ಹರಪನಹಳ್ಳಿ,
ದೇವದಾಸಿ ಮಹಿಳೆಯರ ಹಾಗೂ ಅವರ ಕುಟುಂಬದ ಸದಸ.್ಯರ ಗಣತಿಯನ್ನು ನಡೆಸಿ ಅವರಿಗೆ ಪುನರ್ವ ವಸತಿ ಕಲ್ಪಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಮಿನಿವಿಧಾನ ಸೌಧದ ಆವರಣದಲ್ಲಿ ಬಹಿರಂಗ ಸಭೆ ನಡೆಸಿದ ಮಾಜಿ ದೇವದಾಸಿ ಮಹಿಳೆಯರು ತಮ್ಮ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು.
ದೇವದಾಸಿ ಮಹಿಳಾ ವಿಮೋಚನಾ ಸಂಘ ರಾಜ್ಯಾದ್ಯಕ್ಷೆ ಟಿ.ವಿ.ರೇಣುಕಮ್ಮ ಮಾತನಾಡಿ ಸುಮಾರು ನೂರು ವರ್ಷಗಳ ಹಿಂದೇನೇ ದೇಶದಲ್ಲಿ ದೇವದಾಸಿ ಪದ್ದತಿಯನ್ನು ನಿಷೇಧಿಸಿದ್ದರೂ ಇನ್ನೂ ಹಲವು ರಾಜ್ಯಗಳಲ್ಲಿ ಮುಖ್ಯವಾಗಿ ಕರ್ನಾಟಕ, ಆಂದ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮುಂತಾದ ರಾಜ್ಯಗಳಲ್ಲಿ ಈಗಲೂ ಮುಂದುವರೆದಿದೆ ಎಂದು ಹೇಳಿದರು.
ಕರ್ನಾಟಕದಲ್ಲೊಂದೆ ಸರ್ಕಾರದ ಗಣತಿ ಪ್ರಕಾರ 60 ಸಾವಿರ ದಷ್ಟು ಮತ್ತು ಗಣತಿಯಲ್ಲಿರದ ಸಾವಿರಾರು ಕುಟುಂಬಗಳು ಸೇರಿ ಅಂದಾಜು 1 ಲಕ್ಷ ದೇವದಾಸಿ ಕುಟುಂಬಗಳಿವೆ, ಅವರ ಪರಿಸ್ಥಿತಿ ತೀರ ಶೋಚನೀಯವಾಗಿದ್ದು, ಅಂತವರ ನೆರವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಧಾವಿಸಬೇಕು ಎಂದು ಅವರು ಒತ್ತಾಯಿಸಿದರು.
ಹಕ್ಕೋತ್ತಾಯಗಳು –
ದೇಶದಾದ್ಯಂತಹ ದೇವದಾಸಿ ಮಹಿಳೆಯರನ್ನು ಮತ್ತು ಅವರ ಕುಟುಂಬದ ಸದಸ್ಯರನ್ನು ಗಣತಿ ಮಾಡಲು ಹಾಗೂ ಎಲ್ಲರ ಪುನರ್ವಸತಿಗೆ ಕ್ರಮ ವಹಿಸಬೇಕು,
ದೇವದಾಸಿ ಪದ್ದತಿ ವಿಸ್ತಾರಗೊಳ್ಳದಂತೆ ತಡೆಯಲು ಮತ್ತು ಅದರ ಫಲಾನುಭವಿ ಅಪರಾಧಿಗಳಿಗೆ ಶಿಕ್ಷೆ ನೀಡಬೇಕು, ಈ ದುಷ್ಟ ಪದ್ದತಿಗೆ ಬಲಿಯಾದ ಅಮಾಯಕ ಬಾಲಕೀಯರು, ಮತ್ತು ಮಹಿಳೆಯರನ್ನು ಹಾಗೂ ಅವರ ಕುಟಂಬದ ಸದಸ್ಯರನ್ನು ಸ್ವಾವಲಂಬಿಗಳಾಗಿಸುವ ಪರಿಣಾಮಕಾರಿ ಪುನರ ವಸತಿ ಕ್ರಮ ಕೈಗೊಳ್ಳಬೇಕು.
ದೇವದಾಸಿ ಮಹಿಳೆ.ಯರ ಮಕ್ಕಳು, ಅವರ ತಂದೆಯ ಕುಟಂಬದ ಆಸ್ತಿಯಲ್ಲಿ ಪಾಲು ಪಡೆಯಲು ಮತ್ತು ನಿರ್ವಹಣೆಯ ಪರಿಹಾರ ಪಡೆಯಲು ಅಗತ್ಯ ಕ್ರಮ ವಹಿಸಬೇಕು.
ಎಲ್ಲಾ ದೇವದಾಸಿ ಮಹಿಳೆಯರಿಗೆ ಮಾಸಿಕ 5 ಸಾವಿರ ರು.ಗಳ ಸಹಾಯ ಧನ ಕೇಂದ್ರ ಸರ್ಕಾರದ ಒದಗಿಸಬೇಕು. ವ್ಯವಸಾಯದಲ್ಲಿ ತೊಡಗಲು ಇಚ್ಚಿಸುವ ಎಲ್ಲಾ ದೇವದಾಸಿ ಮಹಿಳೆಯರ ಅವರ ಕುಟುಂಬಗಳ ಸದಸ್ಯರಿಗೆ ಹಾಗೂ ಅವರ ಜನಸಮುದಾಯಗಳ ಕುಟುಂಬಗಳಿಗೆ ತಲಾ 5 ಎಕರೆ ಜಮೀನು ಮತ್ತು ವಾಸಕ್ಕೆ ಹಿತ್ತಲು ಸಹಿತ ನಿವೇಶನವನ್ನು ಕಟ್ಟಿಸಿ ಕೊಡಬೇಕು..
ಸ್ವ ಉದ್ಯೋಗದಲ್ಲಿ ತೊಡಗಲು ತರಬೇತಿ, ಸಾಲ ನೀಡಬೇಕು, ದೇವದಾಸಿ ಮಹಿಳೆಯರ ಹೆಣ್ಣು ಮಕ್ಕಳನ್ನು ದತ್ತು ಪಡೆದು ಅಗತ್ಯ ಶಿಕ್ಷಣವನ್ನು ನೀಡಿ ಉದ್ಯೋಗವನ್ನು ನೀಡಬೇಕು, ದೇವದಾಸಿ ಮಹಿಳೆಯರ ಮಕ್ಕಳ ಮದುವೆಗೆ ಪ್ರೋತ್ಸಾಹ ಧನವನ್ನು ನೀಡಬೇಕು. ಉದ್ಯೋಗ ಖಾತ್ರಿಯಲ್ಲಿ 200 ದಿವಸ ಕಡ್ಡಾಯವಾಗಿ ಕೂಲಿ ಕೆಲಸ ನೀಡಬೇಕು, ಎಸ್ಸಿ, ಎಸ್ಟಿ ಜನರ ಜನಸಂಖ್ಯೆಗನುಗುಣವಾಗಿ ಬಜೆಟ್ ನಲ್ಲಿ ಅನುದಾನ ಒದಗಿಸಬೇಕು ಈ ರೀತಿ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ ಅವರಿಗೆ ಸಲ್ಲಿಸಿದರು.
ಸಂಘದ ರಾಜ್ಯಾದ್ಯಕ್ಷೆ ಟಿ.ವಿ.ರೇಣುಕಮ್ಮ, ಅಂಜಿನಮ್ಮ, ದುರುಗಮ್ಮ, ಈರಮ್ಮ, ಹನುಮಕ್ಕ, ರಾಜಪ್ಪ, ಸೇರಿದಂತೆ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
