ಚಿತ್ರದುರ್ಗ
ಚಂದ್ರವಳ್ಳಿ ಎಸ್.ಜೆ.ಎಂ. ಕಾಲೇಜ್ ಹಾಗೂ ಸ್ವಿಪ್ ಸಮಿತಿ ಮತ್ತು ಎನ್.ಎಸ್.ಎಸ್ ಘಟಕಗಳ ಆಶ್ರಯದಲ್ಲಿ ಬೆಳಗಟ್ಟ ಗ್ರಾಮದಲ್ಲಿ ಮತದಾನ ಜಾಗೃತಿ ಜಾಥ ಮತ್ತು ವಿಶ್ವಜಲ ದಿನಾಚರನೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗು ಸ್ವಿಪ್ ಸಮಿತಿಯ ಅದ್ಯಕ್ಷರಾದ ಸತ್ಯಭಾಮರವರು ಮಾತನಾಡಿ ಯಾವುದೇ ಚುನಾವಾಣೆಯಲ್ಲಿ ಜಾತಿ ಧರ್ಮಕ್ಕೆ ಆದ್ಯತೆ ನೀಡಬೇಡಿ ನಿರ್ಭಿತವಾಗಿ ಮತಚಲಾಯಿಸಿ ಹಾಗೂ ಇತರೇ ಆಸೆಗಳಿಗೆ ಬಲಿಯಾದರೇ ಯಾವುದೇ ಸೌಲಭ್ಯ ಕೇಳುವ ಹಕ್ಕು ಇರುವುದಿಲ್ಲ ನಿಮಗೆ ಬೇಕಾದ ಉತ್ತಮ ಅಭ್ಯರ್ಥಿಗೆ ಮತ ಹಾಕಿ ವಿನಾಕಾರಣ ಮತಹಾಕುವುದನ್ನು ಮರೆಯಬೇಡಿ ಎಂದು ಕರೆ ನೀಡಿದರು
ಒಂದೊಂದು ಮತವು ದೇಶದ ಭವಿಷ್ಯವನ್ನು ಅವಲಂಬಿಸಿರುತ್ತದೆ ಹಿಂದೆ ಕಡಿಮೆ ಮತದಾನವಾಗಿದ್ದು ಈ ಭಾರಿ 90 ರಷ್ಟು ಮತದಾನವಾಗಬೇಕಾಗಿದೆ ನೀರಿನ ಜಲ ನಮ್ಮ ಜೀವನ ಮೂಲ ನಾವು ಜಲ ಸಾಕ್ಷರತೆಯನ್ನು ಪ್ರತಿ ಕುಟುಂಬಕ್ಕೆ ತಲುಪಿಸಬೇಕಾಗಿದೆ ಲಭ್ಯವಿರುವ ಮೂಲಗಳನ್ನು ಪುನಶ್ಚೇತನಗೊಳಿಸಿ ಹೊಸ ಜಲಮೂಲಗಳನ್ನು ನಿರ್ಮಿಸುವ ಮೂಲಕ ಎಲ್ಲರೂ ಪ್ರಯತ್ನಿಸಬೇಕಾಗಿದೆ ಮುಂದಿನ ಭವಿಷ್ಯಕ್ಕಾಗಿ ಮರಗಿಡಗಳನ್ನು ಬೆಳಸುವ ಮೂಲಕ ಅಂತರ್ಜಲ ನಿರ್ಮಾಣ ಮಾಡಬೇಕು ಹನಿ ನೀರನ್ನು ಉಳಿಸಿ ಕಾಡನ್ನು ಬೆಳಸಿ ಅರೋಗ್ಯವಂತ ಭೂಮಿಯನ್ನು ಮುಂದಿನ ಪೀಳಿಗೆಗೆ ನೀಡಬೇಕಾಗಿದೆ ನೀರು ಅಮೂಲ್ಯವಾದದು ಮಿತವಾಗಿ ಬಳಿಸಿ ಎಂದು ತಿಳಿಸಿದರು.
ಎಸ್.ಜೆ.ಎಂ. ಮಹಾ ವಿದ್ಯಾಲಯದ ಪ್ರಾಚಾರ್ಯರಾದ ಡಾ.ಕೆ.ಸಿ.ರಮೇಶ್ರವರು ಮಾತನಾಡಿ ವಿದ್ಯಾರ್ಥಿ ಯುವಜನರು ನಮ್ಮ ದೇಶದ ಪ್ರಜಾಸತ್ಮಾತ್ಮಕ ಸಂಪ್ರದಾಯಗಳು ನ್ಯಾಯ ಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಕಾಪಾಡಬೇಕಾಗಿದೆ
ಚುನಾವಣೆಯಲ್ಲಿ ನಿರ್ಭಿತವಾಗಿ ಧರ್ಮ ಜನಾಂಗ ಭಾಷೆ ಯಾವುದೇ ಪ್ರೇರಣೆಗಳಿಗೆ ಒಳಗಾಗದೇ ಮತ ಚಲಾಯಿಸಬೇಕು ಎಂದು ಹೇಳೀದರು
ಮಳೆ ಬಾರದೇ ಅಂತರ್ಜಲ ಕುಸಿತದಿಂದ ಹನಿ ನೀರಿಗಾಗಿ ಪರದಾಡಬೇಕಾಗಿದೆ ಮುಂದಿನ ದಿನಗಳಲ್ಲಿ ಅನಾಹುತ ಸಂಭವಿಸುವ ಮುನ್ನ ಪ್ರತಿಯೊಬ್ಬರು ಗಿಡಮರಗಳನ್ನು ಬೆಳಸಿದರೇ ಮಳೆಯಿಂದ ಅಂತರ್ಜಲ ಉಂಟಾಗಿ ಸುಂದರ ಪರಿಸರ ನಿರ್ಮಾಣ ಮಾಡಹುದಾಗಿದೆ ಎಂದು ತಿಳಿಸಿದರು
ಮುಖ್ಯ ಅತಿಥಿಗಳಾಗಿ ಅಗಮಿಸಿದ ಎಸ್.ಜೆ.ಎಂ. ಕಾಲೇಜಿನ ಸಾಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಆರ್.ಕೆ. ಕೇದರನಾಥ್ರವರು ಮಾತನಾಡಿ ಮತದಾನದ ಮಹತ್ವ ಹಾಗೂ ಉಪಯೋಗಗಳ ಬಗ್ಗೆ ತಿಳಿಸಿ ಪ್ರತಿಯೊಬ್ಬರು ಮತದಾನ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಪಿ. ನವೀನ್ ಹಾಗೂ ಎನ್.ಎಸ್.ಎಸ್ ಘಟಕಗಳ ಅಧಿಕಾರಿಗಳಾದ ಹಚ್.ಸತೀಶ್ನಾಯ್ಕ್ ಹಾಗೂ ಬಿ.ರೇವಣ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಯಾವುದೇ ಅಮಿಷಗಳಿಗೆ ಬಲಿಯಾಗದೆ ಮತ ಚಲಾಯಿಸುತ್ತವೆ ಎಂದು ಪ್ರತಿಜ್ಣೆ ಮಾಡಿದರು
ಇದಕ್ಕೂ ಮುನ್ನ ವಿಶ್ವಜಲ ದಿನಾಚರಣೆ ಹಾಗೂ ಮತದಾನ ಜಾಗೃತಿ ಜಾಥ ಅಂಗವಾಗಿ ಗ್ರಾಮದಲ್ಲಿ ಹಾಗೂ ಶಾಲಾ ಅವರಣದಲ್ಲಿ ಸಸಿ ನೆಡಲಾಯಿತು ನಂತರ ಗ್ರಾಮದಲ್ಲಿ ಮತದಾನದ ಜಾಗೃತಿ ಜಾಥ ನಡೆಸಲಾಯಿತು ಇದೇ ಸಂದರ್ಭದಲ್ಲಿ ಸ್ವಿಪ್ ಸಮಿತಿಯ ಅದ್ಯಕ್ಷರಾಧ ಹಾಗೂ ಎಸ್.ಜೆ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಸಿ.ರಮೇಶ್ ಹಾಗೂ ಸಿಬ್ಬಂದಿ ವರ್ಗದವರು ನಾಯಕನಹಟ್ಟಿ ಜಾತ್ರೆಗೆ ಹೋಗುವ ಬಸ್ಗಳನ್ನು ತಡೆದು ಪ್ರಯಾಣಿಕರಿಗೆ ಮತದಾನ ಮಾಡುವಂತೆ ಮನವಿ ಮಾಡಿದರು. ನಂತರ ಗ್ರಾಮದಲ್ಲಿ ಜನತೆಯೊಂದಿಗೆ ಬೇಟಿ ಮಾಡಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
