ತಿಪಟೂರು :
ನಗರದಲ್ಲಿ ಬಿ.ಜೆ.ಪಿಯ ವಿಜಯಸಂಕಲ್ಪ ಯಾತ್ರೆಯನ್ನು ಆಯೋಜಿಸಲಾಗಿತ್ತು. ಬೈಕ್ ರ್ಯಾಲಿಯು ಗ್ರಾಮದೇವತೆ ಕೆಂಪಮ್ಮ ದೇವಾಲಯದಲ್ಲಿ ವಿಜಯ ಸಂಖಲ್ಪಯಾತ್ರೆಗೆ ಪೂಜೆ ಸಲ್ಲಿಸುವ ಮೂಲಕ ಮೋದಿ ಮತ್ತೊಮ್ಮೆ ಎಂಬ ಘೋಷಣೆಯನ್ನು ಕೂತ್ತು ನೂರಾರು ಬೈಕ್ನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮೋದಿ ಅಭಿಮಾನಿ ಬಳಗದವರು ನಗರದ ಸಂತೆಪೇಟೆ, ದೊಡ್ಡಪೇಟೆ, ರಾರೋನೇಷನ್ ರಸ್ತೆ, ರೈಲ್ವೇಸ್ಟೇಷನ್ ರಸ್ತೆ, ಬಿ.ಹೆಚ್.ರಸ್ತೆ, ಗೋವಿನಪುರಗಳಲ್ಲಿ ಸಂಚರಿಸಿ ವಿಜಯಸಂಕಲ್ಪ ಯಾತ್ರೆಯನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಬಿ.ಸಿ.ನಾಗೇಶ್ ಬೈಕ್ ರ್ಯಾಲಿಗೆ ಚಾಲನೆ ನೀಡಿದ ಅವರು ತಾವು ಕೂಡ ಬೈಕ್ ಏರಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು ಈ ಸಂದರ್ಭದಲ್ಲಿ ತಾ.ಭಾ.ಜ.ಪ ಅಧ್ಯಕ್ಷ ದಿವಾಕರ್, ನಗರಸಭಾ ಸ್ಥಾಯಿಸಮತಿ ಅಧ್ಯಕ್ಷ ಗಂಗಾಧರ್, ನಗರಸಭಾ ಸದಸ್ಯ ಪ್ರಸನ್ನಕುಮಾರ್, ರಾಮ್ ಮೋಹನ್, ಲೋಕೇಶ್, ಮುಂತಾದವರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/03/TTR-2.jpg)