ಚಿತ್ರದುರ್ಗ:
ಗ್ರಾಮೀಣ ಯುವಪೀಳಿಗೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲುವುದಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಎಲ್ಲವನ್ನು ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಬದುಕು ಕಟ್ಟಿಕೊಳ್ಳಿ ಎಂದು ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ವಿಷ್ಣು ಶಿಬಿರಾರ್ಥಿಗಳಿಗೆ ತಿಳಿಸಿದರು.
ನೆಹರು ಯುವ ಕೇಂದ್ರ, ಪ್ರಿಯದರ್ಶಿನಿ ಮಹಿಳಾ ಮಂಡಲಿ, ಜೀನಸ್ ಅರ್ಬನ್ ಅಂಡ್ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಹೊಳಲ್ಕೆರೆ ರಸ್ತೆಯಲ್ಲಿರುವ ಸಿಲಿಕಾನ್ ಕಂಪ್ಯೂಟರ್ಸ್ನಲ್ಲಿ ಸೋಮವಾರ ಅಲ್ಪಾವಧಿ ಕಂಪ್ಯೂಟರ್ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಹಳ್ಳಿಗಳ ಉದ್ದಾರದಿಂದ ಮಾತ್ರ ಭಾರತ ಅಭಿವೃದ್ದಿಯಾಗಲು ಸಾಧ್ಯ ಎನ್ನುವುದಾದರೆ ಮೊದಲು ಗ್ರಾಮೀಣ ಯುವಕ-ಯುವತಿಯರು ತಮ್ಮಲ್ಲಿರುವ ಕೌಶಲ್ಯವನ್ನು ಬಳಸಿಕೊಂಡು ನೆಹರು ಯುವ ಕೇಂದ್ರದಿಂದ ಸಿಗುವ ತರಬೇತಿಗಳನ್ನು ಪಡೆದು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.
ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್.ಸತ್ಯಣ್ಣ ಮಾತನಾಡುತ್ತ ಇಡೀ ಜಗತ್ತೆ ಕಂಪ್ಯೂಟರೀಕರಣಗೊಂಡಿರುವ ಈ ಕಾಲದಲ್ಲಿ ಎಲ್ಲರೂ ಅನಿವಾರ್ಯವಾಗಿ ಕಂಪ್ಯೂಟರ್ ಕಲಿಯಲೇಬೇಕಾಗಿದೆ. ಕಂಪ್ಯೂಟರ್ ಯಾರು ಕಲಿಯುವುದಿಲ್ಲವೋ ಅವರೆ ನಿಜವಾದ ಅನಕ್ಷರಸ್ಥರು ಎಂದು ಕಂಪ್ಯೂಟರ್ನ ಮಹತ್ವವನ್ನು ಶಿಬಿರಾರ್ಥಿಗಳಿಗೆ ತಿಳಿಸಿದರು.
ಎಲ್ಲಾ ಕ್ಷೇತ್ರವೂ ಕಂಪ್ಯೂಟರೀಕರಣಗೊಂಡಿರುವುದರಿಂದ ಯಾರು ಅಧೀರರಾಗುವುದು ಬೇಡ. ಮೊದಲು ಕಂಪ್ಯೂಟರ್ ಜ್ಞಾನ ತಿಳಿದುಕೊಳ್ಳಿ ನಂತರ ಕೆಲಸ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.
ಸಿಲಿಕಾನ್ ಕಂಪ್ಯೂಟರ್ನ ಮುಖ್ಯಸ್ಥ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ ಕಂಪ್ಯೂಟರ್ ಜಗತ್ತನ್ನೆ ಆಳುವಂತಾಗಿದೆ. ಶಿಕ್ಷಣದ ಜೊತೆ ಅತ್ಯಮೂಲ್ಯವಾಗಿರುವ ಕಂಪ್ಯೂಟರ್ ಜ್ಞಾನವನ್ನು ನಿಮ್ಮದಾಗಿಸಿಕೊಂಡರೆ ಜೀನವನಕ್ಕಾಗಿ ಯಾರು ಹೆದರುವ ಅವಶ್ಯಕತೆಯಿಲ್ಲ. ಫೇಸ್ಬುಕ್, ವಾಟ್ಸ್ಪ್ ಇವುಗಳ ಉಪಯೋಗವೂ ಜಾಸ್ತಿಯಿದೆ. ಕುಳಿತಲ್ಲಿಯೇ ಜಗತ್ತಿನಲ್ಲಿ ನಡೆಯುವ ಆಗು ಹೋಗುಗಳನ್ನು ತಿಳಿದುಕೊಳ್ಳುವ ಅವಕಾಶವಿದೆ. ಕಾಲ ಬದಲಾದಂತೆ ವಿಜ್ಞಾನ-ತಂತ್ರಜ್ಞಾನವೂ ಶರವೇಗದಲ್ಲಿ ಬೆಳೆಯುತ್ತಿದೆ. ಅದಕ್ಕಾಗಿ ಕಂಪ್ಯೂಟರ್ ಕಲಿಯಿರಿ ಒಂದಲ್ಲ ಒಂದು ಕಡೆ ನಿಮಗೆ ಕೆಲಸ ಸಿಗುತ್ತದೆ ಎಂದು ಶಿಬಿರಾರ್ಥಿಗಳಿಗೆ ಹೇಳಿದರು.
ಹಣದ ಹಿಂದೆ ಓಡುವ ಬದಲು ಕೆಲಸದ ಹಿಂದೆ ಓಡಿ. ಆಗ ಹಣ ನಿಮ್ಮ ಹಿಂದೆ ಓಡಿ ಬರುತ್ತದೆ. ಪುಸ್ತಕಗಳನ್ನು ಓದಿ ಜ್ಞಾನವನ್ನು ಬೆಳೆಸಿಕೊಳ್ಳಿ. ಮಾಹಿತಿ ತಂತ್ರಜ್ಞಾನಕ್ಕೆ ಬುನಾದಿ ಹಾಕಿದ ರಾಜೀವ್ಗಾಂಧಿರವರನ್ನು ಎಲ್ಲರೂ ಸ್ಮರಿಸಿಕೊಳ್ಳಲೇಬೇಕು. ಶಿಕ್ಷಣದ ಜೊತೆ ವೃತ್ತಿ ಶಿಕ್ಷಣವನ್ನು ಕಲಿತು ಗುರು-ಹಿರಿಯರು, ತಂದೆ-ತಾಯಿಗಳನ್ನು ಗೌರವಿಸುವ ಗುಣ ಬೆಳೆಸಿಕೊಳ್ಳಿ ಎಂದು ತಿಳಿಸಿದರು.ಸಿಲಿಕಾನ್ ಕಂಪ್ಯೂಟರ್ಸ್ನ ವ್ಯವಸ್ಥಾಪಕ ಸೋಮಶೇಖರ್ ವೇದಿಕೆಯಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
