ಬೆಂಗಳೂರು
ರಾಜರಾಜೇಶ್ವರಿನಗರದ ಬಳಿ ಬುಧವಾರ ಮಧ್ಯಾಹ್ನ ಜಲಮಂಡಳಿ ಕಾಮಗಾರಿ ವೇಳೆ ಮಣ್ಣುಕುಸಿದು ಕಾರ್ಮಿಕ ಮುತ್ತು ಅಲಿಯಾಸ್ ಮಡಿವಾಳಪ್ಪ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧ ಪಶ್ಚಿಮ ವಿಭಾಗದ ಪೊಲೀಸರು ಇಬ್ಬರು ಇಂಜಿನಿಯರ್ಗಳು ಸೇರಿ ನಾಲ್ವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ರಾಜರಾಜೇಶ್ವರಿನಗರ ವಿಭಾಗದ ಎಇಇ ಸ್ನೇಹ, ಎಇ ದಿಲೀಪ್,ನವನೀತ್ ಕುಮಾರ್, ಗುತ್ತಿಗೆದಾರ ನವೀನ್ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿದೆ
ಪದ್ಮಾವತಿ ಮೀನಾಕ್ಷಿ ಕಲ್ಯಾಣ ಮಂಟಪ ಬಳಿ ಜಲಮಂಡಳಿಯು ಕಳೆದ ಒಂದು ತಿಂಗಳಿಂದ ಕಾಮಗಾರಿ ನಡೆಯುತ್ತಿದ್ದು ಆಳದಲ್ಲಿತೆಗೆಯುವಾಗ ಮೇಲಿಂದ ಮಣ್ಣು ಕುಸಿದು ಕಾರ್ಮಿಕ ಮಡಿವಾಳಪ್ಪ ಸಾವಿಗೀಡಾಗಿದ್ದರು ಈ ಸಂಬಂಧ ಮುಂಜಾಗ್ರತ ಕ್ರಮಗೊಳ್ಳದ ಜಲಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ವಿರುದ್ಧ ಕೆಂಗೇರಿ ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಡಿಸಿಪಿ ರವಿಚೆನ್ನಣ್ಣವರ್ ತಿಳಿಸಿದ್ದಾರೆ.
ಮಡಿವಾಳಪ್ಪನ ಸಂಬಂಧಿ ಪ್ರಭು ಎಂಬುವವರು ದೂರು ನೀಡಿದ್ದಾರೆ.ಯಾವುದೇ ಸುರಕ್ಷತೆ ಇಲ್ಲದೆ ಕೆಲಸ ಮಾಡಿಸುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಿಲಾಗಿದೆ. ಪ್ರಕರಣ ತನಿಖಾ ಹಂತದಲ್ಲಿದ್ದು, ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸುತ್ತೇವೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
