ಸರ್ಕಾರಿ ಯೋಜನೆ ಸದುಪಯೋಗಿಸಿಕೊಳ್ಳಿ : ಸಚಿವ ವೆಂಕಟರವಣಪ್ಪ

ಪಾವಗಡ

      ಸಣ್ಣ, ಅತಿಸಣ್ಣ ರೈತರಿಗೆ ಸರ್ಕಾರ ಕೊಳವೆ ಬಾವಿಗಳನ್ನು ಕೊರೆಸಿ ಆರ್ಥಿಕವಾಗಿ ಸದೃಢರಾಗಲು ರೈತರಿಗೆ ಪಂಪು ಮೋಟಾರ್ ಹಾಗೂ ಬಿಡಿಭಾಗಗಳನ್ನು ವಿತರಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು.

        ಅವರು ಬುಧವಾರ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ವತಿಯಿಂದ ಆರ್ಥಿಕ ನೆರವು ಹಾಗೂ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ ಹಮ್ಮಿಕೊಂಡಿದ್ದ ಕೊಳವೆ ಬಾವಿ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿ, ಎಸ್‍ಟಿ 52 ಫಲಾನುಭವಿಗಳಿಗೆ ಹಾಗೂ ಜನರಲ್ 5 ಫಲಾನುಭವಿಗಳಿಗೆ ಮತ್ತು ಅಲ್ಪ ಸಂಖ್ಯಾತ 3 ಜನ ರೈತರಿಗೆ ಒಟ್ಟು 60 ಫಲಾನುಭವಿಗಳಿಗೆ ಪಂಪು, ಮೋಟಾರ್ ವಿತರಿಸಲಾಗುತ್ತಿದೆ ಎಂದರು.

       ಪಾವಗಡ ತಾಲ್ಲೂಕನ್ನು ಬರ ಪೀಡಿತ ತಾಲ್ಲೂಕಾಗಿ ಸರ್ಕಾರ ಘೋಷಣೆ ಮಾಡಿದೆ. ರೈತರು ಸುಧಾರಿಸಿಕೊಳ್ಳಲು ಸರ್ಕಾರ ರೈತರಿಗೆ ಕೊಳವೆ ಬಾವಿಗಳನ್ನು ಕೊರೆಸಿ ಇದಕ್ಕೆ ಬೇಕಾದ ಪಂಪ್‍ಸೆಟ್, ಪೈಪುಗಳು, ಸ್ಟಾರ್ಟರ್, ಕೇಬಲ್, ವಿವಿಧ ಬಿಡಿ ಭಾಗಗಳನ್ನು ವಿತರಣೆ ಮಾಡುತ್ತಿದೆ. ಯಾವುದೇ ರೈತ ದುರುಪಯೋಗ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕೆಂದು ಹೇಳಿದರು.

        ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಚನ್ನಮಲ್ಲಯ್ಯ, ಹಿರಿಯ ಮುಖಂಡ ನರಸಿಂಹಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಗೋವಿಂದಪ್ಪ, ಜಿಲ್ಲಾ ಪರಿಶಿಷ್ಟ ನಿಗಮ ಮಂಡಳಿಯ ವ್ಯವಸ್ಥಾಪಕರು ಹಾಗೂ ಫೀಲ್ಡ್ ಆಫೀಸರ್ ಹನುಮಂತರಾಯಪ್ಪ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ   

Recent Articles

spot_img

Related Stories

Share via
Copy link