- ಬೆಂಗಳೂರು
ಕುಶಲ ಕರ್ಮಿಗಳಿಂದ ನೇರವಾಗಿ ಗ್ರಾಹಕರಿಗೆ ಕರಕುಶುಲ ವಸ್ತುಗಳನ್ನು ತಲುಪಿಸುವ “ದ ಸೋಕ್ ಮಾರ್ಕೇಟ್”ಗೆ ಇಂದು ಚಾಲನೆ ದೊರೆತಿದೆ.
ಕರ್ನಾಟಕ ಚಿತ್ತಕಲಾ ಪರಿಷತ್ತಿನ ಆವರಣದಲ್ಲಿ ಡಿಸೆಂಬರ್ 2ರ ವರೆಗೆ ವಿಶೇಷ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಚಿತ್ತಾರ ಮತ್ತು ಗ್ರ್ಯಾಂಡ್ ಫ್ಲೀ ಮಾರ್ಕೆಟ್ ಆಯೋಜಿಸಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಕರಕುಶಲ ವಸ್ತುಗಳು ಮತ್ತು ಕಲಾಪ್ರಕಾರಗಳು ಒಂದೇ ಸೂರಿನಡಿ ಕುಶಲಕರ್ಮಿಗಳೇ ಗ್ರಾಹಕರಿಗೆ ತಲುಪಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ನಟಿ ಯಮುನ ಶ್ರೀನಿಧಿ ಈ ಮೇಳೆ ದೇಶದ ಸಂಸ್ಕೃತಿಯನ್ನೇ ತನ್ನೋಳಗೆ ಮೇಳೈಸಿಕೊಂಡಿದೆ. ಸಂಗ್ರಹಯೋಗ್ಯ ಕರಕುಶಲ ವಸ್ತುಗಳ ಭಂಡಾರ ಇದಾಗಿದೆ. ಇನ್ನೂ ಅಪರೂಪದ ಕೈ ಮಗ್ಗದ ವಸ್ತುಗಳನ್ನು ಕುಶಲ ಕರ್ಮಿಗಳಿಂದ ನೇರವಾಗಿ ಖರೀದಿ ಮಾಡವುದು ಸಂತಸ ತಂದಿದೆ ಎಂದರು.
ಭಾರತ ದೇಶದ ಮೂಲೆ ಮೂಲೆಗಳಲ್ಲೂ ಅತ್ಯಂತ ಹೆಮ್ಮೆಯ ಕರಕುಶಲ ಕಲಾವಿದರಿದ್ದಾರೆ. ಅವರ ಬಹುತೇಕ ಕಲಾಕೃತಿಗಳು ಹಾಗೂ ಕಲಾಪ್ರಕಾರಗಳು ಮರೆಯಾಗುವ ಆತಂಕವನ್ನು ಎದುರಿಸುತ್ತಿವೆ. ಇಂತಹ ಪ್ರಾಚೀನ ಹಾಗೂ ಭಾರತ ದೇಶದ ಸಾಂಸ್ಕøತಿಕ ಭವ್ಯತೆಯನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ “ದ ಸೋಕ್ ಮಾರ್ಕೇಟ್” ಎಂಬ ಹೆಸರಿನಲ್ಲಿ ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಲಾಗಿದೆ. ನೇಕಾರರು ಮತ್ತು ಕುಶಲಕರ್ಮಿಗಳು ಉತ್ಪಾದಿಸುವ ಉತ್ಪನ್ನಗಳಿಗೆ ದೇಶದ ಮುಖ್ಯ ನಗರಗಳಲ್ಲಿ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ನೇರವಾಗಿ ಅವರ ಉತ್ಪನ್ನಗಳು ಗ್ರಾಹಕರಿಗೆ ತಲುಪಿಸುವಂತೆ ವ್ಯವಸ್ಥೆ ಮಾಡುವುದು ಮತ್ತು ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇಕಾರರೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭವನ್ನು ಹೆಚ್ಚು ಗಳಿಸುವಂತೆ ಮಾಡುವ ಉದ್ದೇಶವನ್ನು ದ ಸೋಕ್ ಮಾರ್ಕೇಟ್ ಪ್ರದರ್ಶನ ಹಾಗೂ ಮಾರಾಟ ಮೇಳ ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
