ಅಪರಾಧ ತಡೆಗೆ ಕಾನೂನಿನ ಅರಿವು ಅಗತ್ಯ : ಕೆ.ಎಸ್.ಆಶಾ

ಶಿರಾ:

     ಸಾಕ್ಷರತೆಯಲ್ಲಿ ನಮ್ಮ ದೇಶ ಶೇ.100ರ ಗುರಿ ಮುಟ್ಟ ಬೇಕು ಎಂಬ ಉತ್ಸುಕದ ಜೊತೆಗೆ ಕಾನೂನಿನ ಸಾಕ್ಷರತೆಯಲ್ಲೂ ಅಷ್ಟೇ ಪ್ರಮಾಣದಲ್ಲಿ ಅರಿವು ಮೂಡಿದಾಗ ಅಪರಾಧ ಪ್ರಕರಣ ತಡೆಗಟ್ಟಲು ಸಾಧ್ಯವಾಗಲಿದೆ ಎಂದು ಸಿವಿಲ್ ಕೋರ್ಟ್ ಪ್ರಧಾನ ನ್ಯಾಯಾಧೀಶೆ ಕೆ.ಎಸ್.ಆಶಾ ಹೇಳಿದರು.

     ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜ್‍ನಲ್ಲಿ ಶನಿವಾರ ಕಾನೂನು ಸೇವಾ ಸಮಿತಿ, ವಕೀಲರ ಸಂಘ, ನಾದೂರು ಗ್ರಾಮ ಪಂಚಾಯತಿ, ಪ್ರೌಢಶಾಲೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಕಾನೂನು ಅರಿವು-ನೆರವು, ಸಂಚಾರಿ ಜನತಾ ನ್ಯಾಯಾಲಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

     ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಮಕ್ಕಳ ಮೇಲೆ ಆತ್ಯಾಚಾರದಂತ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಷ್ಟು ಕಾನೂನು ಬಲಿಷ್ಠವಾಗಿದ್ದು, ಅನ್ಯಾಯಕ್ಕೆ ಒಳಪಟ್ಟ ಮಕ್ಕಳಿಗೆ ಕಾನೂನಿನ ಸೇವೆ ಅವಶ್ಯಕತೆ ಇದ್ದರೆ ಉಚಿತವಾಗಿ ಕಾನೂನು ಪ್ರಾಧಿಕಾರ ಉಚಿತವಾಗಿ ನೀಡಲಿದೆ.

     ಮೋಟಾರು ಕಾಯ್ದೆ ಕೊಡ ಬಲಿಷ್ಟವಾಗಿದ್ದು ನಿಯಮ ಮೀರಿ ವಾಹನ ಚಾಲನೆ ಮಾಡಿದರೆ ಭಾರಿ ದಂಡ ಕಟ್ಟುವಂತ ಸ್ಥಿತಿ ನಿರ್ಮಾಣವಾಗಲಿದ್ದು, ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಿದರೆ ಅಪಘಾತ್ವಾದ ಸಂಧರ್ಭದಲ್ಲಿ ಅಗುವಂತ ಜೀವಹಾನಿ ತಪ್ಪಲಿದೆ. ಕಾನೂನಿನಲ್ಲಿ ಬಡವ ಶ್ರೀಮಂತ ಎಂಬ ತಾರತಮ್ಯವಿಲ್ಲ ಕಾನೂನು ಕಟ್ಟಲೆ ಮೀರಿದರೆ ಶಿಕ್ಷೆಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಎಂದರು.

    ಪಿಎಸ್‍ಐ ವಿ.ನಿರ್ಮಲ ಮಾತನಾಡಿ ಮನುಷ್ಯನ ದುರಾಸೆ ಅನಗತ್ಯ ವ್ಯಾಜ್ಯಗಳಿಗೆ ಕಾರಣವಾಗುತ್ತಿದ್ದು ಸಣ್ಣ ಪುಟ್ಟ ತಕರಾರು ವ್ಯಾಜ್ಯಗಳಿಗೆ ತಮ್ಮ ಹಳ್ಳಿಗಳಲ್ಲಿ ಪರಸ್ವರ ಪ್ರೀತಿ ವಿಶ್ವಾಸದಿಂದ ಹತ್ತಾರು ಜನರ ಸಮ್ಮುಖದಲ್ಲಿ ಬಗೆಹರಿಸಿ ಕೊಂಡರೆ ಸಮಸ್ಯೆ ಇತ್ಯಾರ್ಥವಾಗಿ ಸೇಹ ಸೌರ್ಹಾದತೆಯ ಬದುಕು ನಿಮ್ಮದಾಗಲಿದೆ ಎಂದರು.

     ಉಪನ್ಯಾಸ ನೀಡಿ ಮಾತನಾಡಿದ ವಕೀಲ ಹೆಚ್.ನಾಗರಾಜು ಡಾ. ಎಪಿಜೆ ಅಬ್ದುಲ್ ಕಲಾಂರವರು ವಿದ್ಯಾರ್ಥಿಗಳ ಜೊತೆ ಹೆಚ್ಚು ಸಂವಾದ ನಡೆಸುತ್ತಿದ್ದರು ಕಾರಣ ಒಬ್ಬ ವಿದ್ಯಾರ್ಥಿಗೆ ಕಾನೂನಿನ ಅರಿವು ಮೂಡಿದರೆ ಸಾವಿರಾರು ಜನರಿಗೆ ಸರಿ ದಾರಿಯಲ್ಲಿ ಮುನ್ನಡಸ ಬಲ್ಲ ಎಂಬ ಬಲವಾದ ನಂಬಿಕೆ, ಈ ನಿಟ್ಟಿನಲ್ಲಿ ತಮ್ಮ ಪೋಷಕರಿಗೆ ಕಾನೂನಿ ಅರಿವು-ಜಾಗೃತಿ ಮೂಡಿಸುವ ಜವಾಬ್ದಾರಿ ಪ್ರತಿಯೊಬ್ಬ ವಿದ್ಯಾರ್ಥಿ ಕರ್ತವ್ಯ. ಸಿವಿಲ್ ಪ್ರಕರಣಗಳಲ್ಲಿ ಪರಸ್ವರ ವಾದಿ ಪ್ರತಿವಾದಿಗಳು ಒಪ್ಪದರೆ ಕೇಸ್ ಜನತಾ ನ್ಯಾಯಾಲಯದಲ್ಲಿ ಇತ್ಯಾರ್ಥ ಪಡಿಸಿ ಕೊಳ್ಳ ಬಹುದಾಗಿದ್ದು ಇತ್ಯಾರ್ಥವಾದರೆ ಇಬ್ಬರಲ್ಲೂ ಸ್ನೇಹಮಯ ವಾತಾವರಣ ನಿರ್ಮಾಣವಾಗಲಿದೆ ಎಂದರು.

      ಸರ್ಕಾರಿ ಪದವಿ ಪೂರ್ವ ಕಾಲೇಜ್ ಪ್ರಾಂಶುಪಾಲೆ ವಿಜಯಲಕ್ಷ್ಮೀ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಜಗದೀಶ್, ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸಣ್ಣಕರೇಗೌಡ, ಮಾಜಿ ಅಧ್ಯಕ್ಷ ಭೂಪತಿಗೌಡ, ಉಪಪ್ರಾಂಶುಪಾಲೆ ರಾಜಮ್ಮ, ಪಿಡಿಓ ತಿಪ್ಪೇಸ್ವಾಮಿ, ಉಪನ್ಯಾಸಕ ಮೆಣಸಗಿ, ಲೆಕ್ಕ ಸಹಾಯಕ ನಾಗರಾಜು ಗ್ರಾಮಲೆಕ್ಕಾಧಿಕಾರಿ ದೀಪಾ, ವಕೀಲ ರಂಗನಾಥಪ್ಪ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link