ವಿಶ್ವವಿದ್ಯಾಲಯದಲ್ಲಿ ಭೂ ದಿನ ಆಚರಣೆ ..!!

ತುಮಕೂರು:

      ಬದಲಾವಣೆ ಜಗದ ನಿಯಮ ನಾಗರೀಕತೆ ಹೆಚ್ಚಿದಂತೆ ಹೇಗೆ ಅವನತಿ ಕಾಣುತ್ತಿದೆ ಇದು ನಿಜಕ್ಕು ದುರಂತ. ನಮ್ಮ ಜೀವನದಲ್ಲಿ ಬದಲಾವಣೆ ಅನಿವಾರ್ಯ ಆದರೆ ಈ ನಮ್ಮ ಬದಲಾವಣೆಯಿಂದ ಯಾವುದೇ ಜೀವಿಗಳಿಗೆ ಮತ್ತು ನಮ್ಮ ಭೂಮಿಗೆ ಯಾವುದೆ ರೀತಿಯ ತೊಂದರೆಗಳಾಗಬಾರದು ಎಂದು ತುಮಕೂರು ವಿಶ್ವವಿದ್ಯಾನಿಯ ಕುಲಪತಿಗಳಾದ ಪ್ರೊ.ವೈ ಎಸ್ ಸಿದ್ದೇಗೌಡ ನುಡಿದರು.

     ಭುಮಿ ದಿನದ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಯ ತುಮಕೂರು, ಸಮಾಕಾರ್ಯ ಅಧ್ಯಯನ ಮತ್ತು ಸಂಶೋಧನ ವಿಭಾಗ , ಸ್ನಾತಕೋತ್ತರ ಪರಿಸರ ಅಧ್ಯಯನ ಮತ್ತು ಸಂಶೋಧನ ವಿಭಾಗ , ಹಾಗೂ ಸಿಜ್ಞಾ ಯುವ ಸಂವಾದ ಕೇಂದ್ರ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ಸಾಕ್ಷ್ಯಚಿತ್ರ ಪ್ರದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಮನುಷ್ಯ ಜೀವನದಲ್ಲಿ ತಪ್ಪು ಎಂದು ತಿಳಿದಿದ್ದರು ಮತ್ತು ಮತ್ತೆ ತಪ್ಪು ಮಾಡುತ್ತಲೇ ಇದ್ದಾನೆ ಇದು ಜೀವ ಸಂಕುಲ ಮತ್ತು ಭೂಮಿಯ ಮೇಲೆ ವ್ಯತಿರಿಕ್ತವಾದ ಪರಿಣಾಮವನ್ನುಂಟು ಮಾಡುತ್ತಿದೆ. ಭೂಮಿಯಲ್ಲಿ ಸಮತೊಲನವನ್ನು ಕಾಪಾಡುವುದು ಗುರಿಯಾಗಬೇಕಿದೆ. ಯುವ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಭೂಮಿ ಅತ್ಯಂತ ಕ್ಲಿಷ್ಟಕರವಾದ ಸಂದಿಗ್ದ ಪರಿಸ್ಥಿತಿಯಲ್ಲಿದೆ. ಪ್ರತಿಯೊಬ್ಬರು ಪ್ರಜ್ಞಾವಂತರಾಗಬೇಕು ಇಲ್ಲದಿದ್ದರೆ ಮನುಷ್ಯರಿಗೆ ಭೂಮಿಯಲ್ಲಿ ಉಳಿಗಾಲವಿಲ್ಲ.

      ಪ್ರತಿಯೊಬ್ಬರಿಗೂ ಭೂಮಿ ಮತ್ತು ಪರಿಸರದ ಬಗ್ಗೆ ಜವಾಬ್ದಾರಿಗಳು ಹೆಚ್ಚಬೇಕು. ಮನುಷ್ಯ ಭೂಮಿಯನ್ನು ಬಿಟ್ಟರೆ ಬೆರೆಲ್ಲು ಬದುಕುವುದು ಕಷ್ಟ. ಇರುವ ಸಂಪನ್ಮೂಲವನ್ನು ಸಮತೋಲನದಲ್ಲಿ ಬಳಕೆ ಮಾಡಿಕೊಂಡು ಘನತೆಯುಳ್ಳ ವ್ಯಕ್ತಿಯಾಗಬೇಕು. ಪರಿಸರದ ಬಗ್ಗೆ ಇಚ್ಛಾಶಕ್ತಿ ಕಡಿಮೆಯಾಗುತ್ತಿರುವುದು ದುರಂತ ಎಂದು ಆತಂಕ ವ್ಯಕ್ತಪಡಿಸಿದರು.

        ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಪರಿಸರ ಸ್ನೇಹಿ ವಸ್ತ್ರ ವಿನ್ಯಾಸಕಿ ಶಮ. ಎಂ ರವರು ನಾವು ಬದುಕುತ್ತಿರುವ ಭೂಮಿಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ, ನಮ್ಮ ಪ್ರಪಂಚದಲ್ಲಿ ಭೂಮಿಯಲ್ಲಿ ಮಾತ್ರ ಜೀವಸಂಕುಲವನ್ನು ನಾವು ಕಾಣಬಹುದು. ಆದರೆ ಮಾನವನ ಅತಿಯಾದ ದುರಾಸೆಗಳಿಗೆ ನಮ್ಮ ಜೀವ ಸಂಕುಲ ಮತ್ತು ಭೂಮಿಗೆ ಹಾನಿಯಾಗುತ್ತಿದೆ. ಜೀವವೈವಿದ್ಯತೆಯಲ್ಲಿ ಏರುಪೇರಾಗುತ್ತಿದೆ.

        ಭೂಮಿಯಲ್ಲಿ ಅಸಮತೋಲನ ಎದುರಾಗಿದೆ. ಮನುಷ್ಯ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸದೆ ಜೀವ ಜ್ಞಾನವನ್ನು ಪಡೆಯುವಲ್ಲಿ ವಿಫಲನಾಗುತ್ತಿದ್ದಾನೆ. ನಿಸರ್ಗಕ್ಕೆ ಬೇಕಿರುವ ಆಹಾರವನ್ನು ತಾನಾಗೆ ತಯಾರಿಸಿಕೊಳ್ಳುತ್ತದೆ ಆದರೆ, ಮನುಷ್ಯ ಇಲ್ಲಿ ಅವುಗಳನ್ನು ಬದಲಾವಣೆ ಮಾಡುತ್ತಿದ್ದಾನೆ ಇದು ದುರಂತ. ಭೂಮಿಯಲ್ಲಿ ಶೇ 70 ರಷ್ಟು ಪ್ರಾಣಿಗಳು ಈಗಾಗಲೆ ಅಂತ್ಯ ಕಂಡಿವೆ ಇನ್ನುಳಿದ ಶೇ 25 ರಷ್ಟನ್ನಾದರು ಉಳಿಸಿಕೊಂಡು ಹೋಗುವ ಜವಾಬ್ದಾ ನಮ್ಮದಾಗಬೇಕು ಇಲ್ಲದಿದ್ದರೆ ಮಾನವನ ಅಂತ್ಯದ ದಿನಗಳು ದೂರವೇನಿಲ್ಲ. ವಾತಾವರಣದ ಬದಲಾವಣೆಯಾಗುತ್ತಿದ್ದು ಸಮತೋಲನವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಬೇಕು ಎಂದರು.

       ಸಮಾಜ ಕಾರ್ಯ ಅಧ್ಯಯನ ವಿಭಾಗದ ದ ಅಧ್ಯಕ್ಷರಾದ ಕೆ ಜಿ ಪರಶುರಾಮರವರು ಮಾತನಾಡುತ್ತ, ಇಂದು ನಮ್ಮ ಭೂಮಿ ತುಂಬಾ ದುರಂತದಲ್ಲಿದೆ ನಾವು ಭೂಮಿಯ ದಿನವನ್ನು ಆಚರಣೆ ಮಾಡುವಷ್ಟರ ಮಟ್ಟಿಗೆ ಬಂದಿದ್ದೇವೆ. ಮಾನವನ ಅತಿಯಾಸೆಗಳು ಈ ಸ್ಥಿತಿಗೆ ತಂದಿಟ್ಟಿವೆ ಎಚ್ಚೆತ್ತುಕೊಳ್ಳದ್ದಿದ್ದರೆ ಆಪತ್ತು ತಪ್ಪಿದ್ದಲ್ಲ. ಮನುಷ್ಯನ ಆಸೆಗಳಿಗೆ ಮಿತಿ ಇಲ್ಲದಂತಾಗಿದ್ದು ಮುಂದಿನ ದಿನಗಳಲ್ಲಿ ಪ್ರಾಣಿ ಸಂಕುಲ ಮತ್ತು ಜೀವವೈವಿದ್ಯತೆಯನ್ನು ಸಮತೋಲನದಲ್ಲಿರಿಸದಿದ್ದರೆ ಭೂಮಿಯ ಮೇಲೆ ಮನುಷ್ಯನಿಗೆ ಉಳಿಗಾಲವಿಲ್ಲ ಎಂದರು.

         ಸಿಜ್ಞಾ ಯುವ ಸಂವಾದ ಕೇಂದ್ರದ ಜ್ಞಾನ ಸಿಂಧು ಸ್ವಾಮಿ ವಿದ್ಯಾರ್ಥಿಗಳೊಂದಿಗೆ ಗ್ರೀನ್ ಸಾಕ್ಷ್ಯಾಚಿತ್ರ ತೋರಿಸಿ ಸಂವಾದ- ಚರ್ಚೆಮಾಡಿದರುಪರಿಸರವನ್ನು ಉಳಿಸುವ ಜಾಗೃತ ಮನಸ್ಥಿತಿ ನಮ್ಮೆಲ್ಲರಲ್ಲೂ ಬರಬೇಕು. ಪ್ರಪಂಚದಾದ್ಯಂತ 100 ಕೋಟಿ ಜನಕ್ಕೆ ಒಳ್ಳೆಯ ಪೌಷ್ಟಿಕ ಆಹಾರಸಿಗುತ್ತಿಲ್ಲ ಪ್ರತಿದಿನ 5000 ಜನ ಕುಡಿಯುವ ನೀರಿನ ಅಭಾವದಿಂದ ಸಾಯುತ್ತಿದ್ದಾರೆ.

        ನಮ್ಮ ಜೀವಿತಾವಧಿಯ ಅಮೂಲ್ಯ ಸಮಯವನ್ನುಭೋಗಜೀವನಕ್ಕಾಗಿ ಕಳೆಯುತ್ತಿದ್ದೇವೆ ಪರಿಸರದ ಅಸಮತೋಲನದಿಂದಾಗಿ ಸಮುದ್ರದ ಸೂಕ್ಷ್ಮಣುಜೀವಿಗಳು ಸಾಯುತ್ತಿವೆ ಇದರಿಂದಪರಿಸರದಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತಿದೆ ಪ್ರಪಂಚದ ಶೇ.2 ರಷ್ಟು ಜನ ಜಾಗತಿಕ ಆರ್ಥಿಕತೆಯನ್ನು ನಿಯಂತ್ರಣ ಮಾಡುತ್ತಿದ್ದಾರೆಈಗಾಗಲೇ ನಮ್ಮ ತುಮಕೂರು ಕರ್ನಾಟಕದಲ್ಲಿ ಮಾಲಿನ್ಯಯುಕ್ತ ನಗರದಲ್ಲಿ 2 ನೇ ಸ್ಥಾನದಲ್ಲಿದೆ ಒಬ್ಬ ಮನುಷ್ಯ ಆರೋಗ್ಯವಂತ ಬದುಕುಸಾಗಿಸಬೇಕಾದರೆ 8 ಮರಗಳ ಅವಶ್ಯವಿದೆ ಅದ್ದರಿಂದ ಎಲ್ಲರು ಮರಗಳನ್ನು ನೆಡುವುದರ ಮೂಲಕ ಪರಿಸರದ ಸಮತೋಲನೆಗೆಸಹಕಾರಿಯಾಗಬೇಕು ಇವತ್ತಿನ ಯಾವ ಸರ್ಕಾರಗಳು ಸಹ ಪರಿಸರಾತ್ಮಕ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ವಿಫಲವಾಗಿವೆ ಎಲ್ಲ ಸರ್ಕಾರಗಳಯೊಜನೆಗಳು ಸಹ ಕೇವಲ ಬಂಡವಾಳಶಾಹಿಗಳ ಪರವಾಗಿವೆ ಅದ್ದರಿಂದ ಪ್ರತಿಯೊಬ್ಬರೂ ಕೂಡ ಈ ಪರಿಸರಾತ್ಮಕ ಸಮಸ್ಯೆಗಳನ್ನು ನಮ್ಮಸಮಸ್ಯೆಯೆಂದು ಭಾವಿಸಿದರೆ ಆಗ ಎನಾದರೂ ಬದಲಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

        ಕಾರ್ಯಕ್ರಮದಲ್ಲಿ ಪರಿಸರ ಅಧ್ಯಯನ ವಿಭಾಗ ಸಂಯೋಜಕರಾದ ಡಾ. ರಾಜನಾಯ್ಕ, ಸಿಜ್ಞಾ ಯುವ ಸಂವಾದ ಕೇಂದ್ರದ ಸಂಯೋಜಕಿ ಕಾವ್ಯಶ್ರೀ ಬೆಟ್ಟದಬಯಲು, ಹಾಗೂ ಬಸವ, ಚಂದ್ರಕಾಂತ ಸ್ವಾಮಿ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link