ದಾವಣಗೆರೆ:

ಕೊರೊನಾ ಸೋಂಕು ನಿಯಂತ್ರಣಕ್ರಮವಾಗಿಕೇಂದ್ರ ಸರ್ಕಾರಇಡೀದೇಶವನ್ನೇಲಾಕ್ಡೌನ್ಮಾಡಿ ಮನೆಯಲ್ಲಿಯೇ ಇರುವಂತೆ ನಿರ್ದೇಶನ ನೀಡಿದ್ದರೂಅನಾವಶ್ಯಕವಾಗಿರಸ್ತೆಯಲ್ಲಿಓಡಾಡುತ್ತಿದ್ದ100ಕ್ಕೂ ಹೆಚ್ಚು ವಾಹನಗಳನ್ನು ಮಂಗಳವಾರ ದಾವಣಗೆರೆಯಲ್ಲಿ ಪೊಲೀಸರು ಜಪ್ತು ಮಾಡಿದ್ದಾರೆ.
ಔಷಧೋಪಚಾರವೇಇಲ್ಲದಕೊರೊನಾ ವೈರಸ್ನಿಂದ ಹರಡುವ ಸೋಂಕು ನಿಯಂತ್ರಣಕ್ಕೆತರಲು ಸಾರ್ವಜನಿಕರು ಮನೆಯಲ್ಲಿದ್ದು, ಸಾಮಾಜಿಕಅಂತರ ಕಾಪಾಡಿಕೊಳ್ಳುವುದೇ ಮದ್ದಾಗಿದೆ.ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತ ಲಾಕ್ಡೌನ್ ಮಾಡಿಆದೇಶ ಹೊರಡಿಸಿದ್ದರು.ಇದನ್ನು ಉಲ್ಲಂಘಿಸಿ ಅನಾವಶ್ಯಕವಾಗಿರಸ್ತೆಯಲ್ಲಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿರುಚಿ, ಬಸ್ಕಿ ಶಿಕ್ಷೆ ನೀಡಿದಲ್ಲದೆ, ಜೀವ ಉಳಿಸಿಕೊಳ್ಳಲು ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಪರಿ, ಪರಿಯಾಗಿ ಬೇಡಿದ್ದರೂ ಇದೆಲ್ಲದ್ದಕ್ಕೂ ಕ್ಯಾರೇ ಎನ್ನದೇ ಅನಾವಶ್ಯಕವಾಗಿ ರಸ್ತೆಗಳಲ್ಲಿ ವಾಹನ ತೆಗೆದುಕೊಂಡುಓಡಾಡುವ ಕಿಡಿಗೇಡಿಗಳಿಗೆ ಪೊಲೀಸರು ಮಂಗಳವಾರ ವಾಹನ ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ.
ಹೆಚ್ಚುವರಿ ಎಸ್ಪಿ ಎಂ.ರಾಜೀವ್ಅವರ ನೇತೃತ್ವದಲ್ಲಿ ನಗರದ ವಿವಿಧರಸ್ತೆ, ವೃತ್ತಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಕಾರ್ಯಾಚರಣೆಗೆ ಇಳಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಯಾವುದೇ ಸಕಾರಣಇಲ್ಲದೆ, ಅನಾವಶ್ಯಕವಾಗಿ ತಿರುಗುತ್ತಿದ್ದ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರುಸೇರಿದಂತೆನೂರಕ್ಕೂ ವಾಹನಗಳನ್ನು ಜಪ್ತು ಮಾಡಿದ್ದಾರೆ.
ಕೊರೋನಾಸೋಂಕು ನಿಯಂತ್ರಣಕ್ಕೆ ಲಾಕ್ಡೌನ್ಘೋಷಿಸಿದ್ದರೂ ಅದೇನು ಮಾಡುತ್ತಾರೇ ನೋಡಿಯೇ ಬಿಡೋಣ ಎಂಬ ಭಂಡಧೈರ್ಯದಿಂದಅನಾವಶ್ಯಕನಗರದಲ್ಲಿತಿರುಗಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರವಾಹನ ಜಪ್ತುಕಾರ್ಯವುಈಗ ಅಚಿತಿಮವಾಗಿಎಚ್ಚರಿಕೆಯಗಂಟೆಯನ್ನು ಬಾರಿಸಿದೆ.
ಮಂಗಳವಾರ ಮಧ್ಯಾಹ್ನದವರೆಗೂ ನೂರಕ್ಕೂ ವಾಹನ ಜಪ್ತು ಮಾಡಲಾಗಿದೆ.ಇಲ್ಲಿನ ವಿವಿಧ ಬಡಾವಣೆ, ರಸ್ತೆಗಳು, ಕಾಲೇಜು ರಸ್ತೆಗಳಲ್ಲಿ ಸಂಚರಿಸುತ್ತಿದ್ದವಾಹನಗಳನ್ನು ತಡೆದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವಾಹನ ಚಾಲಕರು, ಸವಾರರು ಸಕಾರಣವನ್ನು ಹೇಳದೇ ಇದ್ದಂತಹ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ,ಆಟೋರಿಕ್ಷಾ, ಕಾರುಸೇರಿದಂತೆ ಮಧ್ಯಾಹ್ನದವರೆ ಗೂವಾಹನಗಳನ್ನು ಜಪ್ತು ಮಾಡಲಾಗಿದ್ದು, ಇದರಲ್ಲಿ 63 ದ್ವಿಚಕ್ರ ವಾಹನ, 17 ಆಟೋರಿಕ್ಷಾ, ಕಾರುಇತರೆ ವಾಹನಗಳಾಗಿವೆ. ಕೊರೋನಾ ವೈರಸ್ ವಿರುದ್ಧಜಾಗೃತಿ ಮೂಡಿಸುವಜೊತೆಗೆ ಕಾನೂನು ಉಲ್ಲಂಸಿದವರಿಗೆ ದಂಡ ವಿಧಿಸುವ, ಕೇಸ್ದಾಖಲಿಸುವ ಬದಲಿಗೆಅಂತಹ ವಾಹನಗಳನ್ನೇ ಜಪ್ತು ಮಾಡುವ ಮೂಲಕ ಪೊಲೀಸರುವಾಹನ ಸವಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ವಾಹನ ಜಪ್ತುಕಾರ್ಯಾಚರಣೆ ಮುಗಿದಿದ್ದರೂ, ಲಾಕ್ಡೌನ್ ಇರುವವರೆಗೂ ಇದೇರೀತಿ ಕಾರ್ಯಾಚರಣೆ ಮುಂದುವರಿಸಲಾಗುವುದುಎಂದುಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ .ನಗರದಜಯದೇವ ವೃತ್ತ, ಅಂಬೇಡ್ಕರ್ ವೃತ್ತ, ಲಕ್ಷ್ಮಿ ಫ್ಲೋರ್ ಮಿಲ್ ವೃತ್ತ, ಶಾಬನೂರುಅಂಡರ್ ಬ್ರಿಡ್ಜ್, ವಿದ್ಯಾ ನಗರ, ಹದಡಿರಸ್ತೆ ಹೀಗೆ ನಾನಾ ಕಡೆಗಳಲ್ಲಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಆಯಾಠಾಣೆಅಥವಾ ಸಂಚಾರ ಪೊಲೀಸ್ಠಾಣೆಯತ್ತ ಅವುಗಳನ್ನು ಸಾಗಿಸಲಾಗಿದೆ.ಜಪ್ತು ಮಾಡಿರುವ ವಾಹನಗಳನ್ನು ಏ.14ರ ವರೆಗಿನ ಲಾಕ್ಡೌನ್ ಮುಗಿದ ನಂತರವೇ ನೀಡುವುದಾಗಿ ಎಎಸ್ಪಿ ಎಂ.ರಾಜೀವ್ ತಿಳಿಸಿದರು.
ಅನಾವಶ್ಯಕವಾಗಿ ರಸ್ತೆಗಳಲ್ಲಿ ಓಡಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡುವ ಮೂಲಕ ಬಿಸಿ ಮುಟ್ಟಿಸಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಏ.14ರ ವರೆಗೆ ಲಾಕ್ಡೌನ್ಆದೇಶವನ್ನುಕಡ್ಡಾಯವಾಗಿ ಪಾಲನೆ ಮಾಡಬೇಕು . ಪ್ರತಿಯೊಬ್ಬರೂ ತಮ್ಮ ಮನೆಯಲ್ಲೇ ಇರಬೇಕು . ಅನಾವಶ್ಯಕವಾಗಿ ಹೊರಗಡೆ ಅಡ್ಡಾಡಿದರೆ, ವಾಹನಗಳಲ್ಲಿ ತಿರುಗುವುದುಕಂಡು ಬಂದರೆಕ್ರಮ ನಿಶ್ಚಿತಎಂದು ಎಚ್ಚರಿಸಿದ್ದಾರೆ.
ಮುಖಕ್ಕೆ ಮಾಸ್ಕ್ ಹಾಕಿಕೊಳ್ಳದೇ, ಸುರಕ್ಷತಾ ವಿಧಾನಅನುಸರಿಸದೇಅಪಾಯ ತಂದುಕೊಳ್ಳುವವರಿಗೂ ಪೊಲೀಸರು ಬೋಧನೆ ಮಾಡುತ್ತಿದ್ದಾರೆ.ದೈನಂದಿನ ಅತ್ಯವಶ್ಯಕ ವಸ್ತುಗಳ ಸಾಗಾಣಿಕೆ ಮಾಡುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಜಿಲ್ಲೆಯನ್ನು ಸಂಪರ್ಕಿಸುವಎಲ್ಲಾಜಿಲ್ಲಾ, ರಾಜ್ಯ, ಅಂತಾರಾಜ್ಯ ಗಡಿಗಳನ್ನು ಮುಚ್ಚುವಂತೆ, ಯಾವುದೇ ವಾಹನಗಳು ಗಡಿಯೊಳಗೆ ಪ್ರವೇಶಮಾಡದಂತೆಜಿಲ್ಲೆಯಲ್ಲಿ ಸುಮಾರು 16 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಿದ್ದು, ಕಂದಾಯ, ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚೆಕ್ ಪೋಸ್ಟ್ನಲ್ಲಿಕಾರ್ಯನಿರ್ವಹಿಸುವ ಮೂಲಕ ಅನಾವಶ್ಯಕವಾಗಿಓಡಾಡುವವರ ಮೇಲೆ ಹದ್ದಿನ ಕಣ್ಣುಇಟ್ಟಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
