ದಾವಣಗೆರೆ:
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮತದಾನ ಜಾಗೃತಿಗಾಗಿ ಏರ್ಪಡಿಸಿದ್ದ ವಸ್ತು ಪ್ರದರ್ಶನದಲ್ಲಿ ಕೊನೆಯ ದಿನವಾದ ಸೋಮವಾರ ಜಾಗೃತಿಯ ಫಲಕಗಳ ಮೂಲಕ ಸಾರ್ವಜನಿಕರು ಹಾಗೂ ಪ್ರಯಾಣಿಕರಲ್ಲಿ ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲಾಯಿತು.
ಜಾಗೃತಿಯ ಫಲಕಗಳಲ್ಲಿ ಮತದಾನ ಮಾಡಿದರೆ ಹೆಣ್ಣು, ತೆರೆಯುವುದು ದೇಶದ ಕಣ್ಣು. ಓಟ್ ಮಾಡಿದವನೇ ಹೀರೋ, ಮತದಾನ ದೇಶದ ಮಹಾ ಉತ್ಸವ, ನಮ್ಮ ದೇಶ ನಿರ್ಮಾಣದ ಶಕ್ತಿ ನಮ್ಮ ಓಟಿಗಿದೆ, ನನ್ನ ಮತ ಮಾರಾಟಕ್ಕಲ್ಲ, ತರಕಾರಿ ಖರೀದಿಸುವಾಗ ತೋರುವ ಕಾಳಜಿ ಮತ ಚಲಾಯಿಸುವಾಗಲೂ ತೋರಿದಲ್ಲಿ ಅತ್ಯದ್ಭುತ ಪ್ರತಿನಿಧಿಗಳನ್ನು ಆಯ್ಕೆಮಾಡಲು ಸಾಧ್ಯ, ಮುಂದಿನ ಸುಗಮ ಹಾದಿಗೆ ಜಾಗೃತಿಯಿಂದ ಮತ ಚಲಾಯಿಸಿ, ಹಣ, ಮದ್ಯ ಹಾಗೂ ಮಾದಕ ವಸ್ತುಗಳ ಆಮಿಷಕ್ಕೆ ಒಳಗಾಗದಿರಿ.
ಮಾಡಿ, ಮಾಡಿ ಮತದಾನ, ಇರಲಿ ದೇಶದ ಮೇಲೆ ಅಭಿಮಾನ. ಇಲ್ಲಿ ಎಲ್ಲರೂ ಸಮಾನರು ಎಲ್ಲರ ಮತವೂ ಅಮೂಲ್ಯ ಎಂಬ ಘೋಷ ವಾಕ್ಯಗಳ ಮೂಲಕ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸುವ ಒಟ್ಟು 22 ಫಲಕಗಳ ಮೂಲಕ ಪ್ರದರ್ಶನ ಏರ್ಪಡಿಸಲಾಗಿದೆ. ಸಾರ್ವಜನಿಕರು ಹಾಗೂ ಪ್ರಯಾಣಿಕರು ಉತ್ಸಾಹದಿಂದ ಈ ವಸ್ತುಪ್ರದರ್ಶನವನ್ನು ವೀಕ್ಷಿಸುತ್ತಿರುವುದು ಕಂಡು ಬಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
