ಸೀಟು ಹಂಚಿಕೆ : ನಾಳೆ ಜೆಡಿಎಸ್‌ ನಾಯಕರೊಂದಿಗೆ ಸಭೆ; ಡಾ.ಜಿ. ಪರಮೇಶ್ವರ

ದಾವಣಗೆರೆ:

        ಲೋಕಸಭೆ ಚುನಾವಣೆ ಸಂಬಂಧ ಸೀಟು ಹಂಚಿಕೆಯ ಚರ್ಚೆ ನಡೆಯುತ್ತಿದೆ. ಬಗೆಹರಿಯದ ಕ್ಷೇತ್ರಗಳ ಹಂಚಿಕೆಯನ್ನು ಹೈಕಮಾಂಡ್‌ ನಿರ್ಧಾರ ಮಾಡಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಹೇಳಿದರು.

         ದಾವಣಗೆರೆ ಐಬಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಎಲ್ಲ ತಯಾರಿ ಮಾಡುತ್ತಿದೆ. ಅಧ್ಯಕ್ಷರು ಅನೇಕ‌ ಸಭೆ ಮಾಡಿದ್ದಾರೆ. ಚುನಾವಣಾ ಸಮಿತಿ ಸಭೆ ಕೂಡ ಆಗಿದೆ. ಜೊತೆಗೆ ಉಸ್ತುವಾರಿ ಪ್ರಧಾನ ಕಾರ್ಯದರ್ಶಿ ನಾವೆಲ್ಲ ಚರ್ಚೆ ಮಾಡಿದ್ದೇವೆ. ಕೆಳಹಂತದಲ್ಲಿ ಪಕ್ಷದ ಸಂಘಟನೆ ಮಾಡಲಾಗುತ್ತಿದೆ.‌ ನಮ್ಮ ತಯಾರಿ ಆಗಿದೆ. ಸಮ್ಮಿಶ್ರ ಸರಕಾರ ಇರುವುದರಿಂದ ಲೋಕಸಭಾ ಚುನಾವಣೆಗೂ ಒಟ್ಟಾಗಿ ಹೋಗಲಿದ್ದೇವೆ.

          ಕೆಪಿಸಿಸಿ ಅಧ್ಯಕ್ಷರು ದೇವೇಗೌಡರ ಜೊತೆ ಮಾತನಾಡಿದ್ದಾರೆ. ನಾಳೆ ನಾನು ಹಾಗೂ ದಿನೇಶ್ ಗುಂಡೂರಾವ್‌ ಇಬ್ಬರು ಜೆಡಿಎಸ್ ಪಕ್ಷದ‌ ಮುಖಂಡರ ಜೊತೆ ಮಾತನಾಡಲಿದ್ದೇವೆ. ಆ ನಂತರ ಪರಸ್ಪರ ಸೀಟು ಹಂಚಿಕೆ ಮಾಡಲಾಗುತ್ತದೆ.
ಬಗೆಹರಿಯದ ಕ್ಷೇತ್ರವನ್ನು ರಾಹುಲ್ ಗಾಂಧಿ ಅವರ ಹಂತದಲ್ಲಿ ತೀರ್ಮಾನ ಮಾಡಲಿದ್ದೇವೆ. ಬಹುತೇಕ ನಮ್ಮ ಹಂತದಲ್ಲೇ ತೀರ್ಮಾನ ಮಾಡುವ ಭರವಸೆ ಇದೆ ಎಂದರು.

         ಏರ್‌ಶೋನಲ್ಲಿ ನೆನ್ನೆ ನಡೆದ ಘಟನೆ ಬಹಳ ದುರಾದೃಷ್ಟಕ‌. ಈ ಬಗ್ಗೆ ತನಿಖೆಯಾದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಏರ್‌ ಶೋನಲ್ಲಿ ಹೆಚ್ಚಿನ‌ ಭದ್ರತೆ ತೆಗೆದುಕೊಳ್ಳಬೇಕಿತ್ತು. ಕಾರು‌ ಕಳೆದುಕೊಂಡವರಿಗೆ ಯಾವ ರೀತಿ ಪರಿಹಾರ ಎಂಬುದನ್ನು ಚರ್ಚೆ ಮಾಡ್ತೀವಿ ಎಂದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap