ತಂಬಾಕು ನಿಯಂತ್ರಣ ಜಾಗೃತಿ ಹಾಗೂ ಅಪರಾಧ ತಡೆ ಮಾಸಾಚರಣೆಗೆ ಚಾಲನೆ

ದಾವಣಗೆರೆ

       ತಂಬಾಕು ನಿಯಂತ್ರಣ ಜಾಗೃತಿ ಹಾಗೂ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಇಂದು ಚಾಲನೆ ನೀಡಿದರು.

         ನಗರದ ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಜಾಗೃತಿ ಭಿತ್ತಿಪತ್ರಗಳನ್ನು ಆಟೋಗಳಿಗೆ ಅಂಟಿಸುವ ಮೂಲಕ ಉದ್ಘಾಟಿಸಿದರು.

        ತಂಬಾಕು, ಗುಟ್ಕಾ, ಜರ್ದಾ ಮುಂತಾದ ತಂಬಾಕು ಉತ್ಪನ್ನಗಳ ಸೇವನೆಯಿಂದ ಪ್ರತಿ ವರ್ಷ 10 ಲಕ್ಷ ಜನ ಸಾವನ್ನಪ್ಪುತ್ತಿರುವುದು ಕಂಡು ಬಂದಿದೆ. ಹಾಗೆಯೇ 8 ಸೆಕೆಂಡುಗಳಿಗೊಮ್ಮೆ ಭಾರತ ದೇಶದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದರು.

           ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ನಡೆಸಿದ ಗ್ಲೋಬಲ್ ಅಡಲ್ಟ್ ಟೋಬ್ಯಾಕೋ ಸರ್ವೆ 2010ರ ಪ್ರಕಾರ, ಕರ್ನಾಟಕದಲ್ಲಿ ಶೇ.28ರಷ್ಟು ಜನರು ತಂಬಾಕನ್ನು ಬಳಕೆ ಮಾಡುತ್ತಿದ್ದು, ಇದರಿಂದ ಕ್ಯಾನ್ಸರ್ ಹಾಗೂ ಇತರೆ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಒಳಗಾಗಿ ಜನರು ಸಾವನ್ನಪುತ್ತಿದ್ದಾರೆ. ಹಾಗೆಯೇ ಪರೋಕ್ಷ ಧೂಮಪಾನದಿಂದಾಗಿ ಶೇ.50 ರಷ್ಟು ತೊಂದರೆಗೆ ಒಳಗಾಗುತ್ತಿದ್ದಾರೆ.

         ತಂಬಾಕು ಸೇವನೆಯಿಂದ ಬರುವ ಪ್ರಮುಖವಾಗಿ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಬಲಹೀನತೆ, ಹೊಟ್ಟೆಯಲ್ಲಿ ಹುಣ್ಣು/ಅಲ್ಸರ್, ಹೃದಯ ಸಂಬಂಧಿ ಕಾಯಿಲೆಗಳು, ಹಲ್ಲುಗಳ ಹುಳುಕು, ದೃಷ್ಠಿ ಮಾಂದ್ಯತೆ, ಕೂದಲು ಉದುರುವಿಕೆ, ರಕ್ತಹೀನ ಬೆರಳುಗಳು, ವಿಕೃತ ವೀರ್ಯಾಣು, ಗ್ಯಾಂಗ್ರೀನ್ ಹಾಗೂ ಇತರೆ ಕಾಯಿಲೆಗಳು ಬರುತ್ತವೆ ಆದ್ದರಿಂದ. ತಂಬಾಕಿನ ನಿಯಂತ್ರಣಕ್ಕಾಗಿ ಭಾರತ ಸರ್ಕಾರ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003(ಕೊಟ್ಪಾ) ಜಾರಿ ಮಾಡಿ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಿದೆ ಎಂದರು.

         ನಗರ ಠಾಣೆಯ ಪಿ.ಎಸ್.ಐ ವೀರಬಸಪ್ಪ ಕಸಲಾಪುರ ಅಪರಾಧ ತಡೆ ಮಾಸಾಚರಣೆ ಕುರಿತು ಮಾತನಾಡಿ, ಅಪರಾಧ ತಡೆ ಮಾಸಾಚರಣೆ ಅಂಗವಾಗಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಸರಗಳ್ಳತನ, ಎ.ಟಿ.ಎಂ ಬಳಕೆದಾರರಿಗೆ ಮಾಹಿತಿ, ಸಂಚಾರ ನಿಯಮಗಳು ಮುಂತಾದ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

         ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ, ಡಾ.ಗಂಗಾಧರ್, ಸಿಪಿಐ ಆನಂದ್, ರಾಜ್ಯ ತಂಬಾಕು ನಿಯಂತ್ರಣ ತಂಡದ ವಿಭಾಗೀಯ ಸಂಯೋಜಕ ಮಹಾಂತೇಶ್ ಉಳ್ಳಾಗಡ್ಡಿ, ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ, ಸಮಾಜ ಕಾರ್ಯಕರ್ತ ದೇವರಾಜ್ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link