಠ 12 ಸಾವಿರ ರೂ ಕನಿಷ್ಠ ಆದಾಯ ಇರಬೇಕು, ಅದಿಲ್ಲದವರಿಗೆ ವಾರ್ಷಿಕ 72 ಸಾವಿರೂ ನೀಡುವ ನ್ಯಾಯ ಯೋಜನೆ ತರಲಿದ್ದಾರೆ. ಈಗ 25 ಕೋಟಿ ಬಡವರಿಗೆ 3.5 ಲಕ್ಷ ಕೋಟಿ ಕೊಡುತ್ತೇವೆ ಎಂದಿದ್ದಾರೆ, ಇದನ್ನು ವಿರೋಧಿಸಲಾಗುತ್ತಿದೆ. ನಾವು ಒಮ್ಮೆಲೇ ನೀಡುತ್ತೇವೆ ಎಂದಿದ್ದರು. ನರೇಂದ್ರ ಮೋದಿ ಯ ಚೌಕಿದಾರ್ ಯಾರ ಅನುಕೂಲಕ್ಕೆ ಬರುತ್ತೆ. ಇವರು ಯಾರಿಗೆ ಚೌಕಿದಾರ್? ಇಂಧನ ಬೆಲೆ ಏಕೆ ಇಳಿಯಲಿಲ್ಲ.

       ಕಚ್ಚಾತೈಲ ಬೆಲೆ ಇಳಿದಾಗ ಬೆಲೆ ಇಳಿಸದೇ ಉಳಿತಾಯವಾದ ಹಣ ಜನರಿಗೆ ಯಾಕೆ ಸಿಕ್ಕಿಲ್ಲ. ಅಚ್ಚೇದಿನ್ ಯಾರಿಗೆ ಬಂತು? ರಾಜ್ಯದಲ್ಲಿ ದಲಿತರಿಗೆ ಜನಸಂಖ್ಯೆ ಗೆ ಅನುಗುಣವಾಗಿ ಹಣ ಸಿಗುವಂತೆ ನಾವು ಮಾಡಿದ್ದೇವೆ. ಕಾಳಜಿ ಇದ್ದರೆ ಇಂಥ ಕೆಲಸ ನೀವೇಕೆ ಮಾಡಬಾರದು? ಜನರಿಗೆ ಐದು ವರ್ಷದಲ್ಲಿ ಏನೂ ಮಾಡಿಲ್ಲ, ಈಗಲೂ ಹೇಳುತ್ತಿಲ್ಲ. ಪುಲ್ವಾಮಾ ಘಟನೆ ಪ್ರಸ್ತಾಪ, ರಾಮಮಂದಿರ ನಿರ್ಮಾಣದ ವಿಚಾರ ತರುತ್ತಲೇ ಇದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ನಾವು ವಿರೋಧಿಸುತ್ತಿಲ್ಲ. ಆದರೆ ಮಾತಿಗೆ ಇವರ ಘೋಷಣೆ ಆಗಿದೆ. ಯಾರಿಗೆ ಇವರು ಸೇವಕ? ಸಬ್ ಸಾಥ್ ಸಬ್ ಕಾ ವಿಕಾಸ್ ಅಂದರು. ಅದು ಆಯಿತಾ? ಜನರ ಮುಂದೆ ಪ್ರಸ್ತಾಪಿಸುವ ಬದಲು ಚೌಕಿದಾರ್, 56 ಇಂಚಿನ ಎದೆ ತೋರಿಸಿದರೆ ಹೊರತು ಜನರ ಸಮಸ್ಯೆ ಬಗ್ಗೆ ಮಾತಾಡಲಿಲ್ಲ ಎಂದು ಅಭಿಪ್ರಾಯ ಪಟ್ಟರು.

ನಮ್ಮ ವೈರಿಗಳು

       ಕೋಮುವಾದಿ, ಪ್ರಜಾಪ್ರಭುತ್ವ ವಿರೋಧಿಗಳು ನಮ್ಮ ಮೊದಲ ರಾಜಕೀಯ ವೈರಿ. ಸಮ್ಮಿಶ್ರ ಸರ್ಕಾರ ಚುನಾವಣೆ ನಂತರವೂ ಉಳಿಯಲಿದೆ. ಯಡಿಯೂರಪ್ಪ ಕೇವಲ ಸಿಂ ಆಗುವ ಕನಸು ಕಾಣುತ್ತಿದ್ದಾರೆ. ಅದು ಈಡೇರದು. ಈ ಸಾರಿ ಬಿಜೆಪಿ ಸೋಲಲಿದೆ. ಮೋದಿ ಮತ್ತೆ ಪ್ರಧಾನಿ ಆಗಲ್ಲ, ಯುಪಿಎ ಅಧಿಕಾರಕ್ಕೆ ಬರಲಿದೆ, ರಾಹುಲ್ ಪ್ರಧಾನಿ ಆಗಲಿದ್ದಾರೆ.

       ಮೈತ್ರಿ ಗೆ ಬೆಂಬಲ‌ಸಿಗಲಿದೆ. ಬಿಜೆಪಿ ನೆಲೆ ಕಳೆದುಕೊಳ್ಳಲಿದೆ. ಈ ಸಾರಿ ರಾಜ್ಯದಲ್ಲಿ ಮೈತ್ರಿ ಮೂಲಕ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲು ಹೆಚ್ಚಾಗಿದೆ. ಮೋದಿ ಪ್ರಧಾನಿ ಆಗಲು ಸಾಧ್ಯವಿಲ್ಲ. ಇವಿಎಂ ಬಗ್ಗೆ ಈಗಲೂ ತಕರಾರು ಇದೆ. ಪರ- ವಿರೋಧ ಮಾತಿದೆ. ಈಗ ಅದನ್ನು ಬಿಟ್ಟುಬಿಡಿ. ನಮಗೆ ಅನುಮಾನ ಇಂದಿಗೂ ಇದ್ದೇ ಇದೆ. ನಾವು ಎಲ್ಲೆಡೆ ಗೆಲ್ಲುತ್ತೇವೆ. ಮತ್ತೆ ಮತ್ತೆ ಪ್ರಸ್ತಾಪ ಬೇಡ. ಎಲ್ಲೆಡೆ ನಾವು ಹೆಚ್ಚು ಸ್ಥಾನ ಗೆಲ್ಲುತ್ತೇವೆ.

       ಸಮನ್ವಯ ಸಮಿತಿ ಅಧ್ಯಕ್ಷರಾಗಿ ಹೇಗೆ ಮುಂದುವರಿಯುತ್ತೀರಿ ಎಂಬ ಪ್ರಶ್ನೆಗೆ, ನಾವು ಎರಡೂ ಪಕ್ಷ ಒಟ್ಟಾಗಿ ಹೋಗುತ್ತೇವೆ, ಗೆಲ್ಲುತ್ತೇವೆ. ಹಳೆ ಮೈಸೂರಿನಲ್ಲಿ ನಾವು ಪರಸ್ಪರ ವಿರೋಧಿಗಳು, ಆರಂಭದಲ್ಲಿ ಅಪಸ್ವರ ಇದೆ, ಕಾಲಾನಂತರದಲ್ಲಿ ಎಲ್ಲಾ ಸರಿಯಾಗಲಿದೆ. ಸಮನ್ವಯತೆ ಧಕ್ಕೆ ಆಗಿಲ್ಲ, ಮುಂದುವರಿಯುತ್ತೇವೆ. ಮುದ್ದಹನುಮೇಗೌಡರನ್ನು ನಾವೇ ಸಮಾಧಾನಿಸಿದ್ದೇವೆ.

      ಮೈಸೂರು ಸಮಸ್ಯೆ ಬಗೆಹರಿದಿದೆ. ಚುನಾವಣೆ ಸಂದರ್ಭ ಆಯಾರಾಮ್, ಗಯಾರಾಮ್ ಇದ್ದೇ ಇರುತ್ತದೆ. ಬಿಜೆಪಿಯಿಂದ ಕೂಡ ಸಾಕಷ್ಟು ಮಂದಿ ಬಂದಿದ್ದಾರೆ. ಇಲ್ಲಿಂದ ಕೆಲವರು ತೆರಳಿದ್ದಾರೆ. ಅದೆಲ್ಲಾ ಸಾಮಾನ್ಯ ಎಂದು ಎ. ಮಂಜು, ಸುಮಲತಾ ಬಗ್ಗೆ ವಿವರಿಸಿದರು.

ಸೋಲು ಹೆಚ್ಚಾಗಿದೆ

       ಉದ್ದಿಮೆ ಸೊರಗುತ್ತಿವೆ, ಕೆಲವು ಸೊರಗುತ್ತಿವೆ. ಎಂಇಎಸ್ ವಿಭಾಗದಲ್ಲಿ ಸೋಲು ಹೆಚ್ಚಾಗಿದೆ, ನಿರುದ್ಯೋಗ ಹೆಚ್ಚಾಗಿದೆ. ಇದು ದೊಡ್ಡ ಸಮಸ್ಯೆ. ಬಿಜೆಪಿ, ಮೋದಿ ವಿರುದ್ಧ ಅಲೆ ಇದೆ. ಇದರಿಂದ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಬಿಎಸ್ ವೈ ಆಡಿಯೋ ಟೇಪ್ ಎಸ್ ಐಟಿ ತನಿಖೆ ವಿಚಾರ ಪ್ರಸ್ತಾಪಿಸಿ, ಸ್ಪೀಕರ್ ಎಸ್ ಐಟಿಗೆ ಸಲಹೆ ಕೊಟ್ಟಿದ್ದಾರೆ. ಸಿಎಂ ಕೂಡ ಎಸ್ ಐಟಿ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಆದಷ್ಟು ಬೇಗ ಎಸ್ ಐಟಿ ಮಾಡುವಂತೆ ಹೇಳಿದ್ದೇನೆ. ಸಿಎಂ ಅವರು ಆದಷ್ಟು ಬೇಗ ಮಾಡುತ್ತಾರೆ ಎಂದರು.

ನಾವು ಬೆಂಬಲ ಕೊಟ್ಟ ಮೇಲೆ ಆದದ್ದು

      ಯಡಿಯೂರಪ್ಪ, ಕುಮಾರಸ್ವಾಮಿ ಅವರು ಅವರಪ್ಪನಾಣೆ ಸಿಎಂ ಆಗಲ್ಲ ಎಂದಿದ್ದೆ, ಈಗ ಅವರು ಆಗಿದ್ದಾರೆ. ಯಡಿಯೂರಪ್ಪ ಮೂರು ದಿನ ಮಾತ್ರ ಆಗಿದ್ದರು. ಕುಮಾರಸ್ವಾಮಿ ನಾವು ಬೆಂಬಲ ಕೊಟ್ಟಿದ್ದರಿಂದ ಮಾತ್ರ ಸಿಎಂ ಆಗಿದ್ದಾರೆ. ಅಂದ ಮೇಲೆ ಏನಾಯಿತು. ರಾಜಕೀಯ ಪ್ರೇರಿತ, ಪ್ರತಿಪಕ್ಷ ಗುರಿಯಾಗಿಸಿಕೊಂಡು ನಡೆಸುವ ದಾಳಿ ಬೇಡ. ಕೇಂದ್ರ ಸರ್ಕಾರ ಉದ್ದೇಶಪೂರ್ವಕ ಆದಾಯ ತೆರಿಗೆ ದಾಳಿ ಸರಿಯಲ್ಲ ಅಂದಿದ್ದೇನೆ. ಅಮಿತ್ ಷಾ, ಮೋದಿ ಬಂದರೆ ನಮಗೆ ಭಯವಿಲ್ಲ. ಧಾರಾಳವಾಗಿ ಪ್ರಚಾರಕ್ಕೆ ಬರಲಿ.

       ಷಾ ಬಂದಷ್ಟು ರಾಜ್ಯದಲ್ಲಿ ನಮಗೆ ಅನುಕೂಲ. ಮೈಸೂರಿನಲ್ಲ ಮತ ಅಂತರ ಗೊತ್ತಿಲ್ಲ. ನಾವು ಗೆಲ್ಲುತ್ತೇವೆ. ನಂಬಿಕೆ, ಕುಡುಂಬ ರಾಜಕಾರಣದ ಬಗ್ಗೆ ನಮ್ಮ ವಿರೋಧ ಇಲ್ಲ. ಅರ್ಹತೆ ಇದ್ದರೆ ಅವಕಾಶ ಪಡೆಯುವುದು ತಪ್ಪಲ್ಲ ಎಂದು ಹೇಳಿದರು.ಪ್ರೆಸ್ ಕ್ಲಬ್ ಅಧ್ಯಕ್ಷ ಸದಾಶಿವ ಶೆಣೈ, ಕಾರ್ಯದರ್ಶಿ ಕಿರಣ್, ವರದಿಗಾರರ ಕೂಟದ ಪ್ರಧಾನ ಕಾರ್ಯದರ್ಶಿ ಎಂ. ಚಂದ್ರಶೇಖರ್ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap