ಬೆಂಗಳೂರು
ಅಮೆರಿಕ ಹಾಗೂ ಶ್ರೀಲಂಕಾ ಮಾದರಿಯಲ್ಲಿ ರಾಜ್ಯದಲ್ಲೂ ಕ್ಯಾಸಿನೋ (ಜೂಜು ಕೇಂದ್ರ) ತೆರೆದರೆ ರಾಜ್ಯದ ಜನರಿಗೆ ಏನು ಲಾಭ ಎಂದು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆ ಕ್ಯಾಸಿನೋ ತೆರೆಯಲು ನಡೆಸುತ್ತಿರುವ ಪ್ರಯತ್ನ ಆಘಾತಕಾರಿಯಾಗಿದ್ದು, ಸರ್ಕಾರದ ಉದ್ದೇಶವನ್ನು ಜನರಿಗೆ ಮನವರಿಕೆಮಾಡಿಕೊಡಲಿ. ನಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಜೆಟ್ನಲ್ಲಿ ಕ್ಯಾಸಿನೋ ಜಾರಿ ಬಗ್ಗೆ ಪ್ರಕಟಿಸಲಿ ಎಂದರು.
ಅಮೂಲ್ಯ ಲಿಯೋನ್ ಪಾಕ್ ಪರ ಘೋಷಣೆ ಕೂಗಿದ್ದನ್ನು ಇಂದೂ ಸಹ ಪರೋಕ್ಷವಾಗಿ ಸಮರ್ಥಿಸಿಕೊಂಡ ಶಿವಕುಮಾರ್, ಆ ಹೆಣ್ಣುಮಗಳು ಏನು ಹೇಳುವುದಕ್ಕೆ ಹೊರಟ್ಟಿದ್ದಳೋ ಏನೋ.?. ಹಿಂದೆ ಸಹ ಅವಳನ್ನು ತಾವು ನೋಡಿದ್ದು ಆಕೆ ತನ್ನದೇ ಆದ ವಿಶ್ವಮಾನವ ತತ್ವ ಇಟ್ಟುಕೊಂಡಿದ್ದಾಳೆ ಎನಿಸಿತು. ರಾಜಕಾರಣ ಮಾಡಬೇಕು ಆದರೆ ದೇಶದ ವಿಚಾರದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂದು ಹೇಳಿದರು.
ಪಾಕಿಸ್ತಾನಕ್ಕೆ ಜೈ ಎನ್ನುವವರಿಗೆ ಯಾವುದೇ ಪ್ರೋತ್ಸಾಹ ನೀಡಲು ಸಾಧ್ಯವಿಲ್ಲ. ಆದರೆ ಈ ವಿಚಾರದಲ್ಲಿ ಆತುರದಿಂದ ವರ್ತಿಸುವುದು ಸಹ ಸಮಂಜಸವಲ್ಲ ಎಂದರು.
ಬಿಜೆಪಿಯವರಿಗೆ ಕಾಂಗ್ರೆಸ್ ಬಿಟ್ಟರೆ ಬೇರೆನೂ ಕಾಣಿಸುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ – ಸಿಎಎ, ಎನ್ಆರ್ ಸಿ ವಿಚಾರಗಳನ್ನು ಸಾರ್ಚಜನಿಕರಿಗೆ ಬಿಟ್ಟಿದ್ದೇವೆ. ಸಿಎಎ ಎನ್ಆರ್ಸಿ ಕಾಂಗ್ರೆಸ್ ಕಾರ್ಯಸೂಚಿಲ್ಲ. ಇದು ಇಡೀ ದೇಶದ ವಿಚಾರ ಎಂದರು.
ಅಮೇರಿಕಕ್ಕೆ ಹೋಗಿದ್ದ ಮೋದಿ ಡೂನಾಲ್ಡ್ ಟ್ರಂಪ್ ಪರ ಪ್ರಚಾರ ಮಾಡಿ ಟ್ರಪ್ ಗೆ ಮತಹಾಕಿ, ಮುಂದೆಯೂ ಟ್ರಂಪೇ ಅಧಿಕಾರಕ್ಕೆ ಬರುತ್ತಾರೆ ಎಂದು ಹೇಳಿದ್ದರು. ಇದು ಅಂತರರಾಷ್ಟ್ರೀಯ ಸಂಬಂಧಗಳನ್ನು ಹೇಗೆ ವೃದ್ದಿಸುತ್ತದೆಯೇ? ನಮ್ಮ ದೇಶದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ಅವರಿಗೇನು ಆಗಬೇಕು. ಅಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದ್ರೆ ನಮಗೇನು? ಎಂದರು.ದೇಶ ದೇಶಗಳ ನಡುವಿನ ಸಂಬಂಧಗಳು ಚೆನ್ನಾಗಿ ಇರಬೇಕು. ಪ್ರಧಾನಿ ನರೇಂದ್ರ ಮೋದಿ ಆ ರೀತಿ ಹೇಳಿಕೆ ಕೊಡುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಹಿನ್ನಡೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು?
ಸಿಎಎ ಮತ್ತು ಎನ್ಆರ್ ಸಿ ತಂದ ಬಳಿಕ ವಿದೇಶಗಳು ಭಾರತವನ್ನು ನೋಡುವ ರೀತಿಯೇ ಬದಲಾಗಿದೆ. ಒಷ್ಟಾದರೂ ಬಿಜೆಪಿ ನಾಯಕರು ಎಲ್ಲದಕ್ಕೂ ಕಾಂಗ್ರೆಸ್ ವಿರುದ್ಧ ಮಾತನಾಡುವುದು ಬಿಟ್ಟಿಲ್ಲ. ಮೊದಲು ಅವರು ದೇಶದ ಪರ ಕೆಲಸ ಮಾಡಲಿ ಎಂದು ಶಿವಕುಮಾರ್ ಸೂಚ್ಯವಾಗಿ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
