ತುಮಕೂರು
ಇಂದು ತುಮಕೂರಿನ ಉಪ್ಪಾರಹಳ್ಳಿ-24ನೇ ವಾರ್ಡ ಬಿಜೆಪಿ ಕಾರ್ಯಕರ್ತರಿಂದ ಮಹರ್ಷಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ‘ಸಸಿ ನೆಡುವ ಹಾಗು ಸಸಿ ರಕ್ಷಕ(ಟ್ರೀ ಗಾರ್ಡ)’ ಗಳನ್ನು ಅಳವಡಿಸುವ ಕಾರ್ಯಕ್ರಮ ನೆಡೆಯಿತು.
ಕಾರ್ಯಕ್ರಮಕ್ಕೆ ಜಿ.ಪಂ. ಸದಸ್ಯರು ಹಾಗು ಎಸ್.ಟಿ ಮೋರ್ಚ ಜಿಲ್ಲಾಧ್ಯಕ್ಷರಾದ ಶ್ರೀ ರಾಮಾಂಜಿನಪ್ಪ ಆಗಮಿಸಿ ಪರಿಸರ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ವಾರ್ಡಿನ ಕಾರ್ಯಕರ್ತರ ಕಾರ್ಯ ಶ್ಲಾಘನೀಯ ಎಂದರು. ರಾಜ್ಯ ಯುವ ಮೋರ್ಚ ಕಾರ್ಯಕಾರಿಣಿ ಸದಸ್ಯ
ಓಂಕಾರ್ ಮಾತನಾಡಿ ಪಾಲಿಕೆ ಚುನಾವಣೆಯ ನಂತರ ವಾರ್ಡನಲ್ಲಿ ಪಕ್ಷದ ಯುವ ಉತ್ಸಾಹಿ ಕಾರ್ಯಕರ್ತರು ಪಾರ್ಕ್, ರಸ್ತೆಗಳ ಸ್ವಚ್ಛತೆ, ಸಸಿ ನೆಟ್ಟು ಫೋಷಿಸುವಂತಹ ಅನೇಕ ಸೇವಾ ಕಾರ್ಯಗಳನ್ನು ನೆಡೆಸುತ್ತಿದ್ದಾರೆ, ಈ ಸೇವಾ ಕಾರ್ಯಗಳು ನಿರಂತರವಾಗಿ ನೆಡೆಯಲಿದೆ
ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅನೇಕ ವರ್ಷಗಳಿಂದ ಸ್ವಚ್ಛತೆ ಬಗ್ಗೆ ಸರ್ವಾಜನಿಕರಲ್ಲಿ ಜಾಗೃತಿ ಮೂಡಿಸುತ್ತಿರುವ ವಾರ್ಡಿನ ನಿವಾಸಿ ಸ್ವಚ್ಛ ಕಾಂತರಾಜುರವರನ್ನು ಸನ್ಮಾನಿಸಲಾಯಿತು.
ಬಿಜೆಪಿ ನಗರಾಧ್ಯಕ್ಷರಾದ ಅ.ಓ.ರಮೇಶ್,ಜನಸಂಘದ ಹಿರಿಯರಾದಬಸಪ್ಪ,ಅನಿಲ್,ಅಜಯ್,ಪ್ರೇಮಲತಾ,ರಾಮಕೃಷ್ಣ, ಕಮಲಾಕ್ಷಿ,ಲೋಕೇಶ್,ಲಕ್ಮ್ಮೀಕಾಂತ್,ಶಂಕರ್ಅನೇಕರು ಉಪಸ್ಧಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
