ಮೈತ್ರಿ ಮುರಿದರೆ ಆಡಳಿತ ರಚನೆಗೆ ಯತ್ನ ಸರ್ಕಾರ ಬೀಳಿಸಲ್ಲ: ಶಾಸಕ ರವೀಂದ್ರನಾಥ್

ದಾವಣಗೆರೆ

        ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ತನ್ನತಾನೇ ಬಿದ್ದರೆ, ಸರ್ಕಾರ ರಚಿಸುವ ಪ್ರಯತ್ನ ಮಾಡುವುದಾಗಿ ಶಾಸಕ, ಬಿಜೆಪಿ ಮುಖಂಡ ಎಸ್.ಎ.ರವೀಂದ್ರನಾಥ್ ತಿಳಿಸಿದರು.

         ತಾಲೂಕಿನ ಕಕ್ಕರಗೊಳ್ಳ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಯಾವುದೇ ಕಾರಣಕ್ಕೂ ಸರ್ಕಾರವನ್ನು ಬಿಳಿಸುವ ಪ್ರಯತ್ನ ಮಾಡಲ್ಲ. ಆದರೆ, ಸರ್ಕಾರ ತನ್ನತಾನೆಯೇ ಬಿದ್ದರೆ, ಕಾಂಗ್ರೆಸ್ ಶಾಸಕರನ್ನು ಸೆಳೆದು ಸರ್ಕಾರ ರಚಿಸುತ್ತೇವೆ ಎಂದರು.
ಕಾಂಗ್ರೆಸ್-ಜೆಡಿಎಸ್‍ನಲ್ಲಿರುವಂತೆ ನಮ್ಮಲ್ಲೂ ಅತ್ತಕಡೆ ಹೋಗುವವರಿರಬಹುದು. ಹೀಗಾಗಿ ನಮ್ಮ ಶಾಸಕರ ಮೇಲೂ ನಿಗಾ ಇಡಬೇಕಾಗಿದೆ. ನಾನಂತೂ ಯಾವುದೇ ಪಕ್ಷಕ್ಕೆ ಹೋಗಲ್ಲ. ನನ್ನನ್ನೂ ಯಾರೂ ಮಾತಾಡಿಸಿಲ್ಲ ಎಂದರು.ರಾಜ್ಯದಲ್ಲಿ ಸಮೃದ್ಧ ಮಳೆ, ಬೆಳೆ ಆಗಲಿ ಎಂದು ಶ್ರೀಮಹೇಶ್ವರ ಸ್ವಾಮಿಯಲ್ಲಿ ಬೇಡಿಕೊಂಡಿದ್ದೇನೆ ಎಂದರು.

        ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಧನಂಜಯ ಕಡ್ಲೇಬಾಳು, ಜಗದೀಶ್, ದೊಗ್ಗಳ್ಳಿ ವೀರೇಶ್, ಕೆ.ಪಿ.ಕಲ್ಲಿಂಗಪ್ಪ ಮತ್ತಿತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap