ಶಿರಾ
ಕೃಷಿ ಪ್ರಧಾನ ಭಾರತದ ಅರ್ಥ ವ್ಯವಸ್ಥೆ ಸಫಲಗೊಳ್ಳಲು ವಿಜ್ಞಾನದ ಬಳಕೆ ಅನಿವಾರ್ಯ ಎಂದು ನಿವೃತ್ತ ಪ್ರಾಧ್ಯಾಪಕ ಹಾಗೂ ಕರ್ನಾಟಕ ವಿಜ್ಞಾನ ಪರಿಷತ್ನ ಡಾ. ಹೆಚ್.ಎಸ್.ನಿರಂಜನಾರಾಧ್ಯ ಹೇಳಿದರು.ನಗರದ ಸರ್ಕಾರಿ ಪ್ರ.ದ. ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ವಿಜ್ಞಾನ ವೇದಿಕೆಯ ಸಹಯೋಗದಲ್ಲಿ ಕೈಗೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಒಳಿತಿಗಾಗಿ ವಿಜ್ಞಾನದ ಪಾತ್ರ ಹಾಗೂ ಭವಿಷ್ಯದಲ್ಲಿ ಜೀವ ವಿಜ್ಞಾನ ಎಂಬ ವಿಷಯದ ಉಪನ್ಯಾಸದ ಬಗ್ಗೆ ಮಾತನಾಡಿದ ಅವರು, ಇಂದಿನ ಯುವ ಜನಾಂಗಕ್ಕಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ವೈಜ್ಞಾನಿಕ ಭಾವನೆಗಳು ಮೂಡಬೇಕಿದೆ. ವಿಜ್ಞಾನದ ನೂತನ ಆವಿಷ್ಕಾರಗಳು ಮಕ್ಕಳಿಗೆ ಅರ್ಥವಾಗಬೇಕಿದೆ ಎಂದು ಡಾ.ನಿರಂಜನಾರಾಧ್ಯ ತಿಳಿಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ಬಿ.ಎಂ.ಎಸ್. ಎಂಜಿನಿಯರಿಂಗ್ ಕಾಲೇಜಿನ ಡಾ.ದಾರುಕಾ ಪ್ರಸಾದ್ ನ್ಯಾನೊ ತಂತ್ರಜ್ಞಾನ ಕುರಿತು ಮಕ್ಕಳಿಗೆ ತಿಳಿವಳಿಕೆ ಮೂಡಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ತಿಮ್ಮನಹಳ್ಳಿ ವೇಣುಗೋಪಾಲ್ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಿಕೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ದೃಢ ಸಂಕಲ್ಪವನ್ನು ಮಾಡಬೇಕು ಎಂದರು.
ಐಕ್ಯುಎಸಿ ಕೋಆರ್ಡಿನೇಟರ್ ಡಾ.ರಂಗಪ್ಪ, ಶಾಮಸಾಬ ಮುಜಾವರ್, ಹರೀಶ್, ವೆಂಕಟರಮಣಪ್ಪ, ಮಂಜುನಾಥ್ ಮುಂತಾದವರು ಹಾಜರಿದ್ದರು. ಎಸ್.ಸತೀಶ್ಗೌಡ ಸ್ವಾಗತಿಸಿ, ಸಿದ್ಧರಾಮ ಚನಗೊಂಡ ವಂದಿಸಿ, ಭಾವನಾ ಹಾಗೂ ಪ್ರಿಯಾಂಕ ನಿರೂಪಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
