ಚಿಕ್ಕನಾಯಕನಹಳ್ಳಿ
ರಾಷ್ಟ್ರದ ಆಡಳಿತದ ಜೊತೆಯಲ್ಲಿ ತುಮಕೂರನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗಲು ಕಂಕಣಬದ್ಧರಾಗಿದ್ದೇವೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.ಪಟ್ಟಣದ ನೆಹರು ಸರ್ಕಲ್ನಲ್ಲಿ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದಲ್ಲಿ ಪ್ರಧಾನಿಯಾಗಿ 2ನೇ ಬಾರಿ ನರೇಂದ್ರಮೋದಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿರುವುದರಿಂದ ದೇಶದ ಗ್ರಾಮೀಣ ಬದುಕಿಗೆ ಹೊಸ ಆಯಾಮ ಸಿಗುತ್ತದೆ. ಮೊದಲನೆ ಬಾರಿ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಪೂರ್ಣವಾಗಿ ನೆಲೆಯೂರಲು ಸಹಕಾರವಾಯಿತು. ಈಗ ದೇಶದ ಸಮಗ್ರ ಅಭಿವೃದ್ಧಿಗೆ ಚಿಂತನೆ ನಡೆಸಲಿದ್ದಾರೆ, ನರೇಂದ್ರಮೋದಿಯವರು ನೀರಾವರಿಗೆ ಹೆಚ್ಚಿನ ಒತ್ತು ನೀಡಲಿದ್ದಾರೆ, ಬಿಜೆಪಿಯಿಂದ ಆಯ್ಕೆಯಾಗಿರುವ ಜಿಲ್ಲೆಯ ಶಾಸಕರಾದ ಜ್ಯೋತಿಗಣೇಶ್, ಬಿ.ಸಿ.ನಾಗೇಶ್, ಜಯರಾಮ್, ಸಂಸದರಾದ ಜಿ.ಎಸ್. ಬಸವರಾಜು , ನಾನೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದರು.
ತುಮಕೂರಿನಲ್ಲಿ ಬಿಜೆಪಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದ್ದಕ್ಕೆ ಜಿಲ್ಲೆಯ ಜನತೆಗೆ ಅಭಿನಂದನೆ ಸಲ್ಲಿಸಿದ ಶಾಸಕರು, ಪ್ರಧಾನಿಯಾಗಿ ದ್ದಂತಹ ದೇವೇಗೌಡರು ತುಮಕೂರಿಗೆ ಬಂದು ಸೋಲಬಾರದಿತ್ತು, ಇಲ್ಲಿಗೆ ಕರೆದುಕೊಂಡು ಬಂದಂತಹ ಅವರ ನಾಯಕರುಗಳು ಸೋಲಿಗೆ ಉತ್ತರ ಹೇಳಬೇಕು ಎಂದು ಹೇಳಿದರು.ವಿಜಯೋತ್ಸವದಲ್ಲಿ ಮುಖಂಡರುಗಳಾದ ಸಿಂಗದಹಳ್ಳಿರಾಜ್ಕುಮಾರ್, ನಿರಂಜನ್ಮೂರ್ತಿ, ಸಿ.ಎಂ.ರಂಗಸ್ವಾಮಯ್ಯ, ಗೋ.ನಿ.ವಸಂತ್ಕುಮಾರ್, ನಂದಿಹಳ್ಳಿಶಿವಣ್ಣ ಸೇರಿದಂತೆ ಹಲವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ