ಮಿಡಿಗೇಶಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿಯ ಎಸ್.ಎಲ್.ಎನ್. ಪ್ರೌಢಶಾಲೆಯ ಸಮೀಪದ ಕೆ.ಶಿಪ್ ರಸ್ತೆಯಲ್ಲಿ ಡಿ.13 ರಂದು ಮುಂಜಾನೆ 5.30 ಗಂಟೆಯ ಸಮಯದಲ್ಲಿ ವಾಕಿಂಗ್ಗೆ ಹೋಗುತ್ತಿದ್ದ ಪುಷ್ಪಲತಾರವರಿಗೆ ಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಜಿಲ್ಲರಗುಂಟೆ ಹಾಗೂ ಭಕ್ತರಹಳ್ಳಿಯಲ್ಲಿ ನಡೆಯುತ್ತಿರುವ ಜಾತ್ರಾ ಮಹೋತ್ಸವ ಕಾರ್ಯಕ್ರಮಕ್ಕೆ ವಾಪಸ್ಸು ಬರುತ್ತಿದ್ದ ಬೆಂಗಳೂರಿನವರಾದ ಕೃಷ್ಣಮೂರ್ತಿ, ಈತನ ಪತ್ನಿ ಕವಿತಾರವರು ತಮ್ಮ ದ್ವಿಚಕ್ರ ವಾಹನ ಕೆ.ಎ.41-ಈಜಿ-6991 ರಲ್ಲಿ ಮಿಡಿಗೇಶಿ ಬಸ್ ನಿಲ್ದಾಣದ ಕಡೆಯಿಂದ ಮಧುಗಿರಿ ಕಡೆಗೆ ತೆರಳುತಿದ್ದ ವೇಳೆ ಪುಷ್ಪಲತಾರವರಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಪುಷ್ಪಲತಾರವರ ಬಲಗಾಲು ಮುರಿದಿದ್ದು ದ್ವಿಚಕ್ರ ವಾಹನ ಸವಾರ ಕೃಷ್ಣಮೂರ್ತಿ ಹಣೆಗೆ ಹಾಗೂ ಈತನ ಪತ್ನಿ ಕವಿತಾರವರ ಹಣೆಗೆ ಪೆಟ್ಟು ಬಿದ್ದಿರುತ್ತದೆ.
ಸದರಿ ಮೂವರು ಗಾಯಾಳುಗಳನ್ನು ಕೆಶಿಪ್ ಆಂಬುಲೆನ್ಸ್ ಮೂಲಕ ಮಿಡಿಗೇಶಿ ರಕ್ಷಣ ಸಿಬ್ಬಂದಿ ಹಾಗೂ ಸಾರ್ವಜನಿಕರ ನೆರವಿನೊಂದಿಗೆ ಮಧುಗಿರಿ ಪಟ್ಟಣದಲ್ಲಿ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜೈನ್ಸ್ ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
