ಚೇಳೂರು
ಚೇಳೂರಿನಲ್ಲಿ ವೈಕುಂಠ ಏಕಾದಶಿಯು ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು.
ಭಾವಸಾರ ಕ್ಷತ್ರಿಯ ಸಮಾಜದ ವತಿಯಿಂದ ಶ್ರೀಪಾಂಡುರಂಗರುಕ್ಮಿಣಿ, ಗಾಯತ್ರಿ ಸಮಾಜದ ವತಿಯಿಂದ ಶ್ರೀಸೀತಾರಾಮ, ಗ್ರಾಮಸ್ಥರಿಂದ ಶ್ರೀಲಕ್ಷ್ಮೀವೆಂಕಟೇಶ್ವರ, ಆರ್ಯ ವೈಶ್ಯ ಮಂಡಲಿ ವತಿಯಿಂದ ಶ್ರೀಕನ್ನಿಕಾಪರಮೇಶ್ವರಿ ದೇವಾಲಯಗಳಲ್ಲಿ ಹಲವು ಅಲಂಕಾರ, ವಿಶೇಷ ಪೂಜೆ ಕಾರ್ಯಗಳು ನಡೆದವು. ಭಕ್ತರು ಬೆಳಗ್ಗಿನ ಪೂಜೆಗೆ ಸಾಲಾಗಿ ನಿಂತು ಉತ್ತರ ದ್ವಾರದ ಪ್ರವೇಶದೊಂದಿಗೆ ದೇವರ ದರ್ಶನವನ್ನು ಪಡೆದು ಲಡ್ಡು ಪ್ರಸಾದವನ್ನು ಸ್ವೀಕರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
