ಟಿಪ್ಪು ಜಯಂತ್ಯೋತ್ಸವ : ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ ಸಂಭ್ರಮಾಚರಣೆ

ಕುಣಿಗಲ್

      ಹಜರತ್ ಟಿಪ್ಪುಸುಲ್ತಾನ್ ಜಯಂತ್ಯೋತ್ಸವದ ಅಂಗವಾಗಿ ಸೆಂಟ್ರಲ್ ಮಜ್ಲಿಸೆ ಶೂರ ಸಮಿತಿ ಹಾಗೂ ಮುಸ್ಲೀಂ ಬಂಧುಗಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಗೂ ಅಂದ ಮಕ್ಕಳ ಶಾಲಾ ವಿದ್ಯಾರ್ಥಿಗಳಿಗೆ ಹಣ್ಣು,ಬ್ರೆಡ್ ನೀರು ವಿತರಿಸಿ ಟಿಪ್ಪುಸುಲ್ತಾನ್ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದರು.

       ಪಟ್ಟಣದ ಸೆಂಟ್ರಲ್ ಮಜ್ಲಿಸೆ ಶೂರ ಸಮಿತಿಯ ಅಧ್ಯಕ್ಷ ಎ.ಎಂ.ಷರೀಫ್ ಉಲ್ಲಾ ಹಾಗೂ ಕಾರ್ಯದರ್ಶಿ ಹಾಗೂ ಪುರಸಭಾ ಸದಸ್ಯ ಅನ್ಸರ್‍ಪಾಷಾ ನೇತೃತ್ವದಲ್ಲಿ ವಿಶೇಷವಾಗಿ ಟಿಪ್ಪು ಅಭಿಮಾನಿ ಹಣ್ಣುವ್ಯಾಪಾರಿ ಸದ್ದಾಂ ತಯಾರಿಸಿದ್ದ ಹಣ್ಣಿನ ಬುಟ್ಟಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಿ ಶುಭಕೋರಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಎ.ಎಂ. ಷರೀಫ್‍ಉಲ್ಲಾ ಟಿಪ್ಪುಸುಲ್ತಾನರು ಅತ್ಯುತ್ತಮ ರಾಜ್ಯಾಡಳಿತವನ್ನು ಮಾಡುವ ಮೂಲಕ ಇತಿಹಾಸದ ಪುಟದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ದೇಶವು ಬ್ರಿಟೀಷರ ಆಳ್ವಿಕೆಯ ಕಪಿಮುಷ್ಠಿಗೆ ಸಿಲುಕಿದ್ದಾಗಲೇ ಮೈಸೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ದಂಡೆತ್ತಿ ಬಂದ ಬ್ರಿಟೀಷರ ವಿರುದ್ದ ಅಂದಿನ ದಿನಮಾನದಲ್ಲಿಯೇ ಅತ್ಯಾಧ್ವನಿಕ ಯುದ್ಧಾಸ್ರಗಳನ್ನ ಬಳಸಿ ಯುದ್ಧ ಮಾಡುವ ಮೂಲಕ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪುಸುಲ್ತಾನರ ಸಾಧನೆ ಮಹತ್ವದ್ದಾಗಿದ್ದು ಇಂದು ಅವರ ಜಯಂತಿ ಆಚರಣೆ ಗೊಂದಲಕ್ಕೆ ಎಡೆಮಾಡಿರುವುದು ವಿಷಾಧನೀಯ ಎಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೂ ಇಂದು ಶುಭದಿನವಾಗಿದ್ದು ಎಲ್ಲರೂ ರೋಗದಿಂದ ಮುಕ್ತರಾಗಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

       ಕಾರ್ಯದರ್ಶಿ ಅನ್ಸರ್‍ಪಾಷಾ ಅವರು ಮಾತನಾಡಿ ರಾಜ್ಯವನ್ನಾಳಿದ ಎಲ್ಲಾ ರಾಜರುಗಳಂತೆ ಟಿಪ್ಪುಸುಲ್ತಾನ್ ಅವರು ವಿಶೇಷ ರೀತಿಯಲ್ಲಿ ತಮ್ಮ ಆಡಳಿತವನ್ನು ಮಾಡುವ ಮೂಲಕ ಹೆಸರುವಾಸಿಯಾಗಿದ್ದರು. ಮೊದಲು ಬ್ರಿಟೀಷರ ವಿರುದ್ದ ರಾಜ್ಯದಲ್ಲಿ ಹೋರಾಟ ಮಾಡುವ ಮುಲಕ ಸ್ವಾತಂತ್ರ್ಯಕ್ಕೆ ಚಾಲನೆ ನೀಡಿದರು. ಸರ್ಕಾರ ಇಂದು ಜಯಂತಿಯನ್ನು ಆಚರಿಸುವಂತೆ ಘೋಷಿಸಿದೆ ಆದರೆ ಇನ್ನೂ ಅಡಚಣೆಗಳು ಇವೆ ಎಂದ ಅವರು ಅಂಧ ಮಕ್ಕಳಾದರೂ ನೀವು ತುಂಬಾ ಜ್ಞಾನವಂತರು. ಮುಂದಿನ ಬಾವಿ ಪ್ರಜೆಗಳು.

           ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಇಂತಹ ಗೊಂದಲಗಳನ್ನು ಸೃಷ್ಠಿಸುತ್ತ ಜಾತಿ ಧರ್ಮಗಳ ಮಧ್ಯೆ ಒಡಕು ತರುತ್ತಿರುವುದು ಖಂಡನೀಯ. ಈ ದೇಶದಲ್ಲಿ ರಾಜ್ಯದಲ್ಲಿ ಎಲ್ಲಾ ರಾಜ ಪ್ರಭುಗಳು ಆಳ್ವಿಕೆ ಮಾಡಿದಂತೆಯೇ ಟಿಪ್ಪು ಸುಲ್ತಾನರು ಒಬ್ಬರು. ಆದರೆ ಇಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಮಕ್ಕಳಾದ ನೀವುಗಳು ಇತಿಹಾಸವನ್ನ ಸರಿಯಾಗಿ ಅಧ್ಯಯನ ಮಾಡುವ ಮೂಲಕ ಇಂತಹ ಗೊಂದಲವನ್ನ ಹೋಗಲಾಡಿಸಬೇಕು. ದೇಶಕ್ಕೆ ರಾಜ್ಯಕ್ಕೆ ಕೊಡುಗೆ ನೀಡಿದ ಯಾವುದೇ ಧರ್ಮದ ವ್ಯಕ್ತಿಗಳನ್ನ ಗೌರವಿಸುವಂತಾಗಬೇಕು ಬರೀ ಇಂತಹ ಗೊಂಲಗಳು ಮುಂದುವರೆದರೆ ಸಮಾಜದ ಸ್ವಾಸ್ತ್ಯಕ್ಕೆ ಧಕ್ಕೆಯುಂಟಾಗುತ್ತದೆ ಎಂದು ವಿಷಾಧವ್ಯಕ್ತಪಡಿಸಿದರು.

            ಈ ಸಂದರ್ಭದಲ್ಲಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶಬಾಬು, ಡಾ. ಸತೀಶ್‍ಬಾಬು, ಹಿರಿಯ ಪಾರ್ಮಸಿಸ್ಟ್ ಸಣ್ಣವೀರಪ್ಪ, ಮಜ್ಲಿಸೆ ಶೋರ ಸಮಿತಿ ಸದಸ್ಯ ಅರ್ಷದ್, ವಕೀಲ ಪರ್ವೀಜ್, ದಸ್ತಗೀರ್, ರಫೀ, ಮುಶ್ತಾಕ್, ತಾಜೀರ್, ಉಮರ್ ಇನ್ನೂ ಮೊದಲಾದವರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link