ವಿವಿಧ ಸವಲತ್ತುಗಳಿಗೆ ಆಗ್ರಹಿಸಿ ಪ್ರತಿಭಟನೆ

ಪಾವಗಡ;-

       ಹೋರಾಟದ ಫಲವಾಗಿ ಕಟ್ಟಡ ಕಾರ್ಮಿಕರಿಗೆ ಇಂದು ಸವಲತ್ತುಗಳು ದೊರಕುತ್ತಿವೆ ಎಂದು ತುಮಕೂರು ಜಿಲ್ಲಾ ಕಾರ್ಮಿಕ ಸಂಘಟನೆಯ ಎ. ಐ.ಟಿ.ಸಿ. ಮುಖಂಡ ಗೀರೀಶ್ ತಿಳಿಸಿದರು. ಭಾನುವಾರ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮದ ಕನಕ ಭವನದಲ್ಲಿ ಕಟ್ಟಡ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯನ್ನು ಉದ್ಗಾಟಿಸಿ ಮಾತನಾಡಿದ ಅವರು ಸವಲತ್ತುಗಳನ್ನು ಪಡೆಯಬೆಕೇಂದರೆ ಸಂಘಟಿತರಾಗಬೇಕು ಸಂಘದಿಂದ ಏರ್ಪಡಿಸುವ ಪ್ರತಿಯೊಂದು ಸಭೆಗೂ ಆಗಮಿಸಿ ಮಾಹಿತಿಯನ್ನು ಪಡೆದುಕೊಳ್ಳಬೇಕೆಂದರು.

       ಮುಖಂಡ ಗೌಡ ರಂಗಪ್ಪ ಮಾತನಾಡಿ, ದುಡಿಯುವ ವರ್ಗಕ್ಕೆ ಎ.ಐ.ಟಿ.ಯು.ಸಿ. ಇಂದ ನ್ಯಾಯ ವದಗಿಸಿಕೊಡುತ್ತಿದ್ದು, ಸಂಘಟಿತರಾಗಿ ಹೋರಾಡಿದರೆ ಮಾತ್ರ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು. ರಾಜ್ಯ ಕಟ್ಟಡ ಕಾರ್ಮೀಕರ ಸಂಘದ ಉಪಾಧ್ಯಕ್ಷ ಬಲ್ಲೇನಹಳ್ಳಿಶ್ರೀರಾಮಯ್ಯ ಮಾತನಾಡಿ, ಅಮೇರಿಕಾದ ಚಿಕೋಗಾದಲ್ಲಿ ಕಾರ್ಮಿಕರ ಮೇಲೆ ನಡೆದ ಹತ್ಯಾಕಾಂಡದಿಂದ ವಿಶ್ವ ಕಾರ್ಮಿಕರು ಒಂದಾಗಿ ಹೋರಾಡಿದ ಫಲವಾಗಿ ಮೇ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಆಂದ್ರದ ಅನಂತಪುರ ಜಿಲ್ಲೆಯ ಸಿ.ಪಿ.ಐ. ನಾಯಕ

        ಚೆಟ್ಲು ರುದ್ರಯ್ಯ ಮಾತನಾಡಿ, ಕಾರ್ಮೀಕರೆಂದರೆ ಅದು ದೇಶದ ಸಂಪತ್ತು ಆದರೆ ಕಾರ್ಮಿಕರನ್ನು ಕಡೆಗಣಿಸುತ್ತಿದ್ದಾರೆ, ವಿಶ್ವ ಕಾರ್ಮಿಕರಲ್ಲಿ ಮಹಿಳೆಯರ ಪಾತ್ರ ದೊಡ್ಡದು ಎಂದರು.

      ಕಾರ್ಮಿಕ ಮುಖಂಡ ಗೌಡೇಟಿ ನಾಗರತ್ನಪ್ಪ ಮಾತನಾಡಿ, ಕಾರ್ಮಿಕರಿಗೆ ಸಿಕ್ಕ ಜಯದ ಸಂಕೇತ ಕೆಂಪುಬಾವುಟ, ಕಾರ್ಮಿಕ ಸಂಘಟನೆಗೆ ಪಕ್ಷಬೇದ ಇರುವುದಿಲ್ಲ, ಚಿಕಾಗೊ ಹೋರಾಟದ ಸವಿನೆನಪಿಗಾಗಿ ಕಾರ್ಮಿಕರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಿ.ಪಿ.ಐ. ಮುಖಂಡ ಅಶ್ವಥ್ ನಾರಾಯಣ,ಗೌಡರಂಗಪ್ಪ, ಮಾತನಾಡಿದರು.ಮುಖಂಡರಾದ ಕೃಷ್ಣಮುರ್ತಿ,ತಿಪ್ಪೇಸ್ವಾಮಿ,ರಾಮನಾಥ್, ಜಿ.ಎಚ್.ರಾಮಾಂಜಿ,ವೆಂಕಟರವಣಪ್ಪ, ಮತ್ತು ನೂರಾರು ಕಾರ್ಮಿಕ ಬಂಧುಗಳು ಬಾಗವಹಿಸಿದ್ದರು. ವೆಂಕಟಾಪುರ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಜಾಥಾ ನಡೆಸಲಾಯಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link