ದಾವಣಗೆರೆ:
ಕೊರೊನಾಸೋಂಕು ನಿಯಂತ್ರಣಕ್ರಮವಾಗಿ ಪ್ರಧಾನಿ ವಿಧಿಸಿರುವ ಲಾಕ್ಡೌನ್ಮೀರಿ, ಅನತ್ಯವಾಗಿ ರಸ್ತೆಗಳಲ್ಲಿ ಓಡಾಡುವವರನ್ನು ನಿಯಂತ್ರಿಸಲಿಕ್ಕಾಗಿಜಿಲ್ಲೆಯಲ್ಲಿ ಮಿಲಿಟರಿ ಪಡೆಯನ್ನು ನಿಯೋಜಿಸುವ ಸ್ಥಿತಿ ಬಂದೊದಗಿದೆಎಂದುಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ಸಚಿವರು ಹಾಗೂ ಜಿಲ್ಲಾಉಸ್ತುವಾರಿ ಸಚಿವರುಆದಕೆ.ಎಸ್.ಈಶ್ವರಪ್ಪತಿಳಿಸಿದರು.
ನಗರದ ಜಿಲ್ಲಾಡಳಿತ ಭವನದತುಂಗ ಭದ್ರ ಸಭಾಂಗಣದಲ್ಲಿಸೋಮವಾರಕೊರೊನಾ ವೈರಸ್ ಸೋಂಕು ನಿಯಂತ್ರಣಕುರಿತು ಕೈಗೊಳ್ಳಲಾಗಿರುವ ಮತ್ತು ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲು ಏರ್ಪಡಿಸಿದ್ದ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದಅವರು, ಕೊರೊನಾ ಸೋಂಕಿನ ಭೀತಿಯಿಂದಾಗಿ ಶೇ.90 ರಷ್ಟುಜನ ಮನೆಯಲ್ಲಿದ್ದರೆ, ಶೇ.10ರಷ್ಟು ಜನಅನಾವಶ್ಯಕವಾಗಿರಸ್ತೆಯಲ್ಲಿಓಡಾಡಿಕೊಂಡಿದ್ದಾರೆ. ಹೀಗಾಗಿ ಇಂತವರನ್ನು ನಿಯಂತ್ರಿಸಲಿಕ್ಕಾಗಿ ಮಿಲಿಟರಿ ಪಡೆ ನಿಯೋಜಿಸಲಾಗುವುದು.
ಆಗ ಮನೆಯಿಂದ ವಿನಾಕಾರಣ ಹೊರ ಬಂದರೆಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆಎಂದು ಎಚ್ಚರಿಸಿದರು.
ಜನರುಅನಗತ್ಯವಾಗಿ ಹೊರಗೆಓಡಾಡದೇಕೊರೊನಾ ಸೋಂಕು ಹರಡದಂತೆ ಸಹಕರಿಸಬೇಕು. ಹಾಗೂ ಜಿಲ್ಲಾಡಳಿತ ಜನರಿಗೆಎಲ್ಲಅಗತ್ಯ ವಸ್ತುಗಳು ಲಭ್ಯವಾಗುವಂತೆಕ್ರಮ ಕೈಗೊಳ್ಳಬೇಕು ಎಂದರು.
ತುರ್ತುಚಿಕಿತ್ಸೆಗೆ ಪರ್ಯಾಯ ವ್ಯವಸ್ಥೆ:
ಜಿಲ್ಲಾ ಚಿಗಟೇರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್-19 ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಈ ಆಸ್ಪತ್ರೆಯಲ್ಲಿ 70 ಬೆಡ್ಗಳನ್ನು ಕೋವಿಡ್-19ಕ್ಕಾಗಿ ಮೀಸಲಿರಿಸಿದ್ದು, ಬೆಡ್ಗಳ ಸಂಖ್ಯೆಯನ್ನುಹೆಚ್ಚಿಸಬೇಕೆಂದು ಸೂಚಿಸಿದ ಸಚಿವರು, ಕೊರೊನಾ ಹೊರತುಪಡಿಸಿ ಇನ್ನಿತರೆಆರೋಗ್ಯ ಸಮಸ್ಯೆಗಳು, ತುರ್ತುಚಿಕಿತ್ಸೆಗಾಗಿ ನಗರದಇತರೆಎರಡುದೊಡ್ಡ ಆಸ್ಪತ್ರೆಗಳಾದ ಬಾಪೂಜಿ ಮತ್ತುಎಸ್ಎಸ್ ಆಸ್ಪತ್ರೆಗಳಲ್ಲಿ ಸಿದ್ದವಿರಿಸಿಕೊಳ್ಳಬೇಕು. ಹಾಗೂ ಆಯುಷ್ಮಾನ್ ಭಾರತ್ಆರೋಗ್ಯಕರ್ನಾಟಕಯೋಜನೆಯಡಿ ಬರುವ ರೋಗಿಗಳಿಗೆ ಈ ಆಸ್ಪತ್ರೆಗಳು ಸಂಪೂರ್ಣವಾಗಿಉಚಿತವಾಗಿಚಿಕಿತ್ಸೆ ನೀಡಬೇಕೆಂದು ಸೂಚನೆ ನೀಡಿದರು.
ಶಂಕಿತರಿಗೆ ಲಾಡ್ಜ್ನಲ್ಲಿ ನಿಗಾ:
ಪ್ರಸ್ತುತ ಮನೆಯಲ್ಲಿ ಪ್ರತ್ಯೇಕವಾಗಿ ಅವಲೋಕನ ಅವಧಿಯಲ್ಲಿಇರುವವರು ನಗರದಲ್ಲಿಓಡಾಡುತ್ತಿದ್ದಾರೆಂದುದೂರಿದ್ದು, ಇವರಿಂದ ಅನ್ಯರಿಗೆ ತೊಂದರೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಲಾಡ್ಜ್ಗಳನ್ನು ಗುರುತಿಸಿ, ಅಟ್ಯಾಚ್ಡ್ ಬಾತ್ರೂಂ ಇರುವ ಒಂದೊಂದು ರೂಮಿನಲ್ಲಿ ಒಬ್ಬೊಬ್ಬರನ್ನು ಪ್ರತ್ಯೇಕವಾಗಿ ಇರಿಸುವ ಬಗ್ಗೆ ಮಹಾನಗರಪಾಲಿಕೆ ಮಹಾಪೌರರು ವ್ಯವಸ್ಥೆಮಾಡಬೇಕು ಎಂದರು.
ಖಾಸಗಿ ಲ್ಯಾಬ್ಗೆ ಶೀಘ್ರ ಅನುಮತಿ:
ಪ್ರಸ್ತುತಕೊರೊನಾ ವರದಿ ಬರುವುದುಎರಡರಿಂದ ಮೂರು ದಿನಗಳ ಅವಧಿ ಹಿಡಿಯುತ್ತಿದ್ದು, ಗಂಟಲುದ್ರವ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿದ ವ್ಯಕ್ತಿಯನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿದಾವಣಗೆರೆಯಲ್ಲೇಕೊರೊನಾ ಪರೀಕ್ಷೆಗೆ ಅವಕಾಶ ನೀಡಿದರೆ ಅನುಕೂಲವಾಗುತ್ತದೆ. ಹಾಗೂ ಸುತ್ತಮುತ್ತಲ ಮೂರು ನಾಲ್ಕು ಜಿಲ್ಲೆಗಳಿಗೆ ಅನುಕೂಲವಾಗುತ್ತದೆಎಂದು ಕಳೆದ ಸಭೆಯಲ್ಲೇ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ನಗರದಎಸ್ಎಸ್ ಹೈಟೆಕ್ಆಸ್ಪತ್ರೆಯಲ್ಲಿ ಸುಸಜ್ಜಿತ ಪಿಸಿಆರ್ ಲ್ಯಾಬ್ಇದ್ದು, ಶೀಘ್ರದಲ್ಲೇ ಸರ್ಕಾರಇಲ್ಲಿಕಿಟ್ಸ್ ಖರೀದಿಸಿ ಪರೀಕ್ಷೆ ನಡೆಸಲುಅನುಮತಿ ನೀಡಲಿದೆಎಂದರು.
ಬಿಸಿಯೂಟ ಗೊಂದಲಬೇಡ:
ಶಾಲಾ ಮಕ್ಕಳಿಗೆ ಬಿಸಿಯೂಟವನ್ನು ಅವರವರ ಮನೆಗಳಿಗೆ ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರು ತಲುಪಿಸಬೇಕೆಂಬ ಸರ್ಕಾರದಆದೇಶ ನೋಡಿಎಲ್ಲ ಶಿಕ್ಷಕರು ಗಾಬರಿಯಾಗಿದ್ದಾರೆ.ಕೊರೊನಾ ಹಿನ್ನೆಲೆ ಬೇರೆ ಬೇರೆಕಡೆ ಮನೆಗಳಿರುವ ಶಿಕ್ಷಕರು ತಾವು ಕೆಲಸ ಮಾಡುವ ಸ್ಥಳಕ್ಕೆ ಬಂದು ಹೇಗೆ ವಿದ್ಯಾರ್ಥಿಗಳ ಮನೆಗೆ ಬಿಸಿಯೂಟದ ಪಡಿತರ ನೀಡುವುದೆಂಬ ಗೊಂದಲವಿದ್ದು, ಡಿಡಿಪಿಐ ಹಾಗೂ ಸಿಇಓ ಅವರುಜೊತೆಗೂಡಿ ಶಿಕ್ಷಕರಿಗೂ ತೊಂದರೆಯಾಗದಂತೆ ವ್ಯವಸ್ಥೆ ಮಾಡಲುಕ್ರಮ ಕೈಗೊಳ್ಳಬೇಕು.ಎಸ್ಡಿಎಂಸಿ ಯವರು ಸಹಕರಿಬೇಕುಎಂದರು.
ತರಕಾರಿ ಮತ್ತು ಹಣ್ಣು ಕೊಳ್ಳಲು ನಗರದಲ್ಲಿ ನೂಕು ನುಗ್ಗಲು ಆಗದಂತೆಕ್ರಮ ವಹಿಸಬೇಕು. ಜನರುಆರು ತಿಂಗಳಿಗೆ ಆಗುವಷ್ಟು ಮಾತ್ರೆ, ಔಷಧಿಗಳನ್ನು ಕೊಂಡುಕೊಳ್ಳುವ ಮೂಲಕ ಮೆಡಿಕಲ್ ಶಾಪ್ ಮತ್ತು ಡ್ರಗ್ಹೌಸ್ಗಳಲ್ಲಿ ತಾತ್ಕಾಲಿಕ ಸ್ಟಾಕ್ಕೊರತೆಯಾಗಿದ್ದು, ಹೀಗಾಗದಂತೆಕ್ರಮ ವಹಿಸಬೇಕು ಎಂದು ಸೂಚಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ತರಕಾರಿ ಕೊಳ್ಳಲು ನೂಕು ನುಗ್ಗಲು ಆಗದಂತೆ ಪಾಲಿಕೆ ಮಹಾಪೌರರ ಸಲಹೆಯಂತೆ ತಳ್ಳುಗಾಡಿಗಳ ವ್ಯವಸ್ಥೆ ಮಾಡಿದ್ದಾರೆ.24*7 ದಿನಸಿ ಅಂಗಡಿಗಳು ತೆರೆಯಲುಅನುಮತಿ ನೀಡಲಾಗಿದೆ.ವೇರ್ಹೌಸ್ ಮತ್ತುಡ್ರಗ್ಸ್ ಸ್ಟಾಕಿಸ್ಟ್ಗಳ ಸಭೆ ನಡೆಸಿ ಔಷಧಿ ವಿತರಣೆ ಬಗ್ಗೆ ಸೂಚನೆಗಳನ್ನು ನೀಡಲಾಗಿದೆಎಂದರು.
ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಕೊರೊನಾ ಹಿನ್ನೆಲೆ ಹಳ್ಳಿಗಳಲ್ಲಿ ಮದ್ಯವನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆಜೊತೆಗೆ ಕೆಲವೆಡೆಜೂಜಾಟದ ಹಾವಳಿ ಇದೆ.ಇದನ್ನುಕಟ್ಟುನಿಟ್ಟಾಗಿಕಡಿವಾಣ ಹಾಕಬೇಕು.ಇಲ್ಲಿನ ಖಾಸಗಿ ಆಸ್ಪತ್ರೆಗಳು ಬಂದ್ಆಗಿದ್ದು, ಆಸ್ಪತ್ರೆಯವರ ಮನವೊಲಿಸಿ ಆಸ್ಪತ್ರೆಗಳನ್ನು ತೆರೆಸಬೇಕಿದೆ.ಹೊನ್ನಾಳಿ ಜಿಲ್ಲೆಗೆಒಟ್ಟು 4695 ಜನರು ಹೊರಗಿನಿಂದ ಬಂದಿದ್ದು, ಇವರತಪಾಸಣೆಗೆಅಗತ್ಯಕ್ರಮ ಕೈಗೊಳ್ಳಬೇಕಿದೆ ಎಂದರು.
ವಿಧಾನ ಪರಿಷತ್ ಶಾಸಕರಾದಅಬ್ದುಲ್ಜಬ್ಬಾರ್ ಮಾತನಾಡಿ, ನಗರದ ಹಿಂದುಳಿದ ಪ್ರದೇಶಗಳಾದ ಆಜಾದ್ನಗರ ಸೇರಿದಂತೆ ಸ್ಲಂಗಳಲ್ಲಿ ಕೊರೊನಾಅರಿವುಇಲ್ಲ. ಇಲ್ಲಿನಜನರಿಗೆತಪಾಸಣೆ ಮಾಡಿಸಬೇಕು. ಹಾಗೂ ಬಿಪಿ, ಶುಗರ್ ಮಾತ್ರೆಅನೇಕರಿಗೆಅತ್ಯಗತ್ಯವಾಗಿದ್ದು, ಇದನ್ನುತಲುಪಿಸುವ ಕೆಲಸ ಆಗಬೇಕೆಂದರು.ಪಾಲಿಕೆ ಮಹಾಪೌರಬಿ.ಜಿ.ಅಜಯಕುಮಾರ್ ಮಾತನಾಡಿ, ನಗರದಲ್ಲಿ ಸುಮಾರು 50 ಸ್ಲಂಗಳಿದ್ದು ಇಲ್ಲಿರುವವರಿಗೆಕೊರೊನಾಕುರಿತುಅರಿವುಇಲ್ಲ. ಆದ್ದರಿಂದ ವೈದ್ಯರತಂಡ ರಚಿಸಿ ಹಂತ ಹಂತವಾಗಿಇವರಆರೋಗ್ಯತಪಾಸಣೆ ಮಾಡುವ ವ್ಯವಸ್ಥೆಆಗಬೇಕೆಂದರು.
ಜಗಳೂರುಕ್ಷೇತ್ರದ ಶಾಸಕ ಎಸ್.ವಿ ರಾಮಚಂದ್ರಪ್ಪ ಮಾತನಾಡಿ, ಜಗಳೂರು ಕ್ಷೇತ್ರದಲ್ಲಿಕುಡಿಯುವ ನೀರಿಗೆ ಬಾರಿ ಸಮಸ್ಯೆಯುಂಟಾಗಿದ್ದು, ನೀರಿಗಾಗಿಜನಅಲೆದಾಡುತ್ತಿದ್ದಾರೆ. ತಾಲ್ಲೂಕು ಪಂಚಾಯತ್ ವತಿಯಿಂದ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಬೇಕು. ಮತ್ತುಜನರಿಗೆ ಮಾಸ್ಕ್ ಸಿಗುತ್ತಿಲ್ಲ. ಮಾಸ್ಕ್ ವಿತರಣೆ ಮಾಡಬೇಕುಎಂದರು.
ಚನ್ನಗಿರಿಕ್ಷೇತ್ರದ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಪುರಸಭೆ, ನಗರಸಭೆಗಳಲ್ಲಿ ಔಷಧಿ ಸಿಂಪಡಣೆ ಕಾರ್ಯವಾಗುತ್ತಿದೆ.ಗ್ರಾಮ ಮಟ್ಟದಲ್ಲೂ 14ನೇ ಹಣಕಾಸುಅಥವಾಇತರೆಅನುದಾನದಲ್ಲಿಔಷಧಿ ಸಿಂಪಡಣೆ ಕಾರ್ಯ ಮಾಡಿಸಬೇಕುಎಂದಾಗ ಸಚಿವರು ಪ್ರತಿಕ್ರಿಯಿಸಿ, ಗ್ರಾ.ಪಂ ಗಳಿಗೆ ರೂ.15 ಕೋಟಿ ಬಿಡುಗಡೆ ಮಾಡಲಾಗಿದ್ದು, ಟಾಸ್ಕ್ಫೋರ್ಸ್ ಪ್ರಕಾರ ಕಾರ್ಯಗಳನ್ನು ಕೈಗೊಳ್ಳಬಹುದುಎಂದಅವರುಅಗತ್ಯವಿರುವ ಮಾಸ್ಕ್ಗಳನ್ನು ದರ್ಜಿಅಥವಾ ಸಂಘ ಸಂಸ್ಥೆಗಳ ಮೂಲಕ ತಯಾರಿಸಿಕೊಡುವಂತೆ ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿಡಾ.ಜಿ.ಡಿರಾಘವನ್ ಮಾತನಾಡಿ, ಜಿಲ್ಲೆಯಲ್ಲಿ ಮಾ.29 ರವರೆಗೆ 345 ಜನರು ವಿದೇಶ ಪ್ರಯಾಣ ಮುಗಿಸಿ ಬಂದಿದ್ದು ಅವಲೋಕನೆಗೆ ಪಟ್ಟಿ ಮಾಡಲಾಗಿದೆ.ಇವರ ಪೈಕಿ 01 28 ದಿನಗಳ ಅವಲೋಕನ ಅವಧಿ ಪೂರೈಸಿದ್ದು, 243 ಜನರು 14 ದಿನಗಳ ಅವಲೋಕನ ಅವಧಿಯನ್ನು ಮುಗಿಸಿದ್ದಾರೆ.102 ಜನರನ್ನು ಮನೆಯಲ್ಲೇ ಪ್ರತ್ಯೇಕವಾಗಿಇರಿಸಲಾಗಿದೆ., 26 ಜನರನ್ನು ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿಇರಿಸಲಾಗಿದೆ.23 ಜನರನ್ನುಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.41 ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು 32 ನೆಗೆಟಿವ್ ಫಲಿತಾಂಶ ಬಂದಿದೆ ಮತ್ತು 03 ಖಚಿತ ಪಟ್ಟ ಫಲಿತಾಂಶ ಬಂದಿದೆಎಂದರು ಮಾಹಿತಿ ನೀಡಿದರು.
ಕೊರೊನಾ ಪಾಸಿಟಿವ್ ಪ್ರಕರಗಳಿರುವ ದಾವಣಗೆರೆ ನಗರದ ನಿಜಲಿಂಗಪ್ಪ ಬಡಾವಣೆ ಮತ್ತುಜಿಎಂಐಟಿ ಸುತ್ತಮುತ್ತ 5 ಕಿ.ಮೀ ವ್ಯಾಪ್ತಿ ಪ್ರದೇಶವನ್ನು ಬಫರ್ಜೋನ್ಎಂದು ಪರಿಗಣಿಸಿ ಈ ಪ್ರದೇಶದಲ್ಲಿಔಷಧಿ ಸಿಂಪಡಣೆ ಮಾಡಿ, ಸರ್ವೇಕ್ಷಣೆಗೆ ಒಳಪಡಿಸಲಾಗಿದೆ. 3 ಕಿ.ಮೀ ವ್ಯಾಪ್ತಿಯಕಂಟೈನ್ಮೆಂಟ್ಜೋನ್ ಒಳಗೆ ಹೌಸ್ಟು ಹೌಸ್ ಸರ್ವೇ ಮಾಡಿ, ನಮ್ಮತಂಡದ ಸದಸ್ಯರು ಫ್ಲೂಟೆಸ್ಟ್ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದರು.
ಸಭೆಯಲ್ಲಿ ಶಾಸಕರಾದಎಸ್.ಎ.ರವೀಂದ್ರನಾಥ್, ಪಾಲಿಕೆ ಉಪ ಮಹಾಪೌರರಾದ ಸೌಮ್ಯ, ಎಸ್.ಪಿ.ಹನುಮಂತರಾಯ, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಡಿಹೆಚ್ಓಡಾ.ರಾಘವೇಂದ್ರ ಸ್ವಾಮಿ, ಡಿಎಸ್ಡಾ.ನಾಗರಾಜ್, ಎಸ್ಎಸ್ಐಎಂಸ್ ನ ವೈದ್ಯಕೀಯಅಧೀಕ್ಷಕ ಕಾಳಪ್ಪನವರ್, ಪ್ರಾಂಶುಪಾಲ ಪ್ರಸಾದ್, ಬಾಪೂಜಿಆಸ್ಪತ್ರೆಯಡಾ.ಕುಮಾರ್ ಸೇರಿದಂತಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
