ದಾವಣಗೆರೆ:
ಇಲ್ಲಿನ ದಾವಣಗೆರೆ ವಿಶ್ವ ವಿದ್ಯಾನಿಲಯಕ್ಕೆ ಶ್ರೀವಾಲ್ಮೀಕಿ ಮಹರ್ಷಿ ಅವರ ಹೆಸರು ನಾಮಕರಣ ಮಾಡಬೇಕು ಹಾಗೂ ಈಗಿರುವ ವಿವಿಯ ಲಾಂಛನದಲ್ಲಿ ಶ್ರೀವಾಲ್ಮೀಕಿ ಮಹರ್ಷಿಗಳ ಭಾವಚಿತ್ರ ಅಳವಡಿಸಬೇಕೆಂದು ದಾವಣಗೆರೆ ವಿಶ್ವವಿದ್ಯಾನಿಲಯಕ್ಕೆ ಶ್ರೀವಾಲ್ಮೀಕಿ ಮಹರ್ಷಿಗಳ ಹೆಸರನ್ನು ನಾಮಕರಣ ಮಾಡಿರಿ-ಹೋರಾಟ ಸಮಿತಿಯ ಎಂ.ಎಸ್.ಕೆ.ಶಾಸ್ತ್ರಿ ಒತ್ತಾಯಿಸಿದ್ದಾರೆ.
ನಗರದ ಗಡಿಯಾರ ಕಂಬದ ಬಳಿಯಲ್ಲಿರುವ ಸಮಿತಿಯ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಭೆಯನ್ನು ಉದ್ದೇಶಿದಿ ಮಾತನಾಡಿದ ಅವರು, ಶ್ರೀವಾಲ್ಮೀಕಿ ಮಹರ್ಷಿಗಳು ಬರೆದ ರಾಮಾಯಣ ಗ್ರಂಥವು ಕೇವಲ ಭಾರತದಲ್ಲಿ ಅಷ್ಟೇಯಲ್ಲ ಜಪಾನ್, ಜರ್ಮನಿ, ಕೊರಿಯಾ, ಇಸ್ರೇಲ್, ಸಿಂಗಪುರ, ಥೈಲ್ಯಾಂಡ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಆಯಾ ರಾಷ್ಟ್ರದ ಭಾಷೆಯಲಿ ತರ್ಜುಮೆಯಾಗಿದ್ದು, ಮಹರ್ಷಿಗಳು ಜಗದ್ವಿಖ್ಯಾತರಾಗಿದ್ದಾರೆ. ಆದ್ದರಿಂದ ದಾವಣಗೆರೆ ವಿವಿಗೆ ಅವರ ಹೆಸರು ನಾಮಕರಣ ಮಾಡುವುದು ಸೂಕ್ತ ಎಂದು ಆಗ್ರಹಿಸಿದರು.
ವಾಲ್ಮೀಕಿ ಕೇವಲ ಒಂದು ಸಮಾಜಕ್ಕೆ ಸೀಮಿತವಾಗದೆ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿದ್ದಾರೆ. ಸರ್ಕಾರ ಯಾವುದೇ ಪಕ್ಷಪಾತ ಜಾತಿ ರಾಜಕಾರಣದ ಅಂಶಗಳನ್ನು ಲೇಪನ ಮಾಡದೇ, ವಾಲ್ಮೀಕಿ ಮಹರ್ಷಿಗಳ ಹೆಸರನ್ನು ವಿವಿಗೆ ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
ಸಭೆಯಲ್ಲಿ ನಾಗರಾಜ ಎ.ಸಿ., ದಿನೇಶ್ ಬಾಬು, ದಾಗಿನಕಟ್ಟೆ ಪರಮೇಶ್ವರಪ್ಪ, ಕೆ.ಆರ್ ರಂಗಪ್ಪ ಜಿಗಳಿ, ಬಸವನಗೌಡ್ರು, ವಿಜಯಕುಮಾರ್, ಎಂ. ಎನ್. ಸಿದ್ದಪ್ಪ, ರಂಗಸ್ವಾಮಿ, ಮಹದೇವಪ್ಪ ಬಿ. ತಳವಾರ್, ಮಧುಸೂಧನ್ ಮತ್ತಿತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
