ಟೇಬಲ್ ದಿಕ್ಕು ಬದಲಾವಣೆಗೆ ರೇವಣ್ಣ ಸೂಚನೆ….!!

ಹುಬ್ಬಳ್ಳಿ:
   ವಾಸ್ತು ಹೆಚ್ಚಾಗಿ ನಂಬುವ ರೇವಣ್ಣ ಅವರು ನೂತನವಾಗಿ ನಿರ್ಮಿಸಿರುವಂತಹ ಅತಿಥಿಗೃಹದಲ್ಲಿರುವ ಸಭಾಭವನದ ಟೇಬಲ್‌ ದಿಕ್ಕನ್ನು  ಬದಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. 
    ಅತಿಥಿಗೃಹದ ಉದ್ಘಾಟನೆ ನೆರವೇರಿಸಿದ ನಂತರ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಮೀಟಿಂಗ್‌ ನಡೆಸಿದ ಅವರು ಈ ರೀತಿ ವಾಸ್ತು ಪ್ರಕಾರ ಸೂಚನೆ ನೀಡಿದ್ದಾರೆ .
   ಮೀಟಿಂಗ್‌ ವೇಳೆಯಯಲ್ಲಿ ಎಲ್ಲರು ಹಾಲ್‌ನಲ್ಲಿ ಪೂರ್ವ ದಿಕ್ಕಿಗೆ ಬೆನ್ನು, ಪಶ್ಚಿಮ ದಿಕ್ಕಿಗೆ ಮುಖವಾಗುವಂತೆ ಟೇಬಲ್‌ ಇಟ್ಟಿದ್ದರು. ಮೀಟಿಂಗ್‌ ಮುಗಿಸಿದ ನಂತರ ಅಧಿಕಾರಿಗಳನ್ನು ಕರೆದು ಪೂರ್ವ ದಿಕ್ಕಿಗೆ ಮುಖವಾಗುವಂತೆ ಪಶ್ಚಿಮ ದಿಕ್ಕಿಗೆ ಟೇಬಲ್‌ ಹಾಕುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ . 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap