ಕೊರಟಗೆರೆ
ಸರ್ಕಾರದ ಜನಪರ ಕಾರ್ಯಕ್ರಮಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಿನ್ನಡೆ ಅನುಭವಿಸುತ್ತಿವೆ. ಬಯಲು ಮುಕ್ತ ಶೌಚಾಲಯ ಯೋಜನೆ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಶೇ.30 ಕ್ಕೂ ಹೆಚ್ಚು ಇನ್ನೂ ಪೂರ್ಣಗೊಳ್ಳದೆ ಬಾಕಿಇರುವುದು ದುರಾದೃಷ್ಠಕರ ವಿಚಾರ ಎಂದು ತಾ,ಪಂ ಅದ್ಯಕ್ಷ ಕೆಂಪರಾಮಯ್ಯ ತಾಲ್ಲೂಕ್ ಮಟ್ಟದ ಅಧಿಕಾರಿಗಳ ವಿರುದ್ದ ಕಿಡಿಕಾಡಿದರು.
ತಾಲ್ಲೂಕಿನ ಹೊಳವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕ್ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದಿ, ಆರೋಗ್ಯ ಮತ್ತು ಕುಟುಂಬ ಇಲಾಖೆಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಶೇ.100ಕ್ಕೆ 100 ಶೌಚಾಲಯ ನಿರ್ಮಾಣ ಮಾಡುವ ದ್ಯೇಯೋದ್ದೇಶ ಹೊಂದಿದ್ದರು ಅಧಿಕಾರಿಗಳ ನಿರ್ಲಕ್ಷದಿಂದ ಪೂರ್ಣಗೊಳ್ಳದೆ ಶೇ.30ಕ್ಕೂ ಹೆಚ್ಚು ಬಾಕಿ ಉಳಿದಿರುವುದು ವಿಷಾದನೀಯ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕ್ ಮಟ್ಟದ ಅಧಿಕಾರಿಗಳು ಬಯಲು ಮುಕ್ತ ಶೌಚಾಲಯದಡಿ ತಾಲ್ಲೂಕಿನ ಬಹುತೇಕ ಗ್ರಾ,ಪಂ ಗಳಲ್ಲಿ ಯೋಜನೆ ಯಶಸ್ವಿಗೊಳಿಸಿದ್ದೇವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ, ಆದರೆ ಈ ವ್ಯಾಪ್ತಿಯಲ್ಲಿ ಶೇ.30ಕ್ಕೂ ಹೆಚ್ಚು ಕುಟುಂಬಗಳಲ್ಲಿ ಅನೇಕ ಕಾರಣಗಳಿಂದ ಹಾಗೂ ಅಧಿಕಾರಿಗಳ ನಿರ್ಲಕ್ಷದಿಂದ ಶೌಚಾಲಯಗಳು ಪೂರ್ಣಗೊಳ್ಳದೆ ಜೊತೆಗೆ ಪೂರ್ಣಗೊಂಡಿರುವ ಬಹಳಷ್ಟು ಶೌಚಾಲಯಗಳಿಗೆ ಹಣ ಪಾವತಿಸದೆ ಇರುವುದು ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ಹರಡಿ ಶೌಚಾಲಯಗಳು ನಿರ್ಮಾಣದಲ್ಲಿ ಕುಂಠಿತವಾಗಿದೆ ಜೊತೆಗೆ ಶೌಚಾಲಯ ನಿರ್ಮಾಣಕ್ಕೆ ಜಾಗವಿಲ್ಲದ ಕುಟುಂಬಗಳಿಗೆ ಸಾಮೂಹಿಕ ಶೌಚಾಲಯದ ಅವಶ್ಯಕತೆ ಇದೆ ಈ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದರು.
ತಾ,ಪಂ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಮಾತನಾಡಿ ಗ್ರಾಮೀಣ ಪ್ರದೇಶದ ಪ್ರತಿ ಗ್ರಾಮಗಳಲ್ಲಿ ಬಯಲು ಶೌಚಮುಕ್ತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳುವ ಮನಸ್ಥಿತಿಗೆ ಗ್ರಾಮಸ್ಥರು ಬರುವಂತಾಗಬೇಕು, ಜೊತೆಗೆ ವಿದ್ಯಾರ್ಥಿಗಳು ಶೌಚಾಲಯ ನಿರ್ಮಾಣ ವಿಚಾರದಲ್ಲಿ ಪ್ರಮುಖ ಪಾತ್ರ ವಹಿಸಿ ಪೋಷಕಿಗೆ ಅರಿವು ಮೂಡಿಸಿ ಶೌಚಾಲಯ ನಿರ್ಮಾಣಗಳಿಗೆ ಕೈಜೋಡಿಸಿ ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗಬೇಕು ಎಂದರು.
ಕೊರಟಗೆರೆ ಕೃಷಿ ಸಹಾಯಕ ನಿರ್ದೇಶಕ ನಾಗರಾಜು ಮಾತನಾಡಿ ನಮ್ಮರಾಜ್ಯ ಸರಕಾರವು ಬಯಲುಶೌಚಾಲಯ ಮುಕ್ತ ಮಾಡುವ ನಿಟ್ಟಿನಲ್ಲಿರಾಜ್ಯದ್ಯಂತ ಸ್ವಚ ಭಾರತ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.ನಾವೇಲ್ಲರೂ ಆರೋಗ್ಯವಾಗಿರುವ ನಿಟ್ಟಿನಲ್ಲಿ ಪ್ರತಿಗ್ರಾಮ ಗ್ರಾಮಗಳಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.ಪ್ರತಿಯೋಬ್ಬ ಪ್ರಜೆಯು ಕೊಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಂದಿನ ಪೀಳಿಗೆ ಬಯಲು ಶೌಚ ಮುಕ್ತ ಮಾಡಲು ಸಹಕಾರ ನೀಡಬೇಕು ಎಂದು ತಿಳಿಸಿದರು.
ತಾಲ್ಲೂಕ್ ಅಕ್ಷರ ದಾಸೋಹ ಸಹ ನಿರ್ದೇಶಕ ರಘು ಮಾತನಾಡಿ ತಾಲೂಕಿನ ವ್ಯಾಪ್ತಿಯ ಸರ್ಕಾರಿ ಸ್ವಾಮ್ಯದ ಅಂಗನವಾಡಿ, ಸರಕಾರಿ ಶಾಲೆಗಳು, ಕಚೇರಿಗಳಲ್ಲಿ ಶೌಚಾಲಯಗಳ ನಿರ್ಮಾಣ ಇನ್ನೂ ಬಹುತೇಕ ಬಾಕಿ ಉಳಿದಿದ್ದು, ಅಧಿಕಾರಿಗಳು ಹೆಚ್ಚು ಗಮನ ಹರಿಸಿ ಶೌಚಾಲಯಗಳ ನಿರ್ಮಾಣ ಮಾಡುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ತೋಟಗಾರಿಕೆ ಅಧಿಕಾರಿ ಪುಷ್ಪಲತಾ, ಎಇಇ ರಂಗಪ್ಪ, ಮಂಜುನಾಥ್. ಸಿಡಿಪಿಓ ಶಮಂತಕಾ, ಪಿಡಿಒ ಚಲುವರಾಜು ,ಗ್ರಾಪಂ ಅಧ್ಯಕ್ಷ ರವಿಕುಮಾರ್, ಸದಸ್ಯರಾದ ಉಮೇಶ್, ಶಶಿಕುಮಾರ್, ಹೊಳವನಹಳ್ಳಿ ವೈದ್ಯಧಿಕಾರಿ ಗಣೇಶ್, ಮುಖ್ಯ ಶಿಕ್ಷಕರಾದ ಲೋಕೇಶ್, ಧನ್ಯಕುಮಾರ್, ಮುಖಂಡರಾದ ನರಸಪ್ಪ, ಜಯರಾಮ್, ಮಜರ್ ಪಾಷ, ಗಂಗಣ್ಣ, ಪುಟ್ಟರಾಜು, ಅಧಿಕಾರಿಗಳಾದ ಅಮ್ಮೂಜಮ್ಮ, ಅರುಣ್, ಕಣ್ಣಪ್ಪ, ವಿನೋದ್, ಜಯರಾಮಯ್ಯ ತ್ಯಾಗರಾಜು, ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
